ಕೇಂದ್ರ ಸರಕಾರವು ಮತಾಂತರದ ವಿರುದ್ಧ ರಾಷ್ಟ್ರೀಯ ಕಾನೂನು ತರಬೇಕು ! – ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ಶ್ರೀ ಪ್ರಣವಾನಂದ ಸರಸ್ವತೀಜಿ ಮಹಾರಾಜ

‘ರಾಷ್ಟ್ರಾದ್ಯಂತ ಮತಾಂತರ ನಿಷೇಧ ಕಾನೂನು ತರಬೇಕು !’ ಈ ವಿಷಯದ ಕುರಿತು ‘ಆನ್‌ಲೈನ್’ ವಿಶೇಷ ಸಂವಾದ

‘ಸನಾತನ ಧರ್ಮ’ವು ಮಹಾನ ಧರ್ಮವಾಗಿದೆ ಮತ್ತು ಈ ಜಗತ್ತಿನಲ್ಲಿ ಅದಕ್ಕೆ ಪರ್ಯಾಯವಿಲ್ಲ. ಕ್ರೈಸ್ತ ಮಿಶನರಿಗಳು ಮತ್ತು ಮುಸಲ್ಮಾನರು ಮತಾಂತರದ ಮೂಲಕ ನಮ್ಮ ಧರ್ಮದ ಮೇಲೆ ದಾಳಿ ಮಾಡುತ್ತಿದ್ದಾರೆ. ಈ ಮತಾಂತರದ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ ಆರಂಭವಾಗಬೇಕು, ಅದೇ ರೀತಿ ಈ ದೇಶವನ್ನು ಸುರಕ್ಷಿತವಾಗಿಡಲು ಸರಕಾರವು ಮತಾಂತರದ ವಿರುದ್ಧ ರಾಷ್ಟ್ರೀಯ ಕಾನೂನನ್ನು ತರಬೇಕು ಮತ್ತು ಯಾವುದೇ ರೀತಿಯ ಮತಾಂತರವನ್ನು ಕಾನೂನುಬಾಹಿರ ಎಂದು ಘೋಷಿಸಬೇಕು, ಎಂದು ಇಂದೋರ್‌ನ ಶ್ರೀ ಅಖಂಡಾನಂದ ಆದಿವಾಸಿ ಗುರುಕುಲ ಆಶ್ರಮದ ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ಶ್ರೀ ಪ್ರಣವಾನಂದ ಸರಸ್ವತಿಜಿ ಮಹಾರಾಜರು ಒತ್ತಾಯಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ದೇಶಾದ್ಯಂತ ಮತಾಂತರ ನಿಷೇಧ ಕಾನೂನನ್ನು ತರಬೇಕು !’ ಈ ವಿಷಯದ ಕುರಿತು ಆಯೋಜಿಸಲಾಗಿದ್ದ ವಿಶೇಷ ‘ಆನ್‌ಲೈನ್’ ಚರ್ಚೆಯಲ್ಲಿ ಮಾತನಾಡುತ್ತಿದ್ದರು.

ಸ್ವಾಮಿ ಪ್ರಣವಾನಂದ ಸರಸ್ವತೀಜಿ ಮಹಾರಾಜರು ತಮ್ಮ ಮಾತನ್ನು ಮುಂದುವರಿಸುತ್ತಾ, ‘ನಮ್ಮ ವೈಚಾರಿಕತೆ, ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಚೇತನವನ್ನು ನಾಶ ಮಾಡಲು ಇತರ ಧರ್ಮಗಳು ಸಕ್ರಿಯವಾಗಿವೆ. ಅವರು ನಮ್ಮ ಸಂಸ್ಕೃತಿ, ವೈಞಾನಿಕ ಸಂಪತ್ತು, ಭೌತಿಕ ಶಕ್ತಿಯ ಮೇಲೆ ತಮ್ಮ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಕೇವಲ ಮತಾಂತರಕ್ಕೆ ಸೀಮಿತವಾಗಿರದೇ, ಇಡೀ ಭಾರತವನ್ನೇ ತನ್ನ ಅಧೀನಕ್ಕೆ ತೆಗೆದುಕೊಳ್ಳುವ ಷಡ್ಯಂತ್ರವಾಗಿದೆ. ನಮ್ಮ ಪೂರ್ವಜರು ತುಂಬಾ ಧರ್ಮನಿಷ್ಠರಾಗಿದ್ದರು. ಎಷ್ಟೇ ದಾಳಿಯಾದರೂ ಅವರು ಮತಾಂತರವಾಗಲಿಲ್ಲ. ಹಿಂದೂಗಳು ಈ ಆದರ್ಶವನ್ನು ಅನುಸರಿಸಿ ಧರ್ಮಶಿಕ್ಷಣವನ್ನು ಪಡೆಯಬೇಕು.’ ಎಂದು ಹೇಳಿದರು.
ಧಾರವಾಡದ ಶ್ರೀಕ್ಷೇತ್ರ ದ್ವಾರಾಪುರದ ಶ್ರೀ ಪರಮಾತ್ಮಾ ಮಹಾಸಂಸ್ಥಾನದ ಶ್ರೀಗುರು ಪರಮಾತ್ಮಾಜಿ ಮಹಾರಾಜರು ಮಾತನಾಡುತ್ತಾ, ‘ದೇಶದೆಲ್ಲೆಡೆ ಮತಾಂತರದ ಪ್ರಭಾವವು ಅಲ್ಲಲ್ಲಿ ಕಂಡು ಬಂದಿದೆ. ಭಾರತದಲ್ಲಿ ಪ್ರತಿದಿನ 2500 ರಿಂದ 3000 ಹಿಂದೂಗಳು ಮತಾಂತರವಾಗುತ್ತಿದ್ದಾರೆ. ಇದನ್ನು ತಡೆಯಲು ಕಾನೂನು ರೂಪಿಸಬೇಕು. ಹಿಂದೂ ಧರ್ಮದ ಮೇಲಿನ ಈ ದಾಳಿಯನ್ನು ತಡೆಯಲು ಹಿಂದೂ ಬಾಂಧವರು ಮುಂದೆ ಬಂದು ಸರಕಾರದ ಮೇಲೆ ಒತ್ತಡ ಹೇರಬೇಕು. ಇತ್ತೀಚೆಗೆ ದೂರಚಿತ್ರವಾಹಿನಿಯ ವಿವಿಧ ಕಾರ್ಯಕ್ರಮಗಳ ಮೂಲಕ ಹಿಂದೂ ಧರ್ಮವನ್ನು ಕಡೆಗಣಿಸಲಾಗುತ್ತಿದೆ. ಈ ಬಗ್ಗೆ ಹಿಂದೂಗಳು ಜಾಗೃತರಾಗಬೇಕು. ಅಲ್ಲಲ್ಲಿ ದೇವಸ್ಥಾನಗಳಿಂದ ಹಿಂದೂಗಳಿಗೆ ತಮ್ಮ ಧರ್ಮದ ತತ್ತ್ವಗಳು ಮತ್ತು ಮೂಲಭೂತ ಞಾನವನ್ನು ಕಲಿಸಬೇಕು’ ಎಂದು ಹೇಳಿದರು.

‘ಅಖಿಲ ಭಾರತೀಯ ಘರವಾಪಸಿ’ ಸಂಘಟನೆಯ ಮುಖ್ಯಸ್ಥ ಹಾಗೂ ಬಿಜೆಪಿಯ ಛತ್ತೀಸಗಡ ರಾಜ್ಯ ಸಚಿವ ಪ್ರಬಲ ಪ್ರತಾಪ ಸಿಂಗ್‌ ಜುದೇವ್‌ ಇವರು ಮಾತನಾಡುತ್ತಾ, ‘ಮತಾಂತರ ಒಂದು ಭೀಕರ ಪಿತೂರಿಯಾಗಿದ್ದು, ಕ್ರೈಸ್ತ ಮಿಶನರಿಗಳು ಸೇವೆಯ ಹೆಸರಿನಲ್ಲಿ ವ್ಯವಹಾರ ಮಾಡುತ್ತಿದ್ದಾರೆ ಹಾಗೂ ಹಿಂದೂಗಳನ್ನು ವಂಚಿಸುತ್ತಿದ್ದಾರೆ. ದೇಶವಿರೋಧಿ ಶಕ್ತಿಗಳು ಈ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿವೆ. ಹಿಂದೂಗಳು ವಿಶೇಷವಾಗಿ ಯುವಕರು ಇವೆಲ್ಲವನ್ನು ಕೊನೆಗಾಣಿಸಲು ಮುಂದಾಗಬೇಕು. ನಮ್ಮ ಸಂಘಟನೆಯ ಮಾಧ್ಯಮದಿಂದ ಮತಾಂತರಗೊಂಡ ಹಿಂದೂಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಮತ್ತು ನಾವು ಈ ಕಾರ್ಯವನ್ನು ಮುಂದುವರಿಸುತ್ತೇವೆ’ ಎಂದು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ, ‘ಕರ್ನಾಟಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಾಗದಂತೆ ಕ್ರೈಸ್ತ ಮಿಶನರಿಗಳು ಪ್ರಯತ್ನಿಸುತ್ತಿದ್ದಾರೆ ಹಾಗೂ ಮತಾಂತರ ನಿಷೇಧ ಕಾನೂನನ್ನು ಜಾರಿಗೊಳಿಸಲು ಹಿಂದುತ್ವನಿಷ್ಠ ಸಂಘಟನೆಗಳು ಒತ್ತಾಯಿಸುತ್ತಿವೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ; ಸಂಪೂರ್ಣ ದೇಶದಾದ್ಯಂತ ಮತಾಂತರ ನಿಷೇಧವನ್ನು ತರಬೇಕು, ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯು ವಿವಿಧ ಹಿಂದುತ್ವನಿಷ್ಠ ಸಂಘಟನೆಯೊಂದಿಗೆ ಕಾರ್ಯ ಮಾಡುತ್ತಿದೆ. ಮತಾಂತರವು ನಮ್ಮ ದೇಶವನ್ನು ವಿಭಜನೆಯತ್ತ ಕೊಂಡೊಯ್ಯುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲೆಲ್ಲಿ ಮತಾಂತರಕ್ಕೆ ಪ್ರಯತ್ನ ನಡೆಯುತ್ತಿದೆಯೋ, ಆ ಸ್ಥಳಗಳಲ್ಲಿ ಸಾಂವಿಧಾನಿಕ ರೀತಿಯಲ್ಲಿ ವಿರೋಧಿಸಲು ಹಿಂದೂಗಳು ಮುಂದಾಗಬೇಕು. ಹಿಂದೂ ಧರ್ಮವನ್ನು ಎಲ್ಲೆಡೆ ಪ್ರಸಾರ ಮಾಡಿ ಧರ್ಮಶಿಕ್ಷಣ ಪಡೆದು ನಮ್ಮ ಧರ್ಮದ ಬಗ್ಗೆ ಅಭಿಮಾನವಿಟ್ಟುಕೊಂಡರೆ, ಮತಾಂತರದಂತಹ ಸಮಸ್ಯೆಗಳಿಗೆ ಕಡಿವಾಣ ಬೀಳುತ್ತದೆ’ ಎಂದು ಹೇಳಿದರು.