ಗ್ರಾಮಸ್ಥರು ಕ್ರೈಸ್ತ ಮಿಶನರಿಯವರನ್ನು ಹಿಡಿದಿಟ್ಟಿದ್ದರು; ಆದರೆ ಪೊಲೀಸರು ಬಿಟ್ಟುಬಿಟ್ಟರು !
|
* ಕ್ರೈಸ್ತ ಮಿಶನರಿಗಳ ವಿರುದ್ಧ ಜಾಗೃತ ಮತ್ತು ಸಂಘಟಿತವಾಗಿರುವ ಗ್ರಾಮಸ್ಥರಿಗೆ ಅಭಿನಂದನೆಗಳು ! ದೇಶದಲ್ಲಿ ಮತಾಂತರ ವಿರೋಧಿ ಕಾನೂನು ಇಲ್ಲದಿರುವುದರಿಂದ ಇಂದಿಗೂ ಮಿಷನರಿಗಳು ತಮ್ಮ ಬಾಲ ಬಿಚ್ಚುತ್ತಿದ್ದಾರೆ,(ಜಾಲವನ್ನು ಹರಡುತ್ತಿದ್ದಾರೆ) ಇದನ್ನು ನೋಡಿದರೆ ಕೇಂದ್ರ ಸರಕಾರವು ಆದಷ್ಟು ಬೇಗ ಈ ಕಾನೂನು ತರುವುದು ಅವಶ್ಯಕವಾಗಿದೆ !- ಸಂಪಾದಕರು * ಹಿಂದೂಗಳಿಗೆ ಮೋಸ ಮಾಡಿ ಅವರನ್ನು ಮತಾಂತರಿಸುವವರ ಮೇಲೆ ತಾವಾಗಿಯೇ ಕ್ರಮಕೈಗೊಳ್ಳುವುದಿಲ್ಲ ಮತ್ತು ಗ್ರಾಮಸ್ಥರು ಹಿಡಿದಿಟ್ಟುಕೊಂಡರೆ ಅವರನ್ನು ಬಿಡುಗಡೆಗೊಳಿಸುತ್ತಾರೆ, ಇದು ಪೊಲೀಸರ ಹಿಂದೂ ದ್ವೇಷ ಮತ್ತು ಕ್ರೈಸ್ತ ಪ್ರೇಮವಾಗಿದೆ, ಎಂದು ತಿಳಿಯಬೇಕೆ ?- ಸಂಪಾದಕರು |

ರಾಮಗಡ (ಜಾರ್ಖಂಡ) – `ಕ್ರೈಸ್ತ ಧರ್ಮ ಸ್ವೀಕರಿಸಿದರೆ ಗಂಡು ಮಗು ಆಗುವುದು’, ಎಂದು ಆಮಿಷವೊಡ್ಡಿ ಕ್ರೈಸ್ತ ಮಿಶನರಿಗಳು ಹಿಂದೂ ಕುಟುಂಬವನ್ನು ಮತಾಂತರಿಸಲು ಪ್ರಯತ್ನಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿಯ ಗಂಜುಡಿಹ ಟೋಲಾ ಗ್ರಾಮದಲ್ಲಿ ವಾಸಿಸುವ ಕರಮಾ ಕರಮಾಲಿ ಇವರಿಗೆ ನಾಲ್ಕು ಹೆಣ್ಣು ಮಕ್ಕಳು ಇದ್ದಾರೆ ಮತ್ತು ಅವರಿಗೆ ‘ಗಂಡು ಮಗು ಹುಟ್ಟಬೇಕೆಂದು’, ಅಪೇಕ್ಷೆಯಿತ್ತು. ಕ್ರೈಸ್ತ ಮಿಶನರಿಗಳು ಅವರಿಗೆ `ನೀವು ಕ್ರೈಸ್ತರಾದರೆ ಗಂಡು ಮಗು ಹುಟ್ಟುವುದು’, ಎಂದು ಹೇಳಿ ಅವರನ್ನು ಮತಾಂತರವಾಗಲು ಹೇಳಿದರು. ಅವರ ಕುಟುಂಬದವರನ್ನು ಮತಾಂತರಿಸಲು 6 ಕ್ರೈಸ್ತ ಮಿಶನರಿಗಳು ಗ್ರಾಮಕ್ಕೆ ಬಂದಿದ್ದರು. ಈ ಮಾಹಿತಿ ತಿಳಿದಾಕ್ಷಣ ಗ್ರಾಮಸ್ಥರು ಈ ಮಿಶನರಿಗಳನ್ನು ಹಿಡಿದಿಟ್ಟುಕೊಂಡರು. ಪೊಲೀಸರಿಗೆ ಈ ಮಾಹಿತಿ ಸಿಕ್ಕಿದ ನಂತರ ಪೊಲೀಸರು ಬಂದು ಅವರನ್ನು ಬಿಡುಗಡೆ ಮಾಡಿದರು.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.