|

ಮೇರಠ (ಉತ್ತರಪ್ರದೇಶ) – ರಾಜ್ಯ ಸರಕಾರ ಕಳೆದ ೫ ವರ್ಷಗಳಲ್ಲಿ ಹಿಂದೂಗಿರಿ ಮಾಡುವ ಪ್ರಯತ್ನ ಮಾಡುತ್ತಿದೆ. ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಹಿಮದೂಗಿರಿ ನಡೆಯುತ್ತಿದೆ. ಇನ್ನು ಮತ್ತೆ ಭಾಜಪಾ ಸರಕಾರ ಬಂದರೆ, ಮೇರಠನಲ್ಲಿ ಅದು ಗೂಂಡಾಗಿರಿ ಮಾಡಲಿದೆ. ಮೇರಠನಲ್ಲಿ ಮುಸಲ್ಮಾನರು ಎಂದೂ ಯಾರಿಂದಲೂ ದಬ್ಬಾಳಿಕೆಗೆ ಒಳಗಾಗಿಲ್ಲ; ಆದರೆ ಈ ಸರಕಾರ ಮಾತ್ರ ಅವರನ್ನು ತುಳಿಯುವ ಮತ್ತು ಅವರ ಮೇಲೆ ದಬ್ಬಾಳಿಕೆ ನಡೆಸುವ ಪ್ರಯತ್ನ ನಡೆಸಿದೆ. ಇದು ತುಂಬಾ ಕೆಟ್ಟ ಪರಿಸ್ಥಿತಿಯಾಗಿದೆ; ಆದರೆ ಸರಕಾರದ ಜೊತೆಗೆ ಹೋರಾಡಲು ನಮ್ಮನ್ನು ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ, ಎಂದು ಇಲ್ಲಿಯ ಸಮಾಜವಾದಿ ಪಕ್ಷದ ಶಾಸಕ ರಫೀಕ್ ಅನ್ಸಾರಿ ಇವರು ಹೇಳಿಕೆ ನೀಡಿದ್ದಾರೆ. ಇದರ ಒಂದು ವಿಡಿಯೋ ಪ್ರಸಾರವಾಗಿದೆ.
Uttar Pradesh: SP MLA Rafiq Ansari accuses BJP of spreading ‘Hindu gardi’, says Yogi govt tried to suppress Muslimshttps://t.co/K9WDbImbhw
— OpIndia.com (@OpIndia_com) February 2, 2022
ಈ ಬಗ್ಗೆ ರಾಜ್ಯದ ಮಾಜಿ ಪೊಲೀಸ್ ಅಧಿಕಾರಿ ಮತ್ತು ಭಾಜಪಾದ ನಾಯಕ ಬ್ರಜಲಾಲ ಇವರು, ‘ಗೂಂಡಾ, ಗಲಭೆಕೋರರು, ನಿಪುಣ ಆರೋಪಿಗಳು ಇವರಿಗೆ ಸಮಾಜವಾದಿ ಪಕ್ಷದಿಂದ ಚುನಾವಣೆಗೆ ಟಿಕೆಟ್ ನೀಡಿದೆ. ಈ ಪಕ್ಷಕ್ಕೆ ರಾಜ್ಯದಲ್ಲಿ ಮತ್ತೆ ಗೂಂಡಾರಾಜ್ಯ ತರುವುದಿದೆ. ಸಮಾಜವಾದಿ ಪಕ್ಷದಿಂದ ರಫೀಕ್ ಅನ್ಸಾರಿ, ನಾಹಿದ ಹಸನ್, ಅಸ್ಸಲಾಮ ಚೌಧರಿ, ಹಾಜಿ ಯೂನುಸ್, ಮದನ ಭೈಯ್ಯಾ ಅಮರಪಾಲ, ದಿಲನವಾಜ್ ಮುಂತಾದವರಿಗೆ ಟಿಕೆಟ್ ನೀಡಿದೆ, ಇವರೆಲ್ಲರೂ ಗೂಂಡಾಗಳಾಗಿದ್ದಾರೆ.’ ಎಂದು ಹೇಳಿದರು.
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!