ಕಾಗದಪತ್ರಗಳಿಲ್ಲದೆ ಹೋದರೆ ಮಜಾರನ್ನು ತೆಗೆದುಹಾಕಲಾಗುವುದು !

ಆಗ್ರಾ (ಉತ್ತರಪ್ರದೇಶ) – ಇಲ್ಲಿನ ಆಗ್ರಾ ಕ್ಯಾಂಟ ರೈಲು ನಿಲ್ದಾಣದಲ್ಲಿರುವ ಬಾಬಾ ಭೂರೆ ಶಾಹ ಮಜಾರ್ ಕಟ್ಟಡದ ಮಾಲಿಕತ್ವದ ಕುರಿತು ದಾಖಲೆಗಳನ್ನು ಸಲ್ಲಿಸುವಂತೆ ಆಡಳಿತವು ನೋಟಿಸ್ ಕಳುಹಿಸಲಾಗಿದೆ. ಮೇ ೧೩ ರವರೆಗೂ ಆ ದಾಖಲೆಗಳನ್ನು ಸಲ್ಲಿಸುವಂತೆ ಹೇಳಲಾಗಿದೆ. ಅನಂತರ ಅದರೆ ಮೇಲೆ ಅಕ್ರಮ ಕಟ್ಟಡವೆಂದು ಕ್ರಮ ಕೈಗೊಳ್ಳಬೇಕೇ ಅಥವಾ ಇಲ್ಲವೇ, ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಈಗ ಮಜಾರ್ನ ವ್ಯವಸ್ಥೆಯನ್ನು ನೋಡಿಕೊಳ್ಳುವ ಸಜ್ಜಾದಾ ನಾಶಿನರವರಿಗೆ ಈ ನೊಟೀಸ ಅನ್ನು ಕಳುಹಿಸಲಾಗಿದೆ.
(ಸೌಜನ್ಯ : VK News)
ರೈಲ್ವೆಗೆ ಸೇರಿದ ಜಮೀನಿನ ಮೇಲಿರುವ ನೂರೀ ಮಸೀದಿಗೆ ಮತ್ತೊಂದು ನೊಟೀಸನ್ನು ಕಳುಹಿಸಲಾಗಿದೆ. ಮಸೀದಿಯ ಇಮಾಮನಿಗೆ ಕಳುಹಿಸಲಾದ ನೊಟೀಸ್ನಲ್ಲಿ, ಈ ಮಸೀದಿಯು ರೈಲ್ವೆಗೆ ಸೇರಿದ ಜಮೀನಿನ ಮೇಲೆ ಅಕ್ರಮವಾಗಿ ಕಟ್ಟಲಾಗಿದ್ದು ಅದನ್ನು ತೆಗೆದು ಹಾಕುವುದು ಅಗತ್ಯವಾಗಿದೆ. ಈ ಮಸೀದಿಯನ್ನು ತೆಗೆದು ಹಾಕಿ ಅದನ್ನು ಬೇರೆಯ ಕಡೆ ಸ್ಥಳಾಂತರಗೊಳಿಸಲಾಗುವುದು. (ಮಸೀದಿಯೇ ಅಕ್ರಮವಾಗಿರುವಾಗ ಅದನ್ನು ಮತ್ತೊಂದು ಕಡೆ ಏಕೆ ಸ್ಥಳಾಂತರಗೊಳಿಸಬೇಕು ? ಒಂದು ವೇಳೆ ಆಡಳಿತವು ಹಾಗೆ ಮಾಡಿದರೆ, ಯಾರು ತಮ್ಮ ಮನೆಗಳನ್ನು ಅಕ್ರಮವಾಗಿ ಕಟ್ಟಿಕೊಂಡಿದ್ದಾರೋ ಅವರೂ ಕೂಡ ಬೇರೆಯ ಕಡೆ ಮನೆ ನೀಡುವಂತೆ ಬೇಡಿಕೆ ಮಾಡುತ್ತಾರೆ. ಇದರ ಒಂದು ಪರಂಪರೆ ನಿರ್ಮಾಣವಾಗುವುದು, ‘ಅಕ್ರಮವಾದ ಮನೆ ಕಟ್ಟಿ ಹಾಗೂ ಸಕ್ರಮ ಮನೆಗಳನ್ನು ಪಡೆಯಿರಿ !’ – ಸಂಪಾದಕರು)
ಸಂಪಾದಕೀಯ ನಿಲುವುಇಷ್ಟು ವರ್ಷಗಳವರೆಗೂ ಅಲ್ಲಿ ಮಜಾರ್ ಇದ್ದರೂ ಈ ಮೊದಲು ಈ ರೀತಿಯ ಪ್ರಯತ್ನವನ್ನು ಆಡಳಿತವು ಏಕೆ ಮಾಡಲಿಲ್ಲ ? ಈ ಮಜಾರನ್ನು ರೈಲು ನಿಲ್ದಾಣದಲ್ಲಿ ಹೇಗೆ ಕಟ್ಟಲಾಯಿತು ? ಅದಕ್ಕೆ ಯಾರು ಹೊಣೆ ? ಎಂಬ ಬಗ್ಗೆ ಕೂಡ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳಬೇಕು ! |
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಕೇರಳಮ್ನ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ಮೊದಲ ಮಹಿಳಾ ಶಾಸಕಿ ರೆಸ್ಟೋರೆಂಟ್ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಮಾಡಿದ್ದಕ್ಕೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!
ಒಡಿಶಾ: ಇಂಜಿನಿಯರ್ನಿಂದ ಕೋಟ್ಯಂತರ ರೂಪಾಯಿಗಳ ಅಕ್ರಮ ಆಸ್ತಿ ವಶ