ಸಿಖ್ಕರ ಧರ್ಮಗ್ರಂಥ ‘ಶ್ರೀ ಗುರು ಗ್ರಂಥ ಸಾಹಿಬ್’ನ ವಿಡಂಬನೆ ಮಾಡಿದನೆಂಬ ಆರೋಪಿಸಿ ಹತ್ಯೆ
ಕುರಾನ್, ಶ್ರೀ ಗುರು ಗ್ರಂಥ ಸಾಹಿಬ್ ಇತ್ಯಾದಿಗಳ ವಿಡಂಬನೆಯಾದಾಗ ನೇರವಾಗಿ ಕಾನೂನನ್ನು ಕೈಗೆತ್ತಿಕೊಳ್ಳಲಾಗುತ್ತದೆ, ಆದರೆ ಹಿಂದೂಗಳ ಧರ್ಮಗ್ರಂಥಗಳು ಮತ್ತು ದೇವತೆಗಳಿಗೆ ಅವಮಾನ ಮಾಡಿದರೂ ಎಲ್ಲರೂ ಹೇಗೆ ಶಾಂತವಾಗಿರುತ್ತಾರೆ ! ಹಿಂದೂಗಳು ಕಾನೂನು ರೀತಿಯಲ್ಲಾದರೂ ವಿರೋಧಿಸಲು ಪ್ರಯತ್ನಿಸಿದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಈ ವಿರೋಧವನ್ನು ಹತ್ತಿಕ್ಕಲಾಗುತ್ತದೆ ! ಈಗ ಈ ಘಟನೆಯ ಬಗ್ಗೆ ಎಲ್ಲಾ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಶಾಂತವಾಗಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ನವ ದೆಹಲಿ : ಕಳೆದ ಕೆಲವು ತಿಂಗಳುಗಳಿಂದ ದೆಹಲಿಯ ಸಿಂಘೂ ಗಡಿಯಲ್ಲಿ ರೈತರು ಕೇಂದ್ರ ಸರಕಾರದ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿದ್ದಾರೆ. ಇಲ್ಲಿ, ಸಿಖ್ಕರ ಪವಿತ್ರ ಗ್ರಂಥ ‘ಶ್ರೀ ಗುರು ಗ್ರಂಥ ಸಾಹಿಬ್’ನ ವಿಡಂಬನೆ ಮಾಡಿದ ಆರೋಪದ ಮೇಲೆ ಓರ್ವ ಸಿಕ್ಖ್ನು ಒಬ್ಬ ವ್ಯಕ್ತಿಯ ಕೈ ಮತ್ತು ಕಾಲನ್ನು ಕತ್ತರಿಸಿ ಆತನ ಹತ್ಯೆ ಮಾಡಿದನು. ರೈತರ ಆಂದೋಲನದ ಮುಖ್ಯ ಸ್ಥಳದ ಬ್ಯಾರಿಕೇಡ್ ಮೇಲೆ ಯುವಕನ ಶವ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವಕನು ಅಮೃತಸರದ ತರಣ ತಾರಣ ಮೂಲದವನು ಎಂದು ಹೇಳಲಾಗಿದೆ. ಸಿಕ್ಖ್ ಯೋಧರ ಸಮೂಹವೆಂದೂ ಕರೆಯಲ್ಪಡುವ ‘ನಿಹಂಗಾ’ ಸಮೂಹದ ಮೇಲೆ ಈ ಯುವಕನನ್ನು ಹತ್ಯೆಗೈದ ಆರೋಪವಿದೆ. ಈ ಹತ್ಯೆಯ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಪೊಲೀಸರು ಘಟನಾಸ್ಥಳಕ್ಕೆ ತಲುಪಿದರು. ಅವರಿಗೆ ವಿರೋಧವನ್ನೂ ಎದುರಿಸಬೇಕಾಯಿತು; ಆದರೆ ಈ ಪರಿಸ್ಥಿತಿಯಲ್ಲಿಯೂ ಪ್ರಸಂಗಾವಧಾನದಿಂದ ಪೊಲೀಸರು ಮೃತದೇಹವನ್ನು ವಶಕ್ಕೆ ತೆಗೆದುಕೊಂಡರು, ಹಾಗೆಯೇ ಅಪರಿಚಿತ ಕೊಲೆಗಾರರ ವಿರುದ್ಧ ಅಪರಾಧವನ್ನು ದಾಖಲಿಸಿದ್ದಾರೆ.
The group claimed the man committed sacrilege of their holy scripture | @tweets_amit https://t.co/0WxrxOHDmf
— IndiaToday (@IndiaToday) October 15, 2021

ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation