ಸಾಧಕರನ್ನು ತಾಯಿಯಂತೆ ಪ್ರೀತಿಸುವ ಮತ್ತು ತಳಮಳದಿಂದ ಸೇವೆಯನ್ನು ಮಾಡಿ ಶ್ರೀಗುರುಗಳ ಮನಸ್ಸನ್ನು ಗೆದ್ದ ಪೂ. (ಕು.) ದೀಪಾಲಿ ಮತಕರ (೩೩ ವರ್ಷ) ಇವರು ಸನಾತನದ ೧೧೨ ನೇ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನ !

ಸಾಮಾನ್ಯವಾಗಿ ಗುರುಗಳು ಶಿಷ್ಯರಿಗೆ ಆನಂದ ನೀಡುತ್ತಾರೆ. ಅಕ್ಟೋಬರ್ ೨೮ ರಂದು ಕು. ದೀಪಾಲಿ ಮತಕರ ಇವರು ಸಂತಪದವಿಯಲ್ಲಿ ವಿರಾಜಮಾನರಾಗಿ ನನಗೆ ಶಬ್ದಾತೀತ ಆನಂದ ನೀಡಿದರು !  – (ಪರಾತ್ಪರ ಗುರು) ಡಾ. ಆಠವಲೆ (೩೦.೧೦.೨೦೨೧)

ಪೂ. (ಕು.) ದೀಪಾಲಿ ಮತಕರ

ಪ್ರತಿಯೊಬ್ಬ ಸಾಧಕನಿಗೆ ಸತತವಾಗಿ ಆನಂದವನ್ನು ನೀಡಲು ಶ್ರಮಿಸುವ, ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗಬೇಕೆಂದು ಹಾತೊರೆಯುವ, ಸಾಧನೆಯ ಪ್ರತಿಯೊಂದು ಅಡಚಣೆಯನ್ನು ಸಕಾರಾತ್ಮಕವಾಗಿ ಪಾರು ಮಾಡುವ, ತಳಮಳದಿಂದ ಸೇವೆಯನ್ನು ಮಾಡಿ ಶ್ರೀಗುರುಗಳ ಮನಸ್ಸನ್ನು ಗೆಲ್ಲುವ ಪೂ. (ಕು.) ದೀಪಾಲಿ ಮತಕರ ಇವರ ‘ಸಂತ ಸನ್ಮಾನ’ ಸಮಾರಂಭವೆಂದರೆ ಭಾವಮಹೋತ್ಸವೇ ಆಗಿದೆ !

ಪೂ. (ಕು.) ದೀಪಾಲಿ ಮತಕರ (ಬಲಗಡೆ) ಇವರನ್ನು ಸನ್ಮಾನಿಸುತ್ತಿರುವ ಸದ್ಗುರು (ಕು.) ಸ್ವಾತಿ ಖಾಡ್ಯೆ

೨೮ ಅಕ್ಟೋಬರ್ ಈ ದಿನದಂದು ಪೂ. (ಕು.) ದೀಪಾಲಿ ಮತಕರ ಇವರು ಸನಾತನ ಸಂಸ್ಥೆಯ ೧೧೨ ನೇ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನರಾರದು ಎಂದು ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಒಂದು ಸಮಾರಂಭದಲ್ಲಿ ಘೋಷಿಸಿದರು.