ಹುಡುಗಿಯರ ಸ್ವಾಭಿಮಾನಕ್ಕೆ ಕೈ ಹಾಕಿದರೆ ಕೈ ಕತ್ತರಿಸುತ್ತೇವೆ ! – ಸಮಾಜವಾದಿ ಪಕ್ಷದ ನಾಯಕಿ ರುಬಿನಾ ಖಾನುಮ

ಈ ರೀತಿ ಬೆದರಿಕೆ ಹಾಕಿ ಕಾನೂನನ್ನು ಕೈಗೆತ್ತಿಕೊಳ್ಳುವವರಿಗೆ ಕೂಡಲೆ ಬಂಧಿಸಿ ಜೈಲಿಗಟ್ಟುವುದು ಅವಶ್ಯಕವಾಗಿದೆ !- ಸಂಪಾದಕರು 

(ಎಡದಲ್ಲಿ) ಸಮಾಜವಾದಿ ಪಕ್ಷದ ನಾಯಕಿ ರುಬಿನಾ ಖಾನುಮ

ಅಲಿಗಡ (ಉತ್ತರಪ್ರದೇಶ) – ಭಾರತವು ವೈವಿಧ್ಯತೆವುಳ್ಳ ದೇಶವಾಗಿದೆ. ಹಣೆಗೆ ತಿಲಕವಿರಲಿ ಅಥವಾ ಪೇಟಾ ಇರಲಿ, ಬುರಖಾ ಇರಲಿ ಅಥವಾ ಹಿಜಾಬ್, ಇವೆಲ್ಲ ತಮ್ಮ ಸಂಸ್ಕ್ರತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿವೆ. ಅವುಗಳ ಮೇಲೆ ರಾಜಕೀಯ ಮಾಡಿ ವಿವಾದ ನಿರ್ಮಾಣ ಮಾಡುವುದು, ಅಂದರೆ ನೀಚತನದ ಪರಮಾವಧಿಯಾಗಿದೆ. ಮಹಿಳೆಯರನ್ನು ದುರ್ಬಲರೆಂದು ತಿಳಿದುಕೊಳ್ಳುವ ತಪ್ಪು ಮಾಡದಿರಿ. ಸರಕಾರ ಯಾವುದೇ ಪಕ್ಷದವರಾಗಿರಲಿ. ಸಹೋದರಿಯ-ಹುಡುಗಿಯರ ಸ್ವಾಭಿಮಾನಕ್ಕೆ ಕೈ ಹಾಕಿದರೆ ಝಾಂಸಿಯ ರಾಣಿ ಮತ್ತು ರಜಿಯಾ ಸುಲ್ತಾನ ಅಗಿ ಕೈ ಕತ್ತರಿಸಿ ಹಾಕುವೆವು. ಎಂದು ಸಮಾಜವಾದಿ ಪಕ್ಷದ ನಾಯಕಿ ಮತ್ತು ಇಲ್ಲಿಯ ನಗರ ಅಧ್ಯಕ್ಷೆ ರುಬಿನಾ ಖಾನುಮ ಇವರು ಕರ್ನಾಟಕದ ಹಿಜಾಬ್ ಪ್ರಕರಣ ಸಂದರ್ಭದಲ್ಲಿ ಟಿಪ್ಪಣಿ ಮಾಡಿದ್ದಾರೆ.