
ನವದೆಹಲಿ – ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸರಕಾರವಿರುವಾಗ ೨೦೧೩ರಲ್ಲಿ ರಾಜ್ಯದಲ್ಲಿನ ೭ ಜಿಲ್ಲೆಗಳಲ್ಲಿ ನಡೆದ ಭಯೋತ್ಪಾದಕ ಆಕ್ರಮಣಕ್ಕೆ ಸಂಬಂಧಿಸಿದ ೧೪ ಖಟ್ಲೆಗಳನ್ನು ಹಿಂಪಡೆಯಲಾಗಿತ್ತು. ಇವುಗಳಲ್ಲಿನ ಕೆಲವು ಖಟ್ಲೆಗಳನ್ನು ಹಿಂಪಡೆಯಲು ನ್ಯಾಯಾಲಯವೇ ನಿರಾಕರಿಸಿತ್ತು. ಮುಂದೆ ಈ ಪ್ರಕರಣದಲ್ಲಿ ಈ ಆರೋಪಿಗಳಿಗೆ ಅಪರಾಧಿಗಳೆಂದು ೧೦ ವರ್ಷಗಳ ವರೆಗೆ ಶಿಕ್ಷೆಯಾಯಿತು. ಭಾಜಪವು ಈ ಹಿಂದೆ ಸಮಾಜವಾದಿ ಪಕ್ಷವು ಭಯೋತ್ಪಾದಕ ಆಕ್ರಮಣದಲ್ಲಿನ ಆರೋಪಿಗಳಿಗೆ ಸಹಾನುಭೂತಿ ತೋರಿಸಿದೆ ಎಂದು ಆರೋಪಿಸಿತ್ತು.
ಸಮಾಜವಾದಿ ಪಕ್ಷದ ಸರಕಾರವು ಹಿಂಪಡೆದಿರುವ ಖಟ್ಲೆಗಳಲ್ಲಿ ಲಕ್ಷ್ಮಣಪುರಿಯಲ್ಲಿನ ೬, ಕಾನಪೂರದಲ್ಲಿನ ೩, ಹಾಗೆಯೇ ವಾರಣಾಸಿ, ಗೋರಖಪುರ, ಬಿಜನೌರ, ರಾಮಪೂರ ಮತ್ತು ಬಾರಾಬಂಕಿಯಲ್ಲಿ ಹೀಗೆ ಪ್ರತಿಯೊಂದು ಕಡೆಗಳಲ್ಲಿ ೧ ಖಟ್ಲೆಯಿತ್ತು. ವಿಶೇಷವೆಂದರೆ ಮಾರ್ಚ ೫, ೨೦೧೩ರಲ್ಲಿ ಹಿಂಪಡೆಯಲಾದ ವಾರಣಾಸಿಯ ಖಟ್ಲೆಯು ಮಾರ್ಚ ೭, ೨೦೦೬ರಲ್ಲಿ ಅಲ್ಲಿನ ಸಂಕಟಮೋಚನ ದೇವಸ್ಥಾನ ಹಾಗೂ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿತ್ತು.
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ