ಹಬೀಬನು ಮಹಿಳೆಯ ತಲೆಯ ಮೇಲೆ ಉಗೂಳಿ ಅವಮಾನ ಮಾಡಿದ ಪ್ರಕರಣ

ಮುಂಬಯಿ – ಕೇಶ ವಿನ್ಯಾಸಕಾರ ಜಾವೇದ ಹಬೀಬನು ಒಂದು ಕಾರ್ಯಕ್ರಮದ ವ್ಯಾಸಪೀಠದ ಮೇಲೆ ಓರ್ವ ಮಹಿಳೆಯ ಕೂದಲಿನಲ್ಲಿ ಉಗಳಿದ, ಈ ಬಗ್ಗೆ ಟೀಕಾಪ್ರಹಾರ ಹೆಚ್ಚಾದ ನಂತರ ಜಾವೇದ ಹಬೀಬ ಕ್ಷಮೆ ಯಾಚಿಸಿದನು; ಆದರೆ ಕೇವಲ ಕ್ಷಮೆ ಕೇಳಿದರೆ ಸಾಕಾಗುವುದಿಲ್ಲ, ಇಂತಹ ವ್ಯಕ್ತಿಯ ವಿರುದ್ಧ ದೂರು ದಾಖಲಿಸಬೇಕು. ಮತ್ತು ಜಾವೇದ ಹಬಿಬನು ಮಹಿಳೆಯ ತಲೆಯ ಮೇಲೆ ಉಗುಳಿ ಅವಮಾನ ಮಾಡಿರುವುದರಿಂದ ರಾಷ್ಟ್ರೀಯ ಮಹಿಳಾ ಆಯೋಗವು ಹಸ್ತಕ್ಷೇಪ ಮಾಡಿ ಆತನ ಮೇಲೆ ಕ್ರಮ ಕೈಗೊಳ್ಳಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತಿಸಗಡ್ ರಾಜ್ಯ ಸಂಘಟಕ ಶ್ರೀ. ಸುನಿಲ ಘನವಟ ಇವರು ಒಂದು ವಿಡಿಯೋ ಮೂಲಕ ಒತ್ತಾಯಿಸಿದ್ದಾರೆ.

ಶ್ರೀ. ಘನವಟ ತಮ್ಮ ಮಾತನ್ನು ಮುಂದುವರೆಸುತ್ತಾ, “ಜಾವೇದ್ ಹಬೀಬನ ಕೇಶ ವಿನ್ಯಾಸದ ಎಲ್ಲ ಕಂಪನಿಗಳಲ್ಲಿ ಈ ರೀತಿಯ ಉಗುಳುವ ಪ್ರಕಾರ ನಡೆಯುತ್ತಿದೆಯೇ ?, ಎಂಬುದರ ತನಿಖೆ ಆಗುವುದು ಅವಶ್ಯಕವಾಗಿದೆ. ಈ ಮೊದಲು ಮತಾಂಧರು ಊಟ, ಹಣ್ಣುಗಳು ಇದರ ಮೇಲೆ ಉಗುಳುವ ದೃಶ್ಯಗಳು ಬೆಳಕಿಗೆ ಬಂದಿದೆ. ಆದ್ದರಿಂದ ಸರಕಾರ ಇದು `ಉಗುಳು ಜಿಹಾದ’ ಆಗಿದೆಯೇ ? ಈ ಬಗ್ಗೆಯೂ ತನಿಖೆ ನಡೆಸಬೇಕು.
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ