ಅವಶ್ಯಕತೆ ಅನಿಸಿದರೆ ಪುನಃ ಕೃಷಿ ಕಾನೂನು ನಿರ್ಮಿಸಲಾಗುವುದು ! – ರಾಜಸ್ಥಾನದ ರಾಜ್ಯಪಾಲ ಕಲರಾಜ ಮಿಶ್ರ

ಜಯಪುರ (ರಾಜಸ್ಥಾನ) – ಕೇಂದ್ರ ಸರಕಾರವು 3 ಕೃಷಿ ಕಾನೂನು ರದ್ದು ಮಾಡಿರುವ ಬಗ್ಗೆ ಘೋಷಣೆಯು, ಸಕಾರಾತ್ಮಕ ದಿಕ್ಕಿನತ್ತ ಹಾಕಿರುವ ಮೊದಲ ಹೆಜ್ಜೆಯಾಗಿದೆ; ಆದರೆ ಪ್ರಸ್ತುತ ಪರಿಸ್ಥಿತಿಯು ಅನುಕೂಲಕರವಾಗಿಲ್ಲ. ಪ್ರಧಾನಿ ಮೋದಿ ಇವರ ಈ ನಿರ್ಣಯವು ಸಾಹಸ ಮತ್ತು ಧೈರ್ಯ ತೋರಿಸುತ್ತದೆ; ಆದರೆ ಭವಿಷ್ಯದಲ್ಲಿ ಅವಶ್ಯಕತೆ ಅನಿಸಿದರೆ ಮತ್ತೊಮ್ಮೆ ಕೃಷಿ ಕಾನೂನು ಸಿದ್ಧಪಡಿಸಲಾಗುವುದು, ಎಂದು ರಾಜಸ್ಥಾನದ ರಾಜ್ಯಪಾಲ ಕಲರಾಜ ಮಿಶ್ರ ಇವರು ಹೇಳಿಕೆ ನೀಡಿದ್ದಾರೆ.