|
ಇಂತಹ ಮತಾಂಧರಿಗೆ ಛೀಮಾರಿ ಹಾಕುವ ಬದಲು ಅಮಾನತ್ತುಗೊಳಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! ಇದರಿಂದ ಮತಾಂಧ ನೌಕರರು ಎಲ್ಲೇ ಇದ್ದರೂ, ಅವರ ಧರ್ಮದ ಬಗ್ಗೆ ಹೇಗೆ ಯೋಚಿಸುತ್ತಾರೆ, ಎಂಬುದು ಗಮನಕ್ಕೆ ಬರುತ್ತದೆ. ಮತ್ತೊಂದೆಡೆ, ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗ ಮದುವೆಯಾಗುತ್ತಿದ್ದರೆ, ಹಿಂದೂ ನೌಕರರು ಸರ್ವಧರ್ಮಸಮಭಾವದ ಹೆಸರಿನಲ್ಲಿ ಅವರನ್ನು ಪ್ರೋತ್ಸಾಹಿಸಲು ಪ್ರಯತ್ನಿಸುವುದು ಕಂಡುಬರುತ್ತದೆ ! |

ಲಖಿಂಪುರ ಖಿರಿ (ಉತ್ತರಪ್ರದೇಶ) – ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ (ಎ.ಡಿ.ಎಂ.) ಕಚೇರಿಯ ಸಿಬ್ಬಂದಿಯೊಬ್ಬರು ವಿವಾಹ ಪ್ರಮಾಣಪತ್ರವನ್ನು ಪಡೆಯುವ ಸಲುವಾಗಿ ಹಿಂದೂ ಯುವಕನನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ. ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿದ ಬಳಿಕ ನೌಕರನಿಗೆ ತರಾಟೆಗೆ ತೆಗೆದುಕೊಂಡನು ಮತ್ತು ೧ ಗಂಟೆಯೊಳಗೆ ಯುವಕನಿಗೆ ಮದುವೆ ಪ್ರಮಾಣಪತ್ರ ನೀಡುವಂತೆ ಆದೇಶಿಸಿದರು.
೧. ನಗರದ ಕಾಶಿನಗರ ಪ್ರದೇಶದ ತರುಣ ಗುಪ್ತಾ ಮತ್ತು ಮುಸಲ್ಮಾನ ಯುವತಿಯು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಲು ನಿರ್ಧರಿಸಿದರು. ನಂತರ ನ್ಯಾಯಾಂಗದ ಮೂಲಕ ಮದುವೆ ನೋಂದಣಿಗಾಗಿ ಎ.ಡಿ.ಎಮ.ಗೆ ಅರ್ಜಿ ಸಲ್ಲಿಸಿದಳು; ಆದರೆ ಯುವಕನಿಗೆ ಮದುವೆ ಪ್ರಮಾಣಪತ್ರ ನೀಡಲು ಇಲ್ಲಿಯ ಸರಕಾರಿ ನೌಕರ ಮೊಹಮ್ಮದ ಸಾಜಿದ್ ನಿರಾಕರಿಸುತ್ತಿದ್ದ. ಆತ ಆ ಯುವಕನಿಗೆ ‘ನಿಮಗೆ ಪ್ರಮಾಣಪತ್ರ ಬೇಕಿದ್ದರೆ ಮುಸಲ್ಮಾನನಾಗಬೇಕು’, ಎಂದು ಷರತ್ತು ವಿಧಿಸಿದ ಮತ್ತು ‘ಮತಾಂತರಗೊಂಡರೆ ಮಾತ್ರ ಪ್ರಮಾಣಪತ್ರ ಕೊಡುತ್ತೇವೆ’ ಎಂದು ಹೇಳಿದನು.
೨. ಈ ಬಗ್ಗೆ ಸಂತ್ರಸ್ತ ಯುವಕನು ಇಲ್ಲಿಯ ಜಿಲ್ಲಾಧಿಕಾರಿ ಮಹೇಂದ್ರ ಬಹದ್ದೂರ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ. ಈ ಕುರಿತ ವಿಡಿಯೋವನ್ನು ಜಿಲ್ಲಾಧಿಕಾರಿಗೆ ತೋರಿಸಿದರು. ಅದರಲ್ಲಿ ಸಂತ್ರಸ್ತ ಯುವಕನನ್ನು ಮತಾಂತರಗೊಳಿಸುವಂತೆ ಸರಕಾರಿ ನೌಕರರು ಒತ್ತಡ ಹೇರುತ್ತಿರುವುದು ಕಂಡುಬಂದಿದೆ. ನಂತರ ಅವರು ಸರಕಾರಿ ನೌಕರನನ್ನು ಕರೆಸಿ ತರಾಟೆಗೆ ತೆಗೆದುಕೊಂಡರು ಹಾಗೂ ಆತನನ್ನು ಅಮಾನತು ಮಾಡುವಂತೆ ಎಚ್ಚರಿಕೆಯನ್ನೂ ನೀಡಿದರು.
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ