ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರಿಂದ ಓರ್ವ ಹಿಂದೂವಿನ ಹತ್ಯೆ

ಪುಲವಾಮದಲ್ಲಿಯೂ ಓರ್ವ ಮುಸಲ್ಮಾನನ ಹತ್ಯೆ

ಇಂದು 33 ವರ್ಷಗಳ ನಂತವೂ ಕಾಶ್ಮೀರವು ಹಿಂದೂಗಳಿಗಾಗಿ ಅಸುರಕ್ಷಿತವಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !- ಸಂಪಾದಕರು 

ಶ್ರೀನಗರ (ಜಮ್ಮು-ಕಾಶ್ಮೀರ) – ಕಾಶ್ಮೀರದಲ್ಲಿ ಮತ್ತೊಮ್ಮೆ ಜಿಹಾದಿ ಭಯೋತ್ಪಾದಕರು ಹಿಂದೂವನ್ನು ಗುರಿಯಾಗಿಸಿದರು. ಶ್ರೀನಗರದ ಈದಗಾಹದಲ್ಲಿ ಬೀದಿ ವ್ಯಾಪಾರಿಯಾಗಿದ್ದ ಅರವಿಂದ ಕುಮಾರ ಸಾಹಾನನ್ನು ಭಯೋತ್ಪಾದಕರು ಗುಂಡಿಟ್ಟು ಹತ್ಯೆ ಮಾಡಿದರು. ಇವರು ಬಿಹಾರ ವಾಸಿಯಾಗಿದ್ದರು. ಇನ್ನೊಂದು ಘಟನೆಯಲ್ಲಿ ಪುಲವಾಮಾದಲ್ಲಿ ಸಗೀರ ಅಹಮದ ಎಂಬ ಬಡಿಗನನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ಅವರು ಉತ್ತರಪ್ರದೇಶದವರಾಗಿದ್ದರು. ಪಾಕಿಸ್ತಾನದ ಗೂಢಚರ ಸಂಸ್ಥೆ ಐ.ಎಸ್.ಐ. ಮತ್ತು ಜಿಹಾದಿ ಭಯೋತ್ಪಾದಕ ಸಂಘಟನೆಯು ಕಾಶ್ಮೀರದಲ್ಲಿ ಸುಮಾರು 200 ಮುಸಲ್ಮಾನೇತರರ ಹತ್ಯೆ ಮಾಡುವ ಗುರಿಯನ್ನು ಹೊಂದಿದೆ ಎಂದು ಗೌಪ್ಯ ಮಾಹಿತಿಯು ಸಿಕ್ಕಿದೆ. ಈ ಸಂಚಿನಿಂದಲೇ ಈ ಹತ್ಯೆಯಾಗುತ್ತಿದೆ, ಎಂದು ಹೇಳಲಾಗುತ್ತಿದೆ. (ಪಾಕಿಸ್ತಾನ ಮತ್ತು ಜಿಹಾದಿ ಭಯೋತ್ಪಾದಕ ಸಂಘಟನೆಗಳು ಕಾಶ್ಮೀರದಲ್ಲಿ ದಾಳಿ ಮಾಡುವ ಸಂಚನ್ನು ರೂಪಿಸುತ್ತಿವೆ ಮತ್ತು ಅವರು ಕೃತಿಯಲ್ಲಿಯೂ ತರುತ್ತಿವೆ, ಇದು ಭಾರತೀಯ ಭದ್ರತಾ ಪಡೆಗೆ ನಾಚಿಕೆಯ ಸಂಗತಿಯಾಗಿದೆ ! ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗದಿರಲು ಪಾಕಿಸ್ತಾನ ಕಾರಣವಾಗಿದೆ ಮತ್ತು ಅದನ್ನು ನಾಶ ಮಾಡಿದರೆ ಮಾತ್ರ ಭಯೋತ್ಪಾದನೆ ನಾಶವಾಗುತ್ತದೆ ! – ಸಂಪಾದಕರು)