
ನವ ದೆಹಲಿ – ವಿವಸ್ತ್ರಗೊಳಿಸದೆ ಸತತವಾಗಿ ಸ್ಪರ್ಶಿಸುವುದು, ಅಂದರೆ ಲೈಂಗಿಕ ಅತ್ಯಾಚಾರವಲ್ಲ’, ಎಂದು ಕೆಲವು ದಿನಗಳ ಹಿಂದೆಯಷ್ಟೇ ಮುಂಬೈ ಉಚ್ಚನ್ಯಾಯಾಲಯದ ನಾಗಪೂರ ನ್ಯಾಯಪೀಠವು ಓರ್ವ ಬಾಲ ಲೈಂಗಿಕ ಶೋಷಣೆಯ ಪ್ರಕರಣದಲ್ಲಿ ತೀರ್ಪು ನೀಡಿತ್ತು. ಹಾಗೂ ಲೈಂಗಿಕ ಉದ್ದೇಶದಿಂದ ಮಾಡಿದ ಯಾವುದೇ ಸ್ಪರ್ಶ ಲೈಂಗಿಕ ಶೋಷಣೆಯೇ ಆಗಿದೆ, ಎಂದು ಹೇಳುತ್ತಾ ಸರ್ವೋಚ್ಚ ನ್ಯಾಯಾಲಯವು ಲೈಂಗಿಕ ಶೋಷಣೆಯ ಪ್ರಕರಣದ ಆರೋಪಿಗೆ ಮತ್ತೊಮ್ಮೆ ‘ಪಾಕ್ಸೋ’ ಕಾಯಿದೆಯ ಕಲಂನ ಅಂತರ್ಗತವಾಗಿ ಆರೋಪಿಯೆಂದು ನಿರ್ಧರಿಸಿತು. ಸರ್ವೋಚ್ಚ ನ್ಯಾಯಾಲಯವು ಸ್ಪರ್ಶವು ಬಟ್ಟೆಯ ಮೇಲಾಗಿರಲಿ ಅಥವಾ ‘ಸ್ಕಿನ ಟೂ ಸ್ಕಿನ’ (ಶರೀರಕ್ಕೆ ಶರೀರದ ನೇರ ಸ್ಪರ್ಶವಾಗುವುದು) ಇದರ ಮೇಲೆ ಚರ್ಚೆ ನಡೆಸುತ್ತಾ ಕುಳಿತರೆ, ಆಗ ಪಾಕ್ಸೋ ಕಾಯಿದೆಯ ಉದ್ದೇಶವೇ ಬದಿಗೆ ಸರಿದಂತಾಗುತ್ತದೆ ಎಂದು ಹೇಳಿದೆ.
#SC set aside a judgment of the Bombay High Court while observing that ‘skin-to-skin’ contact was not necessary for the offence of sexual assault under #POCSO.https://t.co/iB9DOLOggn
— IndiaToday (@IndiaToday) November 18, 2021
ಮುಂಬೈ ಉಚ್ಚ ನ್ಯಾಯಾಲಯದ ನಾಗಪುರ ನ್ಯಾಯಪೀಠವು ನೀಡಿದ ತೀರ್ಪಿನಲ್ಲಿ’ ‘ಯಾರಾದರೂ ಸಣ್ಣ ಹುಡುಗಿಯ ಕೈ ಹಿಡಿದುಕೊಂಡು ಅಥವಾ ಪ್ಯಾಂಟಿನ ಚೇನ್ ಬಿಚ್ಚುವುದು, ಈ ವಿಷಯಗಳು ಲೈಂಗಿಕ ಶೋಷಣೆಯ ಅಂತರ್ಗತ ಬರುವುದಿಲ್ಲ. ‘ಪಾಕ್ಸೋ’ನ ಅಂತರ್ಗತ ಈ ವಿಷಯಗಳನ್ನು ಲೈಂಗಿಕ ಕಿರುಕುಳ ಎಂದು ಹೇಳಲು ಆಗುವುದಿಲ್ಲ. ಬಾಲ ಲೈಂಗಿಕ ಅತ್ಯಾಚಾರವನ್ನು ಸಾಬೀತು ಪಡಿಸಲು ಶರೀರಕ್ಕೆ ಶರೀರದ ನೇರ ಸ್ಪರ್ಶವಾಗುವುದು ಅಗತ್ಯವಾಗಿದೆ. ಕೇವಲ ಶರೀರವನ್ನು ದಬ್ಬುವುದು ಅಥವಾ ತಿಳಿಯದೇ ಶರೀರವನ್ನು ಸ್ಪರ್ಶಿಸುವುದಕ್ಕೆ, ಲೈಂಗಿಕ ಕಿರುಕುಳ ಎಂದು ಹೇಳಲು ಸಾಧ್ಯವಿಲ್ಲ.’ ಎಂದು ಹೇಳಿ ನ್ಯಾಯಾಲಯವು ಆರೋಪಿಗೆ ಶಿಕ್ಷೆಯನ್ನು ರದ್ದು ಪಡಿಸಿತ್ತು. ನಾಗಪುರ ನ್ಯಾಯಪೀಠದ ಈ ತೀರ್ಪಿಗೆ ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮರುಸವಾಲು ನೀಡಿತ್ತು.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು