ಕೊಳಿಕೊಡ (ಕೇರಳ)ದಲ್ಲಿ ಮಹಮ್ಮದ ಪೈಗಂಬರ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಪಾದ್ರಿಯ ವಿರುದ್ಧ ದೂರು ದಾಖಲು

ಕೊಳಿಕೊಡ (ಕೇರಳ) – ಮುಸಲ್ಮಾನರ ವಿರುದ್ಧ ಆಕ್ಷೇಪಾರ್ಹ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇರಿಟ್ಟಿ ಹತ್ತಿರ ಮಾಣಿಕಕಡವು ಇಲ್ಲಿಯ ಕುನ್ನೋಥ ಸೆಮಿನರಿಯ ಪಾದ್ರಿ ಅಂಥೋನಿ ತರಕ್ಕಾಡವಿಲ ಇವರ ವಿರುದ್ಧ ದೂರು ದಾಖಲಿಸಲಾಗಿದೆ. ಮಾಣಿಕಕಡವು ಇಲ್ಲಿಯ ಸೇಂಟ್ ಥಾಮಸ್ ಚರ್ಚಿನಲ್ಲಿ ಒಂದು ಕಾರ್ಯಕ್ರಮದ ಸಮಯದಲ್ಲಿನ ಮಾಡಿದ ಭಾಷಣದಲ್ಲಿ ಪಾದ್ರಿ ಅಂಥೋನಿ ಇವರು ಖಾದ್ಯ ಪದಾರ್ಥ ಮತ್ತು ಮಹಮ್ಮದ್ ಪೈಗಂಬರ್ ಅವರ ವಿಷಯವಾಗಿ ಅವಮಾನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಥಲಸರಿ ಇಲ್ಲಿಯ ಆರ್ಕಡಾಯೋಸಿಜ ಈ ಕ್ರೈಸ್ತರ ಧಾರ್ಮಿಕ ಸಂಸ್ಥೆಯು ಸ್ಪಷ್ಟನೆ ನೀಡುತ್ತಾ, ಈ ಪಾದ್ರಿ ನೀಡಿರುವ ಹೇಳಿಕೆ ಸಮರ್ಥನೆ ಮಾಡುವುದಿಲ್ಲ ಎಂದು ಹೇಳಿದೆ.