ಕಾಗದಪತ್ರಗಳಿಲ್ಲದೆ ಹೋದರೆ ಮಜಾರನ್ನು ತೆಗೆದುಹಾಕಲಾಗುವುದು !

ಆಗ್ರಾ (ಉತ್ತರಪ್ರದೇಶ) – ಇಲ್ಲಿನ ಆಗ್ರಾ ಕ್ಯಾಂಟ ರೈಲು ನಿಲ್ದಾಣದಲ್ಲಿರುವ ಬಾಬಾ ಭೂರೆ ಶಾಹ ಮಜಾರ್ ಕಟ್ಟಡದ ಮಾಲಿಕತ್ವದ ಕುರಿತು ದಾಖಲೆಗಳನ್ನು ಸಲ್ಲಿಸುವಂತೆ ಆಡಳಿತವು ನೋಟಿಸ್ ಕಳುಹಿಸಲಾಗಿದೆ. ಮೇ ೧೩ ರವರೆಗೂ ಆ ದಾಖಲೆಗಳನ್ನು ಸಲ್ಲಿಸುವಂತೆ ಹೇಳಲಾಗಿದೆ. ಅನಂತರ ಅದರೆ ಮೇಲೆ ಅಕ್ರಮ ಕಟ್ಟಡವೆಂದು ಕ್ರಮ ಕೈಗೊಳ್ಳಬೇಕೇ ಅಥವಾ ಇಲ್ಲವೇ, ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಈಗ ಮಜಾರ್ನ ವ್ಯವಸ್ಥೆಯನ್ನು ನೋಡಿಕೊಳ್ಳುವ ಸಜ್ಜಾದಾ ನಾಶಿನರವರಿಗೆ ಈ ನೊಟೀಸ ಅನ್ನು ಕಳುಹಿಸಲಾಗಿದೆ.
(ಸೌಜನ್ಯ : VK News)
ರೈಲ್ವೆಗೆ ಸೇರಿದ ಜಮೀನಿನ ಮೇಲಿರುವ ನೂರೀ ಮಸೀದಿಗೆ ಮತ್ತೊಂದು ನೊಟೀಸನ್ನು ಕಳುಹಿಸಲಾಗಿದೆ. ಮಸೀದಿಯ ಇಮಾಮನಿಗೆ ಕಳುಹಿಸಲಾದ ನೊಟೀಸ್ನಲ್ಲಿ, ಈ ಮಸೀದಿಯು ರೈಲ್ವೆಗೆ ಸೇರಿದ ಜಮೀನಿನ ಮೇಲೆ ಅಕ್ರಮವಾಗಿ ಕಟ್ಟಲಾಗಿದ್ದು ಅದನ್ನು ತೆಗೆದು ಹಾಕುವುದು ಅಗತ್ಯವಾಗಿದೆ. ಈ ಮಸೀದಿಯನ್ನು ತೆಗೆದು ಹಾಕಿ ಅದನ್ನು ಬೇರೆಯ ಕಡೆ ಸ್ಥಳಾಂತರಗೊಳಿಸಲಾಗುವುದು. (ಮಸೀದಿಯೇ ಅಕ್ರಮವಾಗಿರುವಾಗ ಅದನ್ನು ಮತ್ತೊಂದು ಕಡೆ ಏಕೆ ಸ್ಥಳಾಂತರಗೊಳಿಸಬೇಕು ? ಒಂದು ವೇಳೆ ಆಡಳಿತವು ಹಾಗೆ ಮಾಡಿದರೆ, ಯಾರು ತಮ್ಮ ಮನೆಗಳನ್ನು ಅಕ್ರಮವಾಗಿ ಕಟ್ಟಿಕೊಂಡಿದ್ದಾರೋ ಅವರೂ ಕೂಡ ಬೇರೆಯ ಕಡೆ ಮನೆ ನೀಡುವಂತೆ ಬೇಡಿಕೆ ಮಾಡುತ್ತಾರೆ. ಇದರ ಒಂದು ಪರಂಪರೆ ನಿರ್ಮಾಣವಾಗುವುದು, ‘ಅಕ್ರಮವಾದ ಮನೆ ಕಟ್ಟಿ ಹಾಗೂ ಸಕ್ರಮ ಮನೆಗಳನ್ನು ಪಡೆಯಿರಿ !’ – ಸಂಪಾದಕರು)
ಸಂಪಾದಕೀಯ ನಿಲುವುಇಷ್ಟು ವರ್ಷಗಳವರೆಗೂ ಅಲ್ಲಿ ಮಜಾರ್ ಇದ್ದರೂ ಈ ಮೊದಲು ಈ ರೀತಿಯ ಪ್ರಯತ್ನವನ್ನು ಆಡಳಿತವು ಏಕೆ ಮಾಡಲಿಲ್ಲ ? ಈ ಮಜಾರನ್ನು ರೈಲು ನಿಲ್ದಾಣದಲ್ಲಿ ಹೇಗೆ ಕಟ್ಟಲಾಯಿತು ? ಅದಕ್ಕೆ ಯಾರು ಹೊಣೆ ? ಎಂಬ ಬಗ್ಗೆ ಕೂಡ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳಬೇಕು ! |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation