ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸ್ಪರ್ಧೆಯಲ್ಲಿ ಭಾರತವು ವಿಜಯಿಯಾದರೆ ಪಾಕಿಸ್ತಾನದಲ್ಲಿ ಅದರ ಸೇಡು ತೀರಿಸಿಕೊಳ್ಳಲು ಹಿಂದೂ ಹುಡುಗಿಯರನ್ನು ಅಪಹರಿಸಲಾಗುತ್ತದೆ ! – ಪಾಕಿಸ್ತಾನದ ನಿರಾಶ್ರಿತ ಹಿಂದೂಗಳಿಂದ ಮಾಹಿತಿ

ಪಾಕಿಸ್ತಾನದಲ್ಲಿನ ಹಿಂದೂಗಳ ಈ ಸ್ಥಿತಿಯು ಭಾರತದಲ್ಲಿರುವ ಹಾಗೂ ಜಗತ್ತಿನಾದ್ಯಂತದ ಹಿಂದೂಗಳಿಗೆ ಲಜ್ಜಾಸ್ಪದ !- ಸಂಪಾದಕರು 

ನವ ದೆಹಲಿ – ಭಾರತ ಮತ್ತು ಪಾಕಿಸ್ತಾನ ನಡುವೆ ಟಿ-20 ವಿಶ್ವಕಪ್ ಸ್ಪರ್ಧೆಯಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿದ ನಂತರ ಪಾಕಿಸ್ತಾನದಲ್ಲಿ ಉತ್ಸವವನ್ನು ಆಚರಿಸುವುದರೊಂದಿಗೆ ಭಾರತದಲ್ಲಿನ ಮುಸಲ್ಮಾನ ಬಹುಸಂಖ್ಯಾತ ಭಾಗಗಳಲ್ಲಿ ಪಟಾಕಿಗಳನ್ನು ಸಿಡಿಸಲಾಯಿತು. ಈ ಬಗ್ಗೆ ದೆಹಲಿಯಲ್ಲಿನ ಆದರ್ಶನಗರದಲ್ಲಿ ವಾಸವಾಗಿರುವ ಪಾಕಿಸ್ತಾನಿ ನಿರಾಶ್ರಿತ ಹಿಂದೂಗಳು, ಹಿಂದೆ ಭಾರತ-ಪಾಕಿಸ್ತಾನ ನಡುವಿನ ಸ್ಪರ್ಧೆಯಲ್ಲಿ ಭಾರತವು ಗೆದ್ದರೆ ಅದರ ಸೇಡು ತೀರಿಸಿಕೊಳ್ಳಲು ಮತಾಂಧರು ಹಿಂದೂಗಳ ಹೆಣ್ಣು ಮಕ್ಕಳನ್ನು ಅಪಹರಿಸುತ್ತಿದ್ದರು ಎಂದು ಹೇಳಿದರು. ಈ ವಿಷಯವಾಗಿ ಹೆಚ್ಚು ಮಾಹಿತಿಯನ್ನು ನೀಡಲು ಅವರು ನಿರಾಕರಿಸಿದರು; ಏಕೆಂದರೆ ಅವರ ಸಂಬಂಧಿಕರು ಇನ್ನೂ ಪಾಕಿಸ್ತಾನದಲ್ಲಿರುವುದರಿಂದ ಅವರಿಗೆ ಇದರಿಂದ ಅಪಾಯವಾಗಬಹುದು ಎಂದು ಹೇಳಿದರು.

ಓರ್ವ ನಿರಾಶ್ರಿತ ಮಹಿಳೆಯು, ‘4-5 ವರ್ಷಗಳ ಹಿಂದೆ ಭಾರತವು ಒಂದು ಸ್ಪರ್ಧೆಯನ್ನು ಗೆದ್ದಿತ್ತು, ಆಗ ಅದರ ಸೇಡು ತೀರಿಸಿಕೊಳ್ಳುವುದಕ್ಕಾಗಿ 3 ಗುಜರಾತಿ ಭಾಷೆಯ ಹಿಂದೂ ಹೆಣ್ಣುಮಕ್ಕಳನ್ನು ಅಪಹರಿಸಲಾಗಿತ್ತು. ಅವರ ಸ್ಥಿತಿಯನ್ನು ಹಾಳು ಮಾಡಿದ್ದರು. ಆ ರೀತಿಯ ಘಟನೆಗಳಲ್ಲಿ ಕೆಲವೊಮ್ಮೆ ಆ ಹುಡುಗಿಯರು ವಾಪಾಸು ಬರುತ್ತಿದರು ಮತ್ತು ಕೆಲವೊಮ್ಮೆ ಅವರನ್ನು ಪತ್ತೆ ಹಚ್ಚಲೂ ಆಗುತ್ತಿರಲಿಲ್ಲ.’ ಈ ಮಹಿಳೆಯು ಕ್ಯಾಮೆರಾದ ಮುಂದೆ ಬಂದು ಮಾಹಿತಿ ನೀಡಲು ಭಯಪಡುತ್ತಿದ್ದರು. ಅವರು, ನನ್ನ ಸಂಬಂಧಿಕರು ಪಾಕಿಸ್ತಾನದಲ್ಲಿದ್ದಾರೆ. ಒಂದು ವೇಳೆ ನಾನೇನಾದರೂ ಮುಂದೆ ಬಂದು ಮಾತನಾಡಿದರೆ ನನ್ನ ಸಂಬಂಧಿಕರ ಹತ್ಯೆ ಮಾಡಲಾಗುವುದು’ ಎಂದು ಹೇಳಿದರು.