
ಕಾನಪುರ (ಉತ್ತರಪ್ರದೇಶ) – ಇಲ್ಲಿಯ ರತನಪುರ ಕಾಲೋನಿಯಲ್ಲಿ ೫ ದಿನಗಳ ಹಿಂದೆ ನಾಪತ್ತೆಯಾಗಿರುವ ಗೀತಾ ದೇವಿ ಎಂಬ ವಿವಾಹಿತ ಮಹಿಳೆಯ ಹತ್ಯೆಯನ್ನು ಆಕೆಯ ಪ್ರಿಯಕರ ಮುಖ್ತಾರ ಎಂಬಾತನು ಮಾಡಿರುವುದು ಬೆಳಕಿಗೆ ಬಂದಿದೆ. ಗೀತಾ ದೇವಿ ಇವರ ಮೃತದೇಹ ಭಾವುಪೂರ ಮೈಥಾ ಹತ್ತಿರದ ಚರಂಡಿಯಲ್ಲಿ ಎಸೆದಿರುವ ಬಗ್ಗೆ ಮುಖ್ತಾರ್ ಇವನು ವಶಕ್ಕೆ ಪಡೆದ ನಂತರ ಈ ಮಾಹಿತಿ ನೀಡಿದ. ಗೀತಾ ದೇವಿಯ ಪತಿ ಕೇಂದ್ರ ರಿಸರ್ವ್ ಪೊಲೀಸ್ ದಳದಲ್ಲಿ ಇದ್ದಾರೆ. ಮುಖ್ತಾರ ಗೀತಾ ದೇವಿಯ ತಾಯಿಯ ಊರಿನವನಾಗಿದ್ದ. ಇವರಿಬ್ಬರ ನಡುವೆ ವಿವಾಹ ಮೊದಲಿನಿಂದಲೂ ಪ್ರೇಮ ಸಂಬಂಧವಿತ್ತು. ಪತಿ ಮನೆಯಲ್ಲಿ ಇರದೆ ಇರುವಾಗ ಗೀತಾ ದೇವಿಯ ಮನೆಗೆ ಬರುತ್ತಿದ್ದನು. ‘ಗೀತಾ ದೇವಿ ಬೇರೆ ಯಾರ ಜೊತೆಗೆ ಸತತವಾಗಿ ಮಾತನಾಡುತ್ತಿರುವುದುರ ಸಿಟ್ಟಿನಿಂದ ನಾನು ಆಕೆಯ ಕತ್ತು ಹಿಸುಕಿ ಸಾಯಿಸಿದ್ದೇನೆ’, ಎಂದು ಮುಖ್ತಾರ್ ಒಪ್ಪಿಕೊಂಡಿದ್ದಾನೆ. ಈ ಹತ್ಯೆಯ ನಂತರ ಅವನಿಗೆ ಸಹಾಯ ಮಾಡಿರುವ ಬೇರೆ ಇಬ್ಬರನ್ನು ಪೊಲೀಸರು ಹುಡುಕುತ್ತಿದ್ದಾರೆ.
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ