
ಗುರುಕೃಪೆಯಿಂದ ಸನಾತನದ ಧರ್ಮಪ್ರಚಾರಕರಾದ ಪೂ. ರಾಮಾನಂದ ಗೌಡ ( ಸನಾತನದ ೭೫ ನೇ ಸಮಷ್ಟಿ ಸಂತರು) ಇವರ ಮಾರ್ಗದರ್ಶನಕ್ಕನುಸಾರ ರಾಜ್ಯದಲ್ಲಿ ಸೆಪ್ಟೆಂಬರ್ ೧ ರಿಂದ ೩೦ ರ ವರೆಗೆ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಮಾನ’ವನ್ನು ನಡೆಸಲಾಯಿತು. ಅನಂತರ ಇದನ್ನು ಅಕ್ಟೋಬರ್ ೩೧ ರ ವರೆಗೆ ವಿಸ್ತರಿಸಲಾಯಿತು. ಈ ಲೇಖನದಲ್ಲಿ ಪೂ ರಮಾನಂದ ಗೌಡ ಇವರಿಗೆ ಅಭಿಯಾನದ ಸಂಕಲ್ಪನೆ ಹೇಗೆ ಬಂದಿತು ? ಅವರು ತಳಮಳದಿಂದ ಮತ್ತು ಪರಿಶ್ರಮ ತೆಗೆದುಕೊಂಡು ಈ ಅಭಿಯಾನದ ಸುನಿಯೋಜನೆಯನ್ನು ಹೇಗೆ ಮಾಡಿದರು ಮತ್ತು ಅದರಿಂದ ನಮಗೇನು ಕಲಿಯಲು ಸಿಕ್ಕಿತು ? ಎಂಬುದನ್ನು ನೀಡಲಾಗಿದೆ.
ಪ.ಪೂ. ಗುರುದೇವರು ಒಂದು ಗ್ರಂಥದಲ್ಲಿ ‘ಕಾಲಾನುಸಾರ ಸನಾತನ ಧರ್ಮದ ಜ್ಞಾನದೆಡೆಗೆ ಜೀವಗಳು ಆಕರ್ಷಿತವಾಗುತ್ತವೆ’ ಎಂದು ಹೇಳಿದ್ದಾರೆ. ಈ ಅಭಿಯಾನ ನಡೆಸುವಾಗ ‘ಅನೇಕರು ಈ ಜ್ಞಾನದೆಡೆಗೆ ಆಕರ್ಷಿತರಾಗುತ್ತಿದ್ದಾರೆ’ ಎಂಬುದು ನಮ್ಮ ಗಮನಕ್ಕೆ ಬಂದಿತು. ಅದರಿಂದ ನಮಗೆ ಪ.ಪೂ. ಗುರುದೇವರ ಮೇಲಿನ ವಾಕ್ಯ ಅನುಭವಿಸಲಿಕ್ಕಾಯಿತು.
(ಭಾಗ ೧)
೧. ಪೂ. ರಮಾನಂದ ಗೌಡ ಇವರಿಗೆ ಈ ಅಭಿಯಾನದ ಸಂಕಲ್ಪನೆ ಬಂದ ಪರಿ
೧ ಅ. ‘ಸಾಧಕರಿಂದ ಹೆಚ್ಚು ಸೇವೆ ಹೇಗೆ ಮಾಡಿಸುವುದು ?’ ಎಂದು ಪೂ. ರಮಾನಂದ ಗೌಡ ಇವರ ಮನಸ್ಸಿನಲ್ಲಿ ವಿಚಾರ ಬರುವುದು ಮತ್ತು ಅದಕ್ಕಾಗಿ ಅವರು ಗುರುದೇವರ ಚರಣಗಳಲ್ಲಿ ಪ್ರಾರ್ಥಿಸುವುದು : ಗುರುಪೂರ್ಣಿಮೆಯ ಕಾಲಾವಧಿಯಲ್ಲಿ ಎಲ್ಲ ಸಾಧಕರು ತುಂಬ ಉತ್ಸಾಹದಿಂದ, ತಳಮಳದಿಂದ ಮತ್ತು ಆಯೋಜನಾಬದ್ಧವಾಗಿ ಸೇವೆ ಮಾಡಿದ್ದರು. ಗುರುಪೂರ್ಣಿಮೆಯಾದ ನಂತರ ಸಾಧಕರ ಸೇವೆಯ ದೃಷ್ಟಿಯಿಂದ ಪ್ರಯತ್ನವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಅವರಿಂದ ಸೀಮಿತ ಪ್ರಮಾಣದಲ್ಲಿ ಸೇವೆಯಾಗುತ್ತಿತ್ತು. ಹಾಗಾಗಿ ‘ಸಾಧಕರಿಂದ ಹೆಚ್ಚು ಸೇವೆ ಮಾಡುವುದು ? ಅವರನ್ನು ಹೇಗೆ ಮುಂದೆ ಕರೆದೊಯ್ಯುವುದು ?’ ಎಂಬ ವಿಚಾರಗಳು ಪೂ. ರಮಾನಂದ ಅಣ್ಣನವರ ಮನಸ್ಸಿನಲ್ಲಿ ಬರುತ್ತಿತ್ತು ಮತ್ತು ಅದಕ್ಕಾಗಿ ಅವರು ಗುರುದೇವರ ಚರಣಗಳಲ್ಲಿ ಪ್ರಾರ್ಥನೆಯನ್ನು ಮಾಡುತ್ತಿದ್ದರು.
೧ ಆ. ‘ಸನಾತನದ ಗ್ರಂಥ ಸಂಪತ್ತಿನ ಜ್ಞಾನವನ್ನು ಸಮಾಜದ ವರೆಗೆ ತಲುಪಿಸಲು ‘ಗ್ರಂಥ ಅಭಿಯಾನ ಮಾಡಬಹುದು’ ಎಂಬ ವಿಚಾರ ಪೂ. ರಮಾನಂದ ಗೌಡ ಇವರ ಮನಸ್ಸಿನಲ್ಲಿ ಬರುವುದು : ಪೂ. ಅಣ್ಣನವರು ಒಂದು ದಿನ ಧ್ಯಾನಮಂದಿರದಲ್ಲಿ ಕುಳಿತಿದ್ದರು. ಅಗ ಅವರಿಗೆ ಸನಾತನದ ಗ್ರಂಥಗಳ ಬಗ್ಗೆ ಮುಂದಿನ ವಿಚಾರಗಳು ಬರುತ್ತಿದ್ದವು, ‘ಸನಾತನದ ಗ್ರಂಥ ಸಂಪತ್ತು ವಿಫುಲವಾಗಿದೆ. ಅದರಲ್ಲಿ ಅಮೂಲ್ಯ ಜ್ಞಾನವಿದೆ. ಆ ಜ್ಞಾನವನ್ನು ಸಮಾಜದ ಪ್ರತಿಯೊಬ್ಬ ಜಿಜ್ಞಾಸುವಿನವರೆಗೆ ತಲುಪಿಸಲು ನಾವು ಕಡಿಮೆ ಬೀಳುತ್ತಿದ್ದೇವೆ. ಅದಕ್ಕಾಗಿ ನಾವು ಹೇಗೆ ಪ್ರಯತ್ನಿಸಬಹುದು ?
ಅನಂತರ ಸಾಧಕರ ಸೇವೆ ಹೆಚ್ಚಿಸಲು ಮತ್ತು ಸನಾತನದ ಗ್ರಂಥಗಳನ್ನು ಸಮಾಜದವರೆಗೆ ತಲುಪಿಸಲು ನಾವು ‘ಗ್ರಂಥ ಅಭಿಯಾನ ನಡೆಸಬಹುದು’ ಎಂಬ ವಿಚಾರ ಅವರ ಮನಸ್ಸಿನಲ್ಲಿ ಬಂದಿತು. ಅನಂತರ ಅವರ ಮನಸ್ಸಿನಲ್ಲಿ ‘ಈ ಗ್ರಂಥ ಅಭಿಯಾನ’ದ ಆಯೋಜನೆ ಹೇಗೆ ಮಾಡಬಹುದು ? ಅದರ ಅಂತರ್ಗತ ಯಾವೆಲ್ಲ ಸೇವೆಗಳು ಬರುತ್ತವೆ ಮತ್ತು ಆ ಸೇವೆಗಳ ಜವಾಬ್ದಾರಿ ಯಾರಿಗೆಲ್ಲ ಕೊಡಬಹುದು ? ಹೀಗೆ ಎಲ್ಲ ವಿಚಾರಗಳು ತನ್ನಷ್ಟಕ್ಕೆ ಬರ ತೊಡಗಿತು. ಅವರು ಈ ಅಭಿಯಾನದ ಬಗ್ಗೆ ಹೇಳುವಾಗ ‘ಅವರಿಗೆ ಇವೆಲ್ಲ ವಿಚಾರಗಳನ್ನು ಪ.ಪೂ. ಗುರುದೇವರೇ ನೀಡುತ್ತಿದ್ದಾರೆ’ ಎಂದು ನಮಗನ್ನಿಸುತ್ತಿತ್ತು.
೧ ಇ. ‘ಪ.ಪೂ. ಗುರುದೇವರು ನೀಡಿದ ಜ್ಞಾನವು ಸನಾತನ ಧರ್ಮ ಜ್ಞಾನವಾಗಿದೆ; ಹಾಗಾಗಿ ಈ ಅಭಿಯಾನಕ್ಕೆ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ ಎಂದು ಹೆಸರಿಡೋಣ ಎಂದು ಪೂ. ರಮಾನಂದ ಅಣ್ಣನವರ ಮನಸ್ಸಿನಲ್ಲಿ ವಿಚಾರ ಬಂದಿತು.
೨. ಅಭಿಯಾನ ಆರಂಭವಾಗುವ ಮೊದಲು ಪೂ. ರಮಾನಂದ ಗೌಡ ಇವರು ಸಾಧಕರಿಗೆ ಮಾಡಿದ ಮಾರ್ಗದರ್ಶನ
೨ ಅ. ಅಭಿಯಾನದ ಸೇವೆಯನ್ನು ಆಯೋಜನಾಬದ್ಧವಾಗಿ ಮಾಡಲು ಪ್ರಯತ್ನಿಸಬೇಕು ! : ಪೂ. ರಮಾನಂದ ಗೌಡ ಇವರು, ಜ್ಞಾನಶಕ್ತಿ ಅಭಿಯಾನವನ್ನು ಆರಂಭಿಸುವ ಮೊದಲು ಒಂದು ಸತ್ಸಂಗದಲ್ಲಿ ಸಾಧಕರಿಗೆ ಮಾರ್ಗರ್ಶನ ಮಾಡುವಾಗ ‘ಯಾವುದೇ ಸೇವೆ ಮಾಡುವಾಗ ಅದರ ಪೂರ್ವಸಿದ್ಧತೆ ಒಳ್ಳೆಯದಾಗಿರಬೇಕು’. ‘ಸೇವೆಯ ಆಯೋಜನೆ ಲಿಖಿತವಾಗಿರಬೇಕು, ಆಗಲೇ ಆ ಸೇವೆ ಶೇ. ೫೦ ರಷ್ಟು ಪೂರ್ಣವಾಗುತ್ತದೆ’ ಎಂದು ಗುರುದೇವರು ನಮಗೆ ಕಲಿಸಿದ್ದಾರೆ. ಆದುದರಿಂದ ಅಭಿಯಾನದ ಸೇವೆ ಆಯೋಜನಾಬದ್ಧವಾಗಿ ಮಾಡಲು ಪ್ರಯತ್ನಿಸೋಣ, ಎಂದರು.
೨ ಆ. ಜ್ಞಾನದಾನವು ಸರ್ವಶ್ರೇಷ್ಠ ದಾನವಾಗಿದೆ : ‘ಜ್ಞಾನದಾನವು ಅನ್ನದಾನ, ವಸ್ತ್ರದಾನ ಮತ್ತು ವಿದ್ಯಾದಾನಗಳಿಗಿಂತ ಸರ್ವಶ್ರೇಷ್ಠ ದಾನವಾಗಿದೆ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಅನ್ನದಾನವು ಒಂದು ಸಮಯ ಅಥವಾ ಒಂದು ದಿನಕ್ಕೆ ಸೀಮಿತವಾಗಿರುತ್ತದೆ. ವಸ್ತ್ರದಾನವು ಕೆಲವು ತಿಂಗಳಿಗೆ ಅಥವಾ ಒಂದು ವರ್ಷಕ್ಕೆ ಸೀಮಿತವಾಗಿರುತ್ತದೆ. ಆದರೆ ವಿದ್ಯಾದಾನವು ಒಂದು ಜನ್ಮಕ್ಕಷ್ಟೇ ಸೀಮಿತವಿರುತ್ತದೆ; ಆದರೆ ಜ್ಞಾನದಾನವು ಜೀವವನ್ನು ಮೋಕ್ಷದ ವರೆಗೆ ಕರೆದೊಯ್ಯುತ್ತದೆ. ಹಾಗಾಗಿ ಜ್ಞಾನದಾನವು ಸರ್ವಶ್ರೇಷ್ಠ ದಾನವಾಗಿದೆ.
೨ ಇ. ‘ಸನಾತನ ಧರ್ಮದ ಜ್ಞಾನಶಕ್ತಿಯ ಪ್ರಸಾರ ಮಾಡಿ ಪ್ರತಿಯೊಬ್ಬ ಜಿಜ್ಞಾಸುವರೆಗೆ ಈ ಅಮೂಲ್ಯ ಜ್ಞಾನವನ್ನು ತಲುಪಿಸುವುದು ಕಾಲಾನುಸಾರ ಸರ್ವಶ್ರೇಷ್ಠ ಸಮಷ್ಟಿ ಸೇವೆಯಾಗಿದೆ !’ : ಪ.ಪೂ. ಗುರುದೇವರು ನಮಗೆ ಗ್ರಂಥದ ಮಾಧ್ಯಮದಿಂದ ಜ್ಞಾನವನ್ನು ನೀಡಿದ್ದಾರೆ. ಈಗ ‘ಸಮಾಜಕ್ಕೆ ಹೋಗಿ ಸನಾತನ ಧರ್ಮದ ಜ್ಞಾನಶಕ್ತಿಯ ಪ್ರಸಾರ ಮಾಡಿ ಪ್ರತಿಯೊಬ್ಬ ಜಿಜ್ಞಾಸುವಿನ ವರೆಗೆ ಈ ಅಮೂಲ್ಯ ಜ್ಞಾನವನ್ನು ತಲುಪಿಸುವುದು ಕಾಲಾನುಸಾರ ಸರ್ವಶ್ರೇಷ್ಠ ಸಮಷ್ಟಿ ಸೇವೆಯಾಗಿದೆ. ಅನಂತರ ಪೂ. ಅಣ್ಣನವರು ‘ಈ ಅಭಿಯಾನದ ಅಂತರ್ಗತ ಪ್ರಸಾರ, ಸೋಶಿಯಲ್ ಮೀಡಿಯಾ, ಪ್ರಸಿದ್ಧಿ, ಆಯೋಜನೆ, ಸಾಧಕರಲ್ಲಿ ಜಾಗೃತಿ ಮೂಡಿಸುವುದು, ಈ ಸೇವೆಗಳು ಬರುತ್ತವೆ’ ಎಂದು ಹೇಳಿ ‘ಜ್ಞಾನಶಕ್ತಿ ಅಭಿಯಾನ ನಡೆಸಲು ಹೇಗೆ ಪ್ರಯತ್ನಿಸಬೇಕು?’ ಎಂಬ ಬಗ್ಗೆ ಸಾಧಕರಿಗೆ ಮಾರ್ಗದರ್ಶನ ಮಾಡಿದರು.
– ಶ್ರೀ. ಕಾಶಿನಾಥ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ.೬೯), ಸೌ. ಮಂಜುಳಾ ರಮಾನಂದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೫) ಮತ್ತು ಶ್ರೀ. ವಿಜಯ ರೇವಣಕರ (ಆಧ್ಯಾತ್ಮಿಕ ಮಟ್ಟ ಶೇ. ೬೫), ಕರ್ನಾಟಕ (ಅಕ್ಟೋಬರ್ ೨೦೨೧)
(ಮುಂದುವರಿಯುವುದು)

ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು