ಪಾಕಿಸ್ತಾನವು ಅಫಘಾನಿಸ್ತಾನದಲ್ಲಿ ಮಾಡಿರುವ ‘ಏರ್ ಸ್ಟ್ರಾಯಿಕ್’ನ ಪ್ರಕರಣ

ಕಾಬೂಲ (ಅಫಘಾನಿಸ್ತಾನ) – ಪಾಕಿಸ್ತಾನದ ವಾಯುದಳವು ಏಪ್ರಿಲ್ ೧೬ರ ರಾತ್ರಿ ಅಫಘಾನಿಸ್ತಾನದ ಖೊಸ್ತ ಮತ್ತು ಕುನಾರ ಪ್ರಾಂತ್ಯದಲ್ಲಿ ನಡೆಸಿದ ‘ಏರ್ ಸ್ಟ್ರಾಯಿಕ್’ನಲ್ಲಿ (ನಿಯಂತ್ರಿತ ಆಕ್ರಮಣದಲ್ಲಿ) ೪೭ ಜನರು ಮೃತರಾದರು. ಇದರಲ್ಲಿ ಮಹಿಳೆಯರು ಮತ್ತು ಚಿಕ್ಕ ಮಕ್ಕಳು ದೊಡ್ಡ ಪ್ರಮಾಣದಲ್ಲಿರುವುದರಿಂದ ತಾಲಿಬಾನ ಸರಕಾರವು ರೊಚ್ಚಿಗೆದ್ದಿದೆ. ತಾಲಿಬಾನಿನ ವಕ್ತಾರ ಜಬಿಉಲ್ಲಾಹ ಮುಜಾಹಿದ ಮಾಡಿರುವ ಟ್ವೀಟ್ನಲ್ಲಿ ‘ಪಾಕಿಸ್ತಾನವು ಇಂತಹ ಪ್ರಕರಣಗಳಲ್ಲಿ ಅಫಘಾನಿಸ್ತಾನದ ಸಹನೆಯನ್ನು ಪರೀಕ್ಷಿಸಬಾರದು. ಇಂತಹ ತಪ್ಪು ಮರುಕಳಿಸಿದರೆ ಅದರ ಪರಿಣಾಮವು ಗಂಭೀರವಾಗಿರಲಿದೆ. ಎರಡೂ ದೇಶಗಳ ನಡುವಿನ ಸಮಸ್ಯೆಗಳ ಮೇಲೆ ರಾಜಕೀಯ ಮಾರ್ಗದಿಂದ ಉಪಾಯ ಕಂಡುಹಿಡಿಯಬೇಕು’ ಎಂದು ಹೇಳಿದ್ದಾರೆ. ಪಾಕಿಸ್ತಾನದ ಆಕ್ರಮಣದ ನಂತರ ಸಾವಿರಾರು ಆಫಘಾನಿ ಜನರು ರಸ್ತೆಗಿಳಿದು ಪಾಕಿಸ್ತಾನಕ್ಕೆ ಧಿಕ್ಕಾರ ಹಾಕಿದರು. ಪಾಕಿಸ್ತಾನ ಸರಕಾರವು ಈ ಆಕ್ರಮಣದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ‘ಏರ್ ಸ್ಟ್ರಾಯಿಕ್’ನ ಮಾಧ್ಯಮದಿಂದ ‘ತಹರಿಕ-ಎ-ತಾಲಿಬಾನ ಪಾಕಿಸ್ತಾನ’ ಎಂಬ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕರನ್ನು ಗುರಿಯಾಗಿಸಲಾಗಿತ್ತು. ಈ ಹಿಂದೆಯೂ ಈ ಸಂಘಟನೆಯ ಭಯೋತ್ಪಾದಕರು ಪಾಕಿಸ್ತಾನದ ಸೈನ್ಯವನ್ನು ಗುರಿಯಾಗಿಸಿದ್ದರು.
The #Taliban warned #Pakistan over the recent airstrikes on the Khost and Kunar provinces of Afghanistan in which more than 40 civilians lost their lives.https://t.co/dSG2Ex6pdA
— Hindustan Times (@htTweets) April 17, 2022
ಅಫಘಾನಿಸ್ತಾನದ ವಿದೇಶಿ ಮಂತ್ರಾಲಯವು ಈ ಆಕ್ರಮಣವನ್ನು ತೀವ್ರ ಶಬ್ದಗಳಲ್ಲಿ ಧಿಕ್ಕರಿಸುತ್ತ ಪಾಕಿಸ್ತಾನದ ರಾಜದೂತ ಮನ್ಸೂರ್ ಅಹಮದ ಖಾನರಿಂದ ಸ್ಪಷ್ಟೀಕರಣ ಕೇಳಿದೆ.
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ಪಾಕ್ ಸೈನ್ಯವು ಕಾರ್ಗಿಲ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಮೃತದೇಹಗಳನ್ನು ಹಿಂದೂಗಳ ವಶಕ್ಕೆ ನೀಡಿತು !
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War
ಇರಾನ್ನಲ್ಲಿರುವ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳಬೇಕು! – ಭಾರತ : US Iran War
‘ಕಳೆದ ವರ್ಷ ನಡೆದ ಸಂಘರ್ಷವು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಒಳಸಂಚಾಗಿತ್ತು!’ (ಅಂತೆ) : Imran Khan Sister’s Claim