
ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ರಾಜ್ಯದಲ್ಲಿನ ಧಾರ್ಮಿಕ ಸ್ಥಳಗಳಲ್ಲಿದ್ದ ೧ ಲಕ್ಷ ಭೋಂಗಾಗಳನ್ನು ತೆರವುಗೊಳಿಸಲಾಗಿದೆ, ಎಂಬ ಮಾಹಿತಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ನೀಡಿದ್ದಾರೆ. ‘ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭೋಂಗಾಗಳನ್ನು ತೆರವುಗೊಳಿಸಿದ್ದರಿಂದ ರಾಜ್ಯದಲ್ಲಿನ ಗದ್ದಲವು ಕಡಿಮೆಯಾಗಿದೆ. ಭೋಂಗಾಗಳನ್ನು ಇಳಿಸುವ ಸಮಯದಿಂದ ಇಲ್ಲಿಯ ವರೆಗೆ ಯಾವುದೇ ವಾದಗಳಾಗಲಿಲ್ಲ’, ಎಂದೂ ಅವರು ಹೇಳಿದ್ದಾರೆ.
“उत्तर प्रदेशात १ लाख भोंगे उतरवले, रस्त्यावरील नमाजही बंद”, योगी आदित्यनाथ यांचा दावाhttps://t.co/VHksntopgk#CMYogiAdityanath #Uttarpradesh #LoudSpeaker
— LoksattaLive (@LoksattaLive) May 4, 2022
ಯೋಗಿ ಆದಿತ್ಯನಾಥರು ಮಾತನಾಡುತ್ತ, ‘ನಾವು ಕೇವಲ ಭೋಂಗಾಗಳನ್ನೇ ತೆರವುಗೊಳಿಸಿದೇ ರಸ್ತೆಯ ಮೇಲೆ ನಡೆಯುವ ನಮಾಜುಪಠಣದ ಬಗ್ಗೆಯೂ ಯೋಗ್ಯ ಮಾರ್ಗವನ್ನು ಹುಡುಕಿದ್ದೇವೆ’ ಎಂದು ಹೇಳಿದರು. ನಾವು ‘ರಸ್ತೆಯ ಮೇಲೆ ನಮಾಜು ಪಠಣ ಮಾಡಲು ಸಾಧ್ಯವಿಲ್ಲ’, ಎಂಬ ಸೂಚನೆಯನ್ನು ನೀಡಿದ್ದೆವು. ಅದರಂತೆಯೇ ಈಗ ರಸ್ತೆಯ ಮೇಲೆ ಯಾರೂ ನಮಾಜು ಪಠಣ ಮಾಡುವುದಿಲ್ಲ. ಉತ್ತರಪ್ರದೇಶದಲ್ಲಿ ಕೋಟ್ಯಾಂತರ ಮುಸಲ್ಮಾನರು ವಾಸಿಸುತ್ತಾರೆ. ಆದರೆ ಈದ್ನಂದು ಎಲ್ಲಿಯೂ ರಸ್ತೆಯ ಮೇಲೆ ನಮಾಜುಪಠಣವಾಗಿರುವುದು ಕಂಡುಬಂದಿಲ್ಲ. ಈಗ ಜನರೂ ಮುಂದೆಬಂದು ಸರಕಾರದ ಆದೇಶಗಳನ್ನು ಪಾಲಿಸುತ್ತಿದ್ದು ರಸ್ತೆಗಳ ಬದಲು ಮನೆಯಲ್ಲಿ ಅಥವಾ ಮಸೀದಿಗಳಲ್ಲಿ ನಮಾಜು ಪಠಣ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಸಂಪಾದಕೀಯ ನಿಲುವುಯೋಗಿ ಆದಿತ್ಯನಾಥರಿಗೆ ಅಭಿನಂದನೆಗಳು ! ಯೋಗಿ ಆದಿತ್ಯನಾಥರಿಗೆ ಮಾಡಲು ಸಾಧ್ಯವಾಗಿದ್ದನ್ನು ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗಳು ಮಾಡಿ ತೋರಿಸಬೇಕಿದೆ ಮತ್ತು ಸಮಾಜದಲ್ಲಿನ ಅಶಾಂತಿ ಮತ್ತು ಶಬ್ದಮಾಲಿನ್ಯವನ್ನು ದೂರಗೊಳಿಸಬೇಕಿದೆ ! |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation