
ಮಥುರೆ (ಉತ್ತರ ಪ್ರದೇಶ) – ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದ ಮೊಕದ್ದಮೆಯ ಮೇಲೆ ಬರುವ ಮೆ ೧೯ ರಂದು ನ್ಯಾಯಾಲಯ ತೀರ್ಪು ನೀಡಲಿದೆ. ಕಟರಾ ಕೇಶವ ದೇವ ಮಂದಿರದ ದೇವತೆ ಶ್ರೀಕೃಷ್ಣ ವಿರಾಜಮಾನ ಮತ್ತು ಅನ್ಯ ೬ ಜನರು ರಂಜನಾ ಅಗ್ನಿಹೋತ್ರಿ ಇವರ ಮೂಲಕ ದಾಖಲಿಸಿರುವ ಮನವಿಯ ಮೇಲೆ ತೀರ್ಪು ನೀಡುವರು.
ಮನವಿ ದಾಖಲಿಸಿದವರ ಅಂಬೋಣ ಏನೆಂದರೆ, ಮೊಘಲ್ ಬಾದಶಹನ ಆದೇಶದ ನಂತರ ೧೬೬೯ – ೭೦ ರಲ್ಲಿ ಭಗವಾನ ಶ್ರೀಕೃಷ್ಣನ ಮಂದಿರ ನಾಶಗೊಳಿಸಿ ಅಲ್ಲಿಯ ೧೩ – ೩೭ ಎಕರೆ ಭೂಮಿಯಲ್ಲಿ ಶಾಹಿ ಈದಗಾಹ ಮಸೀದಿ ಕಟ್ಟಲಾಗಿದೆ. ಹಾಗಾಗಿ ಈ ಮಸೀದಿಯಲ್ಲಿ ಉತ್ಖನನ ಮಾಡುವ ಅನುಮತಿ ಕೇಳಲಾಗಿದೆ. ಏನಾದರೂ ಇಲ್ಲಿ ಉತ್ಖನನ ಕಾರ್ಯ ನಡೆದರೆ, ಆಗ ಅಲ್ಲಿ ಭಗವಾನ ಶ್ರೀಕೃಷ್ಣನು ಜನಿಸಿದ ಕಾರಾಗೃಹ ಸಿಗುವುದು ಎಂದು ಮನವಿಯಲ್ಲಿ ಹೇಳಲಾಗಿದೆ.
Mathura court concludes hearing in Krishna Janmabhoomi – Shahi Idgah Mosque case, reserves verdict till 19th Mayhttps://t.co/2yGwiGvYoC
— OpIndia.com (@OpIndia_com) May 6, 2022
ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಬಾಕಿ
ಶ್ರೀಕೃಷ್ಣ ಜನ್ಮಭೂಮಿಯ ಸಂದರ್ಭದಲ್ಲಿ ಒಂದು ಮನವಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು. ಈ ಮನವಿಯಲ್ಲಿ, ಹಿಂದೂಗಳ ಜೊತೆ ವಿಶ್ವಾಸಘಾತ ನಡೆಸಿ ಯಾವುದೇ ಒಪ್ಪಂದ ಇಲ್ಲದೆ ಶ್ರೀ ಕೃಷ್ಣ ಜನ್ಮಭೂಮಿಯನ್ನು ಮಸೀದಿಗೆ ನೀಡಲಾಯಿತು ಎಂದು ಆರೋಪಿಸಲಾಗಿತ್ತು. ಆದ್ದರಿಂದ ನ್ಯಾಯಾಲಯವು ಆಗಸ್ಟ್ ೧೨.೧೯೬೮ ರಂದು ಶಾಹಿ ಈದ್ಗಾ ಮಸೀದಿಗೆ ಯಾವುದೇ ಒಪ್ಪಂದ ಇಲ್ಲದೆ ಮಂದಿರದ ಜಾಗ ನೀಡಲಾಗಿದೆ ಎಂದು ಘೋಷಿಸಬೇಕು ಮತ್ತು ಈ ಜಾಗ ಹಿಂದೂಗಳಿಗೆ ಹಿಂತಿರುಗಿಸಬೇಕು.
ಅಕ್ರಮ ಮತಾಂತರದ ವಿರುದ್ಧ ಕಾನೂನು ಮಾತ್ರ ಸಾಲದು, ಹಿಂದೂಗಳೂ ಪಾತ್ರ ವಹಿಸಬೇಕು !
‘ಆರ್.ಎಸ್.ಎಸ್. ನೋಂದಣಿಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕಂತೆ !’
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!