
ನವದೆಹಲಿ – ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸರಕಾರವಿರುವಾಗ ೨೦೧೩ರಲ್ಲಿ ರಾಜ್ಯದಲ್ಲಿನ ೭ ಜಿಲ್ಲೆಗಳಲ್ಲಿ ನಡೆದ ಭಯೋತ್ಪಾದಕ ಆಕ್ರಮಣಕ್ಕೆ ಸಂಬಂಧಿಸಿದ ೧೪ ಖಟ್ಲೆಗಳನ್ನು ಹಿಂಪಡೆಯಲಾಗಿತ್ತು. ಇವುಗಳಲ್ಲಿನ ಕೆಲವು ಖಟ್ಲೆಗಳನ್ನು ಹಿಂಪಡೆಯಲು ನ್ಯಾಯಾಲಯವೇ ನಿರಾಕರಿಸಿತ್ತು. ಮುಂದೆ ಈ ಪ್ರಕರಣದಲ್ಲಿ ಈ ಆರೋಪಿಗಳಿಗೆ ಅಪರಾಧಿಗಳೆಂದು ೧೦ ವರ್ಷಗಳ ವರೆಗೆ ಶಿಕ್ಷೆಯಾಯಿತು. ಭಾಜಪವು ಈ ಹಿಂದೆ ಸಮಾಜವಾದಿ ಪಕ್ಷವು ಭಯೋತ್ಪಾದಕ ಆಕ್ರಮಣದಲ್ಲಿನ ಆರೋಪಿಗಳಿಗೆ ಸಹಾನುಭೂತಿ ತೋರಿಸಿದೆ ಎಂದು ಆರೋಪಿಸಿತ್ತು.
ಸಮಾಜವಾದಿ ಪಕ್ಷದ ಸರಕಾರವು ಹಿಂಪಡೆದಿರುವ ಖಟ್ಲೆಗಳಲ್ಲಿ ಲಕ್ಷ್ಮಣಪುರಿಯಲ್ಲಿನ ೬, ಕಾನಪೂರದಲ್ಲಿನ ೩, ಹಾಗೆಯೇ ವಾರಣಾಸಿ, ಗೋರಖಪುರ, ಬಿಜನೌರ, ರಾಮಪೂರ ಮತ್ತು ಬಾರಾಬಂಕಿಯಲ್ಲಿ ಹೀಗೆ ಪ್ರತಿಯೊಂದು ಕಡೆಗಳಲ್ಲಿ ೧ ಖಟ್ಲೆಯಿತ್ತು. ವಿಶೇಷವೆಂದರೆ ಮಾರ್ಚ ೫, ೨೦೧೩ರಲ್ಲಿ ಹಿಂಪಡೆಯಲಾದ ವಾರಣಾಸಿಯ ಖಟ್ಲೆಯು ಮಾರ್ಚ ೭, ೨೦೦೬ರಲ್ಲಿ ಅಲ್ಲಿನ ಸಂಕಟಮೋಚನ ದೇವಸ್ಥಾನ ಹಾಗೂ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿತ್ತು.
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ