‘ಮಲಬಾರ ಗೊಲ್ಡ’ನ ಅಕ್ಷಯ ತೃತೀಯ ಜಾಹಿರಾತನ್ನು ವಿರೋಧಿಸಿದ ಹಿಂದೂಗಳು !

ಮುಂಬಯಿ – ಎಮ್.ಪಿ. ಅಹಮದರವರ ಮಾಲೀಕತ್ವದ ‘ಮಲಬಾರ ಗೋಲ್ಡ ಆಂಡ್ ಡಾಯಮೆಂಡ್ಸ’ ಎಂಬ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಮಾರಾಟ ಮಾಡುವ ಕಂಪನಿಯು ಅಕ್ಷಯ ತೃತೀಯದ ನಿಮಿತ್ತ ಒಡವೆಗಳ ಜಾಹೀರಾತನ್ನು ಪ್ರಸಾರ ಮಾಡಿದೆ. ಈ ಜಾಹೀರಾತಿನಲ್ಲಿ ನಟಿ ಕರೀನಾ ಕಪೂರ ಖಾನರವರು ಒಡವೆಗಳನ್ನು ಧರಿಸಿರುವುದನ್ನು ತೋರಿಸಲಾಗಿದೆ; ಆದರೆ ಅವರ ಹಣೆಯಲ್ಲಿ ಕುಂಕುಮವಿಲ್ಲ. ಹಿಂದೂಗಳ ಹಬ್ಬಗಳಿಗಾಗಿ ಒಡವೆಗಳ ಜಾಹೀರಾತು ಮಾಡುವಾಗ ನಟಿ ಕುಂಕುಮವಿಟ್ಟುಕೊಳ್ಳದೆ ಇರುವುದರಿಂದ ‘ಮಲಬಾರ ಗೋಲ್ಡ’ನ ಅಕ್ಷಯ ತೃತೀಯ ಜಾಹೀರಾತನ್ನು ಹಿಂದೂಗಳು ವಿರೋಧಿಸಿದ್ದಾರೆ. (‘ಮುಸಲ್ಮಾನರ ಮಾಲೀಕತ್ವದ ಕಂಪನಿಯು ಈದ ನ ಕಾಲದಲ್ಲಿ ಜಾಹೀರಾತನ್ನು ಪ್ರಸಾರ ಮಾಡುವಾಗ ಮುಸಲ್ಮಾನರ ಉಡಿಗೆ ತೊಡಿಗೆಯ ಬಗ್ಗೆ ಖಂಡಿತವಾಗಿ ವಿಚಾರ ಮಾಡುತ್ತಾರೆ; ಆದರೆ ಅದೇ ಹಿಂದೂಗಳ ಹಬ್ಬಗಳ ಸಮಯದಲ್ಲಿ ಜಾಹೀರಾತನ್ನು ಪ್ರಸಾರ ಮಾಡುವಾಗ ಹಿಂದೂಗಳ ಉಡಿಗೆ ತೊಡಿಗೆ ಹಾಗೂ ಅವರ ಸಂಸ್ಕೃತಿಯ ವಿಚಾರವನ್ನು ಏಕೆ ಮಾಡುವುದಿಲ್ಲ ?’, ಎಂದು ಹಿಂದೂಗಳು ಈ ಕಂಪನಿಗೆ ವಿಚಾರಿಸಬೇಕು ! – ಸಂಪಾದಕರು)
Hindus protest against ‘Malabar Gold’s advt. for Akshay Tritiya showing Kareena Kapoor Khan without bindi
Lets pledge to give our business only to those who respect Hindu customs during Hindu festivals.#No_Bindi_No_Business #Boycott_MalabarGold pic.twitter.com/tV1xvnRR7r
— HinduJagrutiOrg (@HinduJagrutiOrg) April 22, 2022
ಹೆಚ್ಚಿನ ಹಿಂದೂ ಸ್ತ್ರೀಯರು ಹಣೆಯಲ್ಲಿ ಕುಂಕುಮ ಅಥವಾ ಬಿಂದಿಗೆ ಇಟ್ಟುಕೊಳ್ಳುತ್ತಾರೆ. ಹಿಂದೂಗಳ ಹಬ್ಬದ ದಿನದಂದು ಅದಕ್ಕೆ ವಿಶೇಷವಾದ ಮಹತ್ವವಿರುತ್ತದೆ; ಆದರೆ ‘ಮಲಬಾರ ಗೋಲ್ಡ ಆಂಡ್ ಡೈಮೆಂಡ್ಸ’ ಈ ಕಂಪನಿಯು ತನ್ನ ಜಾಹೀರಾತಿನಲ್ಲಿ ನಟಿ ಕರೀನಾ ಕಪೂರ ಖಾನರವರನ್ನು ಬರೀ ಹಣೆಯಲ್ಲಿ ತೋರಿಸಿ ಹಿಂದೂಗಳ ಪರಂಪರೆಯನ್ನು ಘಾಸಿಗೊಳಿಸಲು ಪ್ರಯತ್ನಿಸಿದ್ದಾರೆ. ಇದು ಹಿಂದು ಧರ್ಮದ ಅವಮಾನವಾಗಿದೆ. ಆದ್ದರಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಅನೇಕ ಧರ್ಮಪ್ರೇಮೀ ಹಿಂದೂಗಳು ‘ಮಲಬಾರ ಗೋಲ್ಡ’ಅನ್ನು ಟೀಕಿಸುತ್ತಿದ್ದಾರೆ.
ಸಂಪಾದಕೀಯ ನಿಲುವುಈ ಮೊದಲು ಕೂಡ ದೀಪಾವಳಿಯಲ್ಲಿ ಅನೇಕ ಕಂಪನಿಗಳು ತಮ್ಮ ಜಾಹೀರಾತಿನಲ್ಲಿ ಮಹಿಳೆಯರನ್ನು ಹಣೆಯಲ್ಲಿ ಕುಂಕುಮವಿಟ್ಟುಕೊಳ್ಳದೆ ತೋರಿಸಿದ್ದರು. ಅನಂತರ ಹಿಂದೂಗಳು ವಿರೋಧಿಸಿದ ಬಳಿಕ ಆ ಜಾಹೀರಾತನ್ನು ಬದಲಾಯಿಸಿ ಮಹಿಳೆಯರು ಕುಂಕುಮವಿಟ್ಟುಕೊಂಡಿರುವುದನ್ನು ತೋರಿಸಲಾಯಿತು. ಜಾಹಿರಾತಿನ ಮಾಧ್ಯಮದಿಂದ ಹಿಂದೂಗಳ ಪರಂಪರೆಗೆ ಘಾಸಿ ಮಾಡುವ ಸಂಚಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! |
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ
ಸರಯೂ ನದಿಯಲ್ಲಿ ಮಾಂಸ-ಮದ್ಯ ಸೇವನೆ; ಮೂವರು ಬಂಧನ : Saryu River Case
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಅನ್ಯಾಯದ ಬಂಧನದ ವಿರುದ್ಧ ಅಲ್ಪಸಂಖ್ಯಾತರಿಂದ ಪ್ರತಿಭಟನೆ !
ರಾಜ್ಯದಲ್ಲಿ ಶಾಲೆಗಳ ಹತ್ತಿರ ಪಿಜ್ಜಾ-ಬರ್ಗರ್ ಮಾರಾಟಕ್ಕೆ ಶೀಘ್ರದಲ್ಲೇ ನಿಷೇಧ !