ಆಯುರ್ವೇದದಿಂದ ಮಗಳ ದೃಷ್ಟಿದೋಷ ಕಡಿಮೆಯಾಗಿ ಆಕೆಗೆ ಸರಿಯಾಗಿ ಕಾಣಿಸಲು ತೊಡಗಿದ್ದರಿಂದ ಕೀನ್ಯಾದ ಮಾಜಿ ಪ್ರಧಾನಿ ಭಾರತಕ್ಕೆ ಆಭಾರ ಮನ್ನಿಸಿದರು !

ಭಾರತದಲ್ಲಿ ಆಯುರ್ವೇದವನ್ನು ಕೀಳಾಗಿ ನೋಡುವವರಿಗೆ ಕಪಾಳಮೋಕ್ಷ ! ವಿದೇಶಿಯರು ಆಯುರ್ವೇದವನ್ನು ಹಾಡಿಹೊಗಳಿದಾಗ ಭಾರತದ ಜನರಿಗೆ ಅದರ ಮಹತ್ವ ತಿಳಿಯುತ್ತದೆ !

ನವದೆಹಲಿ – ಕೀನ್ಯಾದ ಮಾಜಿ ಪ್ರಧಾನಿ ರೈಲಾ ಓಡಿಂಗಾ ಇವರ ಮಗಳಿಗೆ ದೃಷ್ಟಿದೋಷ ಇರುವುದರಿಂದ ಆಕೆಗೆ ನೋಡಲು ತೊಂದರೆ ನಿರ್ಮಾಣವಾಗಿತ್ತು. ವಿವಿಧ ಉಪಚಾರ ಪದ್ಧತಿಯಿಂದ ಚಿಕಿತ್ಸೆ ಕೊಡಿಸಿದ ನಂತರ ಓಡಿಂಗಾ ಇವರು ಆಕೆಯನ್ನು ಕೊಚ್ಚಿ (ಕೇರಳ) ಇಲ್ಲಿಯ ಆಯುರ್ವೇದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ೩ ವಾರಗಳಿಂದ ಆಕೆಯ ಮೇಲೆ ಚಿಕಿತ್ಸೆ ನಡೆಯುತ್ತಿತ್ತು. ಈ ಚಿಕಿತ್ಸೆಯಿಂದ ಆಕೆಯ ದೃಷ್ಟಿದೋಷ ನಿವಾರಣೆಯಾಗಿ ಆಕೆಗೆ ಸ್ಪಷ್ಟವಾಗಿ ಕಾಣಲು ಆರಂಭವಾಯಿತು. ಇದರ ನಂತರ ಓಡಿಂಗಾ ಇವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಭಾರತದ ಈ ಪ್ರಾಚೀನ ಚಿಕಿತ್ಸಾ ಪದ್ಧತಿಯನ್ನು ಹೊಗಳಿದರು.