ಹಬ್ಬದ ಸಮಯದಲ್ಲಿ ದೆಹಲಿಯಲ್ಲಿ ರಕ್ತಪಾತ ನಡೆಸಲು ಉಗ್ರರ ಪ್ರಯತ್ನ ! – ಗೂಢಚರರಿಂದ ಮಾಹಿತಿ

ದೇಶದಲ್ಲಿ ಕೇವಲ ಹಿಂದೂಗಳ ಹಬ್ಬಗಳ ಸಮಯದಲ್ಲಿ ಜಿಹಾದಿ ಉಗ್ರರಿಂದ ರಕ್ತಪಾತ ನಡೆಸುವ ಪ್ರಯತ್ನಗಳಾಗುತ್ತವೆ, ಇದರಿಂದ ‘ಉಗ್ರರಿಗೆ ಧರ್ಮವಿದೆ’, ಎಂಬುದು ಗಮನಕ್ಕೆ ಬರುತ್ತದೆ ! ರಂಜಾನ್, ಬಕರಿ ಇದ್, ಮೊಹರಂ, ಕ್ರಿಸ್ಮಸ್, ಗೂಡಫ್ರೈಡೆ ಮುಂತಾದ ಹಬ್ಬದ ಸಮಯದಲ್ಲಿ ಯಾವುದೇ ಅಪಾಯವಿರುವುದಿಲ್ಲ, ಇದನ್ನು ಗಮನದಲ್ಲಿಡಿ.- ಸಂಪಾದಕರು

ನವದೆಹಲಿ – ದೇಶದ ರಾಜಧಾನಿ ನವದೆಹಲಿಯಲ್ಲಿ ಹಿಂದೂಗಳ ಹಬ್ಬಗಳ ಸಮಯದಲ್ಲಿ ಜಿಹಾದಿ ಉಗ್ರರಿಂದ ರಕ್ತಪಾತ ನಡೆಯಬಹುದೆಂದು ಗೂಢಚರ ಇಲಾಖೆಯ ಗೌಪ್ಯ ಮಾಹಿತಿಯಿಂದ ಜಾಗರೂಕತೆಯ ಎಚ್ಚರಿಕೆಯನ್ನು ನೀಡಲಾಗಿದೆ. ಪೊಲೀಸರಿಂದ ಭದ್ರತಾವ್ಯವಸ್ಥೆಯಲ್ಲಿ ಹೆಚ್ಚಳ ಮಾಡಲಾಗಿದೆ. ಹಾಗೂ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ.