ಹಿಂದುತ್ವನಿಷ್ಠ ಸಂಘಟನೆಗಳಿಂದ ವಿರೋಧನಂತರ ಜಿಲ್ಲಾಧಿಕಾರಿಗಳಿಂದ ವಿಚಾರಣೆಗೆ ಆದೇಶ
ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗ ಇಂತಹ ಘಟನೆ ನಡೆಯುವುದು ಹಿಂದುಗಳಿಗೆ ಅಪೇಕ್ಷಿತವಿಲ್ಲ !

ಕೋಲಾರ – ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸರಕಾರಿ ಶಾಲೆಯ ಕೊಠಡಿಯಲ್ಲಿ ೨೦ ಮುಸಲ್ಮಾನ ವಿದ್ಯಾರ್ಥಿಗಳು ನಮಾಜ್ ಪಠಣ ಮಾಡಿದರು. ಈ ಬಗ್ಗೆ ಹಿಂದುತ್ವನಿಷ್ಠ ಸಂಘಟನೆಗಳಿಗೆ ಮಾಹಿತಿ ಸಿಕ್ಕಿದ ನಂತರ ಅವರು ವಿರೋಧ ವ್ಯಕ್ತ ಪಡಿಸಿದ್ದರಿಂದ ನಮಾಜ್ ಪಠಣ ನಿಲ್ಲಿಸಲಾಯಿತು. ಈ ಘಟನೆ ಶುಕ್ರವಾರ ಜನೆವರಿ ೨೧ ರಂದು ನಡೆದಿದೆ.
ಶಾಲೆಯಲ್ಲಿ ನಮಾಜ್ಗೆ ಅನುಮತಿ ನೀಡಿದ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಒತ್ತಾಯ!https://t.co/5EmaTnyeJr
— Dighvijay News 24×7 (@DighvijayNews24) January 23, 2022
ನಂತರ ಕೋಲಾರದ ಜಿಲ್ಲಾಧಿಕಾರಿ ಉಮೇಶ ಕುಮಾರ ಇವರು ಈ ಶಾಲೆಯ ಘಟನೆಯ ವರದಿ ನೀಡುವಂತೆ ಆದೇಶ ನೀಡಿದ್ದಾರೆ. ಹಾಗೂ ಸರಕಾರಿ ಅಧಿಕಾರಿಗಳಿಗೆ ಶಾಲೆಗೆ ಹೋಗಿ ಸಂಪೂರ್ಣ ಮಾಹಿತಿ ಪಡೆದು ವರದಿ ನೀಡುವಂತೆ ಹೇಳಲಾಗಿದೆ.
೧. ಮೂಲಗಳ ಮಾಹಿತಿಯ ಪ್ರಕಾರ ಮುಖ್ಯೋಪಾಧ್ಯಾಯಿನಿಯು ಮಕ್ಕಳು ಶಾಲೆಯ ಹೊರಗೆ ಹೋಗುತ್ತಾರೆ; ಎಂದು ಅವರಿಗೆ ಕೊಠಡಿಯಲ್ಲಿ ನಮಾಜ ಪಠಣ ಮಾಡುವ ಅನುಮತಿ ನೀಡಿದರು. ಕೊರೋನಾ ನಿಯಮದಿಂದಾಗಿ ಶಾಲೆ ಕಳೆದ ೨ ತಿಂಗಳಿಂದ ಮುಚ್ಚಲಾಗಿತ್ತು.
೨. ಮುಖ್ಯೋಪಾಧ್ಯಾಯಿನಿ ಉಮಾದೇವಿ ಇವರು ಈ ಬಗ್ಗೆ ಮಾತನಾಡುತ್ತಾ, ‘ನಾನು ನಮಾಜ್ ಪಠಣಕ್ಕೆ ಅನುಮತಿ ನೀಡಿರಲಿಲ್ಲ, ಹುಡುಗರು ತಾವಾಗಿಯೇ ನಮಾಜ ಪಠಸಿದ್ದಾರೆ. ಯಾವ ಸಮಯದಲ್ಲಿ ಈ ಘಟನೆ ನಡೆಯಿತೋ ಆಗ ನಾನು ಶಾಲೆಯಲ್ಲಿ ಇರಲಿಲ್ಲ. ಯಾವಾಗ ನನಗೆ ಶಿಕ್ಷಣಾಧಿಕಾರಿಗಳು ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದರೋ, ಆಗ ನಾನು ಇದನ್ನು ನಿಲ್ಲಿಸಿದೆ.’ ಎಂದು ಹೇಳಿದರು.
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಕೇರಳಮ್ನ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ಮೊದಲ ಮಹಿಳಾ ಶಾಸಕಿ ರೆಸ್ಟೋರೆಂಟ್ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಮಾಡಿದ್ದಕ್ಕೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!