ಜಿಹಾದಿ ಉಗ್ರರು ಮದರಸಾಗಳಲ್ಲಿ ಸಿದ್ಧರಾಗುವುದರಿಂದ, ನನಗೆ ಅವಕಾಶ ಸಿಕ್ಕಿದರೆ, ಎಲ್ಲಾ ಮದರಸಾಗಳನ್ನು ಮುಚ್ಚಿ ಬಿಡುತ್ತೇನೆ ! – ಉತ್ತರಪ್ರದೇಶದ ರಾಜ್ಯ ಮಂತ್ರಿ ಠಾಕೂರ್ ರಘುರಾಜ ಸಿಂಹ

ಉತ್ತರಪ್ರದೇಶದಲ್ಲಿ ಮದರಸಾಗಳ ಸಂಖ್ಯೆ 250 ರಿಂದ 22 ಸಾವಿರದಷ್ಟು ಹೆಚ್ಚಳವಾಗಿದೆ ಎಂದು ದಾವೆ

ಉತ್ತರಪ್ರದೇಶದ ಸರಕಾರದಿಂದ ಮದರಸಾಗಳಿಗೆ ನೀಡುವ ಅನುದಾನವನ್ನು ಮೊದಲು ನಿಲ್ಲಿಸಬೇಕು. ಅದಕ್ಕಾಗಿ ರಘುರಾಜ ಸಿಂಹ ಇವರು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು

ಉತ್ತರಪ್ರದೇಶದ ರಾಜ್ಯ ಮಂತ್ರಿ ಠಾಕೂರ್ ರಘುರಾಜ ಸಿಂಹ

ಲಕ್ಷ್ಮಣಪುರಿ (ಉತ್ತರಪ್ರದೇಶ) – ದೇಶದಲ್ಲಿ ಎಷ್ಟು ಮದರಸಾಗಳು ನಡೆಯುತ್ತಿವೆ, ಅಲ್ಲಿ ಉಗ್ರರ ಹೆಚ್ಚಳವಾಗುತ್ತಿದೆ. ಅವು ಉಗ್ರರ ಕೇಂದ್ರವಾಗಿದೆ. ಎಲ್ಲಾ ಉಗ್ರರು ಮದರಸಾದಿಂದ ಕಲಿತು ಹೊರ ಬರುತ್ತಿದ್ದಾರೆ. ದೇವರು ನನಗೆ ಅವಕಾಶ ನೀಡಿದರೆ, ದೇಶದಲ್ಲಿನ ಎಲ್ಲಾ ಮದರಸಾಗಳನ್ನು ಮುಚ್ಚಿಸುತ್ತೇನೆ, ಎಂದು ಉತ್ತರಪ್ರದೇಶ ಸರಕಾರದ ರಾಜ್ಯ ಮಂತ್ರಿ ಠಾಕೂರ್ ರಘುರಾಜ ಸಿಂಹ ಇವರು ಹೇಳಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ರಘುರಾಜ ಸಿಂಹ ತಮ್ಮ ಮಾತನ್ನು ಮುಂದುವರೆಸುತ್ತಾ, ಯಾವ ರೀತಿ ನಾಗರಹಾವಿನ ಹೆಡೆ ತುಳಿಯಲಾಗುತ್ತದೆ, ಹಾಗೆ ಉಗ್ರರ ತಲೆ ತುಳಿಯಬೇಕು. ರಾಜ್ಯದಲ್ಲಿ ಮದರಸಾಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿವೆ. ಮೊದಲು ಉತ್ತರಪ್ರದೇಶದಲ್ಲಿ ಮದರಸಾಗಳ ಸಂಖ್ಯೆ ಕೇವಲ 250 ರಷ್ಟು ಇತ್ತು; ಆದರೆ ಈಗ ಅದು ಹೆಚ್ಚಾಗಿ 22 ಸಾವಿರದಷ್ಟಾಗಿದೆ. ಕೇಂದ್ರ ಸರಕಾರ ಇದನ್ನು ನಿಷೇಧಿಸಬೇಕು ಎಂದು ಹೇಳಿದರು.