ಭಾಜಪ ಕಾರ್ಯಕರ್ತರಿಗೆ ಗಾಯವಾಹನಗಳಿಗೆ ಹಾನಿಪೊಲೀಸರಿಂದ ಗಾಳಿಯಲ್ಲಿ ಗುಂಡು |
|
* ಆಂಧ್ರಪ್ರದೇಶದಲ್ಲಿ ವೈ.ಎಸ್.ಆರ್. ಪಕ್ಷದ ಸರಕಾರವಿದೆಯೇ ಅಥವಾ ಮತಾಂಧರದ್ದು ? ಪೊಲೀಸ್ ಠಾಣೆಯಲ್ಲಿಯೇ ಮತಾಂಧರು ಜನರ ಮೇಲೆ ದಾಳಿ ಮಾಡುತ್ತಿದ್ದರೆ ಜನಸಾಮಾನ್ಯರನ್ನು ಯಾರು ರಕ್ಷಿಸುವರು ? ಇಂತಹ ಪೊಲೀಸ ದಳ ಏನು ಪ್ರಯೋಜನ ?- ಸಂಪಾದಕರು * ಕೇಂದ್ರದಲ್ಲಿನ ಭಾಜಪ ಸರಕಾರವು ಈ ಘಟನೆಯನ್ನು ಗಮನಿಸಿ ಈ ವಿಷಯದ ಬಗ್ಗೆ ಜಗನಮೋಹನ ರೆಡ್ಡಿ ಸರಕಾರವನ್ನು ವಿಚಾರಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು * ಅಕ್ರಮ ಮಸೀದಿಗಳನ್ನು ನಿರ್ಮಿಸುವ ಮತಾಂಧರ ಮೇಲೆ ಕ್ರಮ ಕೈಗೊಳ್ಳದ ಆಡಳಿತ ಮತ್ತು ಪೊಲೀಸರ ಮೇಲೆಯೂ ಕ್ರಮಕೈಗೊಳ್ಳಬೇಕು ! -ಸಂಪಾದಕರು |

ಕುರ್ನೂಲ (ಆಂಧ್ರಪ್ರದೇಶ) – ಆತ್ಮಕೂರ ನಗರದಲ್ಲಿ ಪದ್ಮಾವತಿ ಶಾಲೆಯ ಹಿಂದಿರುವ ಅಕ್ರಮ ಮಸೀದಿಯನ್ನು ವಿರೋಧಿಸಿದ್ದರಿಂದ ಮತಾಂಧರ ಗುಂಪೊಂದು ಪೊಲೀಸ್ ಠಾಣೆಯನ್ನು ಸುತ್ತುವರಿಯಿತು ಮತ್ತು ಭಾಜಪದ ಕಾರ್ಯಕರ್ತರ ಮೇಲೆ ದಾಳಿ ನಡೆಸಿತು. ಮತಾಂಧರು ಈ ಸಮಯದಲ್ಲಿ ವಾಹನಗಳಿಗೆ ಹಾನಿ ಮಾಡುತ್ತಾ ಕಲ್ಲುತೂರಾಟ ನಡೆಸಿದರು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ತರಲು ಗಾಳಿಯಲ್ಲಿ ಗುಂಡು ಹಾರಿಸಿದರು. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನೇಮಿಸಲಾಗಿದೆ. ಇಲ್ಲಿ ಒತ್ತಡದ ವಾತಾವರಣವಿದೆ. ಈ ದಾಳಿಯಲ್ಲಿ ಭಾಜಪದ ಕೆಲವು ನಾಯಕರು ಗಾಯಗೊಂಡಿದ್ದಾರೆ. ಈ ಘಟನೆಯ ಸಮಯದಲ್ಲಿ ಭಾಜಪದ ಜಿಲ್ಲಾಧ್ಯಕ್ಷರಾದ ಶ್ರೀಕಾಂತ ರೆಡ್ಡಿಯವರ ಹತ್ಯೆಗಾಗಿ ಪ್ರಯತ್ನಿಸಲಾಗಿರುವ ಬಗ್ಗೆ ಭಾಜಪವು ಆರೋಪಿಸಿದೆ. ಈ ಸಮಯದಲ್ಲಿ ರೆಡ್ಡಿಯವರ ವಾಹನಕ್ಕೆ ಹಾನಿ ಮಾಡಲಾಗಿದೆ.
Andhra Pradesh: Islamists attack police and BJP workers after opposition to illegal construction of mosque in Kurnoolhttps://t.co/gwZvZxftBC
— OpIndia.com (@OpIndia_com) January 9, 2022
1. ಭಾಜಪದ ರಾಜ್ಯದ ಪ್ರಧಾನ ಕಾರ್ಯದರ್ಶಿಯಾದ ವಿಷ್ಣುವರ್ಧನ ರೆಡ್ಡಿಯವರು ಮಾಹಿತಿ ನೀಡುವಾಗ, ಆತ್ಮಕೂರ ನಗರದಲ್ಲಿನ ಅಕ್ರಮ ಕಟ್ಟಡ ಕಾಮಗಾರಿಯ ಬಗ್ಗೆ ಭಾಜಪದ ನೇತಾರರು ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿ ಅವರ ಸರಕಾರಕ್ಕೆ ಪ್ರಶ್ನಿಸಿತ್ತು. ಈ ಬಗ್ಗೆ ಕಾರ್ಯಕರ್ತರು ಸರಕಾರದ ಬಳಿ ಹೋಗಿ ವಿರೋಧ ವ್ಯಕ್ತಪಡಿಸಿದರು, ಆಗ ಮತಾಂಧರು ಪೊಲೀಸರ ಸಮ್ಮುಖದಲ್ಲಿ ಭಾಜಪದ ಕಾರ್ಯಕರ್ತರ ಮೇಲೆ ದಾಳಿ ನಡೆಸಿದರು. ಅವರ ವಾಹನಗಳಿಗೆ ಹಾನಿ ಮಾಡಲಾಯಿತು. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಹಾಗೂ ದುರ್ದೈವವಾಗಿದೆ. ಭಾಜಪವು ಈ ಘಟನೆಯನ್ನು ನಿಷೇಧಿಸುತ್ತದೆ.’ ಎಂದು ಹೇಳಿದರು.
2. ಈ ವಿಷಯದಲ್ಲಿ ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕರು, ‘ಕರ್ನೂಲಿನಲ್ಲಿ ಅನೇಕ ಜನರು ಹಿಂಸೆಯನ್ನು ಉದ್ರೇಕಿಸಲು ಇಚ್ಚಿಸುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಜನರನ್ನು ಉದ್ರೇಕಿಸುವವರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಪೊಲೀಸ ಅಧೀಕ್ಷಕರಿಗೆ ಆದೇಶ ನೀಡಲಾಗಿದೆ’ ಎಂದು ಹೇಳಿದರು.
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !