
ನವದೆಹಲಿ – ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸರಕಾರವಿರುವಾಗ ೨೦೧೩ರಲ್ಲಿ ರಾಜ್ಯದಲ್ಲಿನ ೭ ಜಿಲ್ಲೆಗಳಲ್ಲಿ ನಡೆದ ಭಯೋತ್ಪಾದಕ ಆಕ್ರಮಣಕ್ಕೆ ಸಂಬಂಧಿಸಿದ ೧೪ ಖಟ್ಲೆಗಳನ್ನು ಹಿಂಪಡೆಯಲಾಗಿತ್ತು. ಇವುಗಳಲ್ಲಿನ ಕೆಲವು ಖಟ್ಲೆಗಳನ್ನು ಹಿಂಪಡೆಯಲು ನ್ಯಾಯಾಲಯವೇ ನಿರಾಕರಿಸಿತ್ತು. ಮುಂದೆ ಈ ಪ್ರಕರಣದಲ್ಲಿ ಈ ಆರೋಪಿಗಳಿಗೆ ಅಪರಾಧಿಗಳೆಂದು ೧೦ ವರ್ಷಗಳ ವರೆಗೆ ಶಿಕ್ಷೆಯಾಯಿತು. ಭಾಜಪವು ಈ ಹಿಂದೆ ಸಮಾಜವಾದಿ ಪಕ್ಷವು ಭಯೋತ್ಪಾದಕ ಆಕ್ರಮಣದಲ್ಲಿನ ಆರೋಪಿಗಳಿಗೆ ಸಹಾನುಭೂತಿ ತೋರಿಸಿದೆ ಎಂದು ಆರೋಪಿಸಿತ್ತು.
ಸಮಾಜವಾದಿ ಪಕ್ಷದ ಸರಕಾರವು ಹಿಂಪಡೆದಿರುವ ಖಟ್ಲೆಗಳಲ್ಲಿ ಲಕ್ಷ್ಮಣಪುರಿಯಲ್ಲಿನ ೬, ಕಾನಪೂರದಲ್ಲಿನ ೩, ಹಾಗೆಯೇ ವಾರಣಾಸಿ, ಗೋರಖಪುರ, ಬಿಜನೌರ, ರಾಮಪೂರ ಮತ್ತು ಬಾರಾಬಂಕಿಯಲ್ಲಿ ಹೀಗೆ ಪ್ರತಿಯೊಂದು ಕಡೆಗಳಲ್ಲಿ ೧ ಖಟ್ಲೆಯಿತ್ತು. ವಿಶೇಷವೆಂದರೆ ಮಾರ್ಚ ೫, ೨೦೧೩ರಲ್ಲಿ ಹಿಂಪಡೆಯಲಾದ ವಾರಣಾಸಿಯ ಖಟ್ಲೆಯು ಮಾರ್ಚ ೭, ೨೦೦೬ರಲ್ಲಿ ಅಲ್ಲಿನ ಸಂಕಟಮೋಚನ ದೇವಸ್ಥಾನ ಹಾಗೂ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿತ್ತು.
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ
ಸರಯೂ ನದಿಯಲ್ಲಿ ಮಾಂಸ-ಮದ್ಯ ಸೇವನೆ; ಮೂವರು ಬಂಧನ : Saryu River Case
ರಾಜ್ಯದಲ್ಲಿ ಶಾಲೆಗಳ ಹತ್ತಿರ ಪಿಜ್ಜಾ-ಬರ್ಗರ್ ಮಾರಾಟಕ್ಕೆ ಶೀಘ್ರದಲ್ಲೇ ನಿಷೇಧ !
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !