ಕಾಗದಪತ್ರಗಳಿಲ್ಲದೆ ಹೋದರೆ ಮಜಾರನ್ನು ತೆಗೆದುಹಾಕಲಾಗುವುದು !

ಆಗ್ರಾ (ಉತ್ತರಪ್ರದೇಶ) – ಇಲ್ಲಿನ ಆಗ್ರಾ ಕ್ಯಾಂಟ ರೈಲು ನಿಲ್ದಾಣದಲ್ಲಿರುವ ಬಾಬಾ ಭೂರೆ ಶಾಹ ಮಜಾರ್ ಕಟ್ಟಡದ ಮಾಲಿಕತ್ವದ ಕುರಿತು ದಾಖಲೆಗಳನ್ನು ಸಲ್ಲಿಸುವಂತೆ ಆಡಳಿತವು ನೋಟಿಸ್ ಕಳುಹಿಸಲಾಗಿದೆ. ಮೇ ೧೩ ರವರೆಗೂ ಆ ದಾಖಲೆಗಳನ್ನು ಸಲ್ಲಿಸುವಂತೆ ಹೇಳಲಾಗಿದೆ. ಅನಂತರ ಅದರೆ ಮೇಲೆ ಅಕ್ರಮ ಕಟ್ಟಡವೆಂದು ಕ್ರಮ ಕೈಗೊಳ್ಳಬೇಕೇ ಅಥವಾ ಇಲ್ಲವೇ, ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಈಗ ಮಜಾರ್ನ ವ್ಯವಸ್ಥೆಯನ್ನು ನೋಡಿಕೊಳ್ಳುವ ಸಜ್ಜಾದಾ ನಾಶಿನರವರಿಗೆ ಈ ನೊಟೀಸ ಅನ್ನು ಕಳುಹಿಸಲಾಗಿದೆ.
(ಸೌಜನ್ಯ : VK News)
ರೈಲ್ವೆಗೆ ಸೇರಿದ ಜಮೀನಿನ ಮೇಲಿರುವ ನೂರೀ ಮಸೀದಿಗೆ ಮತ್ತೊಂದು ನೊಟೀಸನ್ನು ಕಳುಹಿಸಲಾಗಿದೆ. ಮಸೀದಿಯ ಇಮಾಮನಿಗೆ ಕಳುಹಿಸಲಾದ ನೊಟೀಸ್ನಲ್ಲಿ, ಈ ಮಸೀದಿಯು ರೈಲ್ವೆಗೆ ಸೇರಿದ ಜಮೀನಿನ ಮೇಲೆ ಅಕ್ರಮವಾಗಿ ಕಟ್ಟಲಾಗಿದ್ದು ಅದನ್ನು ತೆಗೆದು ಹಾಕುವುದು ಅಗತ್ಯವಾಗಿದೆ. ಈ ಮಸೀದಿಯನ್ನು ತೆಗೆದು ಹಾಕಿ ಅದನ್ನು ಬೇರೆಯ ಕಡೆ ಸ್ಥಳಾಂತರಗೊಳಿಸಲಾಗುವುದು. (ಮಸೀದಿಯೇ ಅಕ್ರಮವಾಗಿರುವಾಗ ಅದನ್ನು ಮತ್ತೊಂದು ಕಡೆ ಏಕೆ ಸ್ಥಳಾಂತರಗೊಳಿಸಬೇಕು ? ಒಂದು ವೇಳೆ ಆಡಳಿತವು ಹಾಗೆ ಮಾಡಿದರೆ, ಯಾರು ತಮ್ಮ ಮನೆಗಳನ್ನು ಅಕ್ರಮವಾಗಿ ಕಟ್ಟಿಕೊಂಡಿದ್ದಾರೋ ಅವರೂ ಕೂಡ ಬೇರೆಯ ಕಡೆ ಮನೆ ನೀಡುವಂತೆ ಬೇಡಿಕೆ ಮಾಡುತ್ತಾರೆ. ಇದರ ಒಂದು ಪರಂಪರೆ ನಿರ್ಮಾಣವಾಗುವುದು, ‘ಅಕ್ರಮವಾದ ಮನೆ ಕಟ್ಟಿ ಹಾಗೂ ಸಕ್ರಮ ಮನೆಗಳನ್ನು ಪಡೆಯಿರಿ !’ – ಸಂಪಾದಕರು)
ಸಂಪಾದಕೀಯ ನಿಲುವುಇಷ್ಟು ವರ್ಷಗಳವರೆಗೂ ಅಲ್ಲಿ ಮಜಾರ್ ಇದ್ದರೂ ಈ ಮೊದಲು ಈ ರೀತಿಯ ಪ್ರಯತ್ನವನ್ನು ಆಡಳಿತವು ಏಕೆ ಮಾಡಲಿಲ್ಲ ? ಈ ಮಜಾರನ್ನು ರೈಲು ನಿಲ್ದಾಣದಲ್ಲಿ ಹೇಗೆ ಕಟ್ಟಲಾಯಿತು ? ಅದಕ್ಕೆ ಯಾರು ಹೊಣೆ ? ಎಂಬ ಬಗ್ಗೆ ಕೂಡ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳಬೇಕು ! |
ಬಿಸೂರ (ಸಾಂಗ್ಲಿ) ಇಲ್ಲಿ ಮತಾಂಧರ ಕಿರುಕುಳದಿಂದ ಗ್ರಾಮದಿಂದ ಪಲಾಯನ ಮಾಡಲು ಸಿದ್ಧತೆಯಲ್ಲಿ 10 ಹಿಂದೂ ಕುಟುಂಬಗಳು !
ಕೊಚ್ಚಿ (ಕೇರಳಮ್) : ೬ ಬಾಂಗ್ಲಾದೇಶಿ ವಲಸಿಗರ ಬಂಧನ !
ನಿಮ್ಮ ಬಳಿ ಸಮವಸ್ತ್ರ ಇದೆ ಎಂದಮಾತ್ರಕ್ಕೆ ನೀವು ಏನು ಬೇಕಾದರೂ ಮಾಡಬಹುದೇ?
ಇಸ್ಲಾಂ ಧರ್ಮ ಸ್ವೀಕರಿಸಿದ ತಕ್ಷಣ ‘ಹಿಂದುಳಿದ ವರ್ಗದ ಮುಸ್ಲಿಂ’ ಸ್ಥಾನಮಾನ ಸಿಗುವುದಿಲ್ಲ!
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!