ದಕ್ಷಿಣ ಏಷ್ಯಾವನ್ನು ಇಸ್ಲಾಮಿ ಆಳ್ವಿಕೆಗೆ ಒಳಪಡಿಸುವ ಕೆಲಸ ನಡೆಯುತ್ತಿದೆ – ಕಾಂಗ್ರೆಸ್‍ನ ಸಂಸದ ಮನೀಷ ತಿವಾರಿ

ಕಾಶ್ಮೀರ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಯಾಗುತ್ತಿರುವ ಪ್ರಕರಣ

ಮತಾಂಧರಿಂದ ಏನೆಲ್ಲ ಹಿಂದೂದ್ವೇಷಿ ಇಸ್ಲಾಮಿ ಧೋರಣೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಅದಕ್ಕೆ ಕಾಂಗ್ರೆಸ್ ಕಳೆದ 100 ರ್ಷಗಳಿಂದ ಸೊಪ್ಪುಹಾಕಿದೆ. ಆದ್ದರಿಂದಲೇ ಇಂದು ಪಾಕಿಸ್ತಾನ ಮತ್ತು ಬಾಂಗ್ಲಾದೇಶ, ಅದೇ ರೀತಿ ಭಾರತದ ಕಾಶ್ಮೀರದಲ್ಲಿನ ಹಿಂದೂಗಳ ನರಮೇಧವಾಯಿತು ಹಾಗೂ ಆಗುತ್ತಿದೆ. ಆದ್ದರಿಂದ ಕಾಂಗ್ರೆಸ್ ಈಗ ಪ್ರಾಯಶ್ಚಿತ್ತವೆಂದು ಮತಾಂಧರನ್ನು ವಿರೋಧಿಸಿ ಹಿಂದೂಗಳ ರಕ್ಷಣೆಯನ್ನು ಮಾಡಬೇಕು ಮತ್ತು ಹಿಂದೂ ರಾಷ್ಟ್ರಕ್ಕಾಗಿ ಕೃತಿ ಮಾಡಬೇಕು, ಆಗ ಮಾತ್ರ ಕಾಂಗ್ರೆಸ್‍ಗೆ ಹಿಂದೂಗಳ ಬಗ್ಗೆ ನಿಜವಾಗಿಯೂ ಕಾಳಜಿ ಇದೆ ಎಂದು ಗಮನಕ್ಕೆ ಬರುವುದು !- ಸಂಪಾದಕರು 

ಕಾಂಗ್ರೆಸ್‍ನ ಸಂಸದ ಮನೀಷ ತಿವಾರಿ

ನವ ದೆಹಲಿ – ಕಾಶ್ಮೀರದಲ್ಲಿ ಮುಸಲ್ಮಾನೇತರರ ಹತ್ಯೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಮತ್ತು 9 ಯೋಧರು ಹುತಾತ್ಮರಾದುದು ಇವುಗಳಿಗೆ ಪರಸ್ಪರ ಏನಾದರು ಸಂಬಂಧವಿದೆಯೇ ? ಬಹುಶ ಇರಬಹುದು. ದಕ್ಷಿಣ ಏಷ್ಯಾವನ್ನು ಇಸ್ಲಾಂನ ಆಡಳಿತದಡಿಯಲ್ಲಿ ತರಲು ಕೆಲಸ ನಡೆಯುತ್ತಿದೆ, ಎಂದು ಕಾಂಗ್ರೆಸ್‍ನ ಸಾಂಸದ ಹಾಗೂ ಮಾಜಿ ಕೇಂದ್ರ ಸಚಿವ ಮನೀಷ ತಿವಾರಿ ಇವರು ಟ್ವೀಟ್ ಮಾಡಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಕಾಶ್ಮೀರ, ಅದೇ ರೀತಿ ಬಾಂಗ್ಲಾದೇಶಗಳಲ್ಲಿ ಹಿಂದೂಗಳ ಹತ್ಯೆ ಆಗುತ್ತಿರುವುದು, ಭಾರತೀಯ ಯೋಧರು ಹುತಾತ್ಮರಾಗುತ್ತಿರುವುದರ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.