ಆಂಧ್ರಪ್ರದೇಶದ ಅಪ್ರಾಪ್ತ ಬಾಲಕಿಯ ಲೈಂಗಿಕ ಶೋಷಣೆ ಮಾಡಿದ ಪಾದ್ರಿಯ ಬಂಧನ !

ಪೋಲಿಸರಿಂದ ದೂರು ದಾಖಲಿಸಲು ಹಿಂದೇಟು

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗದ ಹಸ್ತಕ್ಷೇಪದ ನಂತರ ಕ್ರಮ

* ಹಿಂದೂ ಸಂತರ ಮೇಲೆ ಇಲ್ಲಸಲ್ಲದ ಆರೋಪದ ಸಂದರ್ಭದಲ್ಲಿ ನಿರಂತರ ವಿಷಕಾರುವ ಕಾಂಗ್ರೆಸ್‍ನವರು, ಜಾತ್ಯತೀತರು, ಪ್ರಸಾರ ಮಾಧ್ಯಮದವರು ಮುಂತಾದವರು ಪಾದ್ರಿಯ ವಿಷಯವಾಗಿ `ಚ’ಕಾರವೆತ್ತುವುದಿಲ್ಲ ಎಂಬುದನ್ನು ಗಮನದಲ್ಲಿಡಿ !- ಸಂಪಾದಕರು

* ದೂರು ದಾಖಲಿಸಲು ಹಿಂದೇಟು ಹಾಕುವ ಪೊಲೀಸರ ವಿರುದ್ಧವೂ ದೂರನ್ನು ದಾಖಲಿಸಿ ಅವರನ್ನು ಸಹ ಕಾರಾಗೃಹಕ್ಕೆ ಅಟ್ಟಬೇಕು !- ಸಂಪಾದಕರು

ಪಾದ್ರಿ ಉಪ್ಪಳಪತಿ ರವೀಂದ್ರ ಪ್ರಸನ್ನ ಕುಮಾರ

ಕರ್ನೂಲು (ಆಂಧ್ರಪ್ರದೇಶ) – ಚರ್ಚ್‍ನಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಲೈಂಗಿಕ ಶೋಷಣೆ ಮಾಡಿರುವ ಪ್ರಕರಣದಲ್ಲಿ ಇಲ್ಲಿಯ ಚೆಟ್ಟಿವೇದು ಗ್ರಾಮದಲ್ಲಿನ ಪಾದ್ರಿ ಉಪ್ಪಳಪತಿ ರವೀಂದ್ರ ಪ್ರಸನ್ನ ಕುಮಾರನನ್ನು ಬಂಧಿಸಲಾಗಿದೆ. ಆರಂಭದಲ್ಲಿ ಪೊಲೀಸರು ದೂರನ್ನು ನೋಂದಾಯಿಸಲು ನಿರಾಕರಿಸುತ್ತಿದ್ದರು ಮತ್ತು ಮಾತುಕತೆ ಮಾಡಿ ಈ ಪ್ರಕರಣವನ್ನು ಮುಚ್ಚುವ ಪ್ರಯತ್ನ ಮಾಡುತ್ತಿದ್ದರು. ಆದರೆ ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ದ ಹಸ್ತಕ್ಷೇಪದ ನಂತರ ಪೊಲೀಸರು ದೂರನ್ನು ದಾಖಲಿಸಿ ಪಾದ್ರಿಯನ್ನು ಬಂಧಿಸಿದ್ದಾರೆ. ಪಾದ್ರಿ ಉಪ್ಪಳಪತಿ ರವೀಂದ್ರ ಪ್ರಸನ್ನಕುಮಾರ್ ಈತ ಆಂಧ್ರಪ್ರದೇಶದ ‘ರಾಷ್ಟ್ರೀಯ ಕ್ರೈಸ್ತ ಬೋರ್ಡ್’ನ ಪದಾಧಿಕಾರಿಯಾಗಿದ್ದಾನೆ.