ಪುರಿಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಪ್ರತಿಪಾದನೆ !
|
ಆಗ್ರಾ (ಉತ್ತರಪ್ರದೇಶ) – ವರ್ತಮಾನದ ರಾಜಕೀಯ ವಿದ್ಯಮಾನವು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಪಕ್ಷದಲ್ಲಿದೆ. ರಾಹುಲ ಗಾಂಧಿಯವರು ಸಹ ಈಗ ತಮ್ಮನ್ನು ‘ಹಿಂದೂ’ ಎಂದು ಹೇಳತೊಡಗಿದ್ದಾರೆ. ಅವರು ತಮ್ಮನ್ನು ’ಜನಿವಾರ ಧರಿಸಿದ ಬ್ರಾಹ್ಮಣ’ನಿದ್ದೇನೆ ಎಂದು ಘೋಷಿಸಿದ್ದಾರೆ. ಇದರಿಂದಾಗಿ ಮುಂಬರುವ ೩ ವರ್ಷಗಳಲ್ಲಿ ಭಾರತವು ಹಿಂದೂ ರಾಷ್ಟ್ರವಾಗುವುದು ಎಂದು ಓಡಿಶಾದ ಪುರಿಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಆಗ್ರಾ ಜಿಲ್ಲೆಯ ನಗಲಾ ಬಿಂದು ಎಂಬ ಊರಿಗೆ ಬಂದಾಗ ಹೇಳಿದ್ದಾರೆ. ಅವರು ಪ್ರಸ್ತುತ ಆಗ್ರಾದ ಪ್ರವಾಸದಲ್ಲಿದ್ದಾರೆ. ಅಲ್ಲಿನ ಭಾಜಪದ ಮುಖಂಡ ಹರೇಂದ್ರ ಸಿಂಹ ರವರ ಮನೆಯಲ್ಲಿ ಭಾವಿಕರೊಂದಿಗೆ ಮಾತನಾಡುವಾಗ ಅವರು ಈ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ. ‘ಹಿಂದೂಗಳು ಸನಾತನ ಪರಂಪರೆಯ ಪ್ರಚಾರ ಮತ್ತು ಪ್ರಸಾರಕ್ಕಾಗಿ ಕಾರ್ಯ ಮಾಡಬೇಕು’ ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ.
ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಮಂಡಿಸಿದ ಅಂಶಗಳು
೧. ಇಂದು ವಿಜ್ಞಾನದ ಯುಗವಿದೆ. ವಿಜ್ಞಾನವೂ ಸನಾತನ ಧರ್ಮದ ಕೊಡುಗೆಯಾಗಿದೆ. ಆದುದರಿಂದ ವಿಜ್ಞಾನವೂ ವೇದ, ಪುರಾಣ ಇತ್ಯಾದಿಗಳ ಮಹತ್ವವನ್ನು ಅಲ್ಲಗಳೆಯಲಾರದು.
೨. ಭಾರತದಲ್ಲಿ ವಾಸಿಸುವ ಎಲ್ಲ ನಾಗರಿಕರ ಪೂರ್ವಜರು ಹಿಂದೂಗಳಾಗಿದ್ದರು. ಅವರ ಉದರ ನಿರ್ವಹಣೆಯನ್ನು ಸನಾತನ ಧರ್ಮವು ಮಾಡಿದೆ. ಮತಾಂತರಗೊಂಡವರಿಗೆ ಅವರ ಭೂತಕಾಲವನ್ನು ನೆನಪಿಸಿಕೊಟ್ಟು ಅವರನ್ನು ಪುನಃ ಹಿಂದೂ ಧರ್ಮದಲ್ಲಿ ಸೇರಿಸಬೇಕಿದೆ.
೩. ದೇಶದಲ್ಲಿ ಶೇ. ೪೦ ರಷ್ಟು ಜನರು ಹಿಂದಿ ಭಾಷೆ ಮಾತನಾಡುತ್ತಾರೆ. ಹಿಂದಿಯಲ್ಲಿಯೇ ಸಂಸ್ಕೃತವೂ ಸೇರಿದೆ. ವೇದ ಮತ್ತು ಪುರಾಣಗಳ ಹಿಂದಿ ಭಾಷೆಯ ಆವೃತ್ತಿಗಳು ಸನಾತನ ಧರ್ಮದ ಸಿದ್ಧಾಂತಗಳನ್ನು ಯೋಗ್ಯರೀತಿಯಲ್ಲಿ ಅನುವಾದ ಮಾಡುತ್ತವೆ. ಆದುದರಿಂದ ಹಿಂದಿ ಭಾಷೆಯ ಪ್ರಚಾರ ಮತ್ತು ಪ್ರಸಾರವಾಗುವುದೂ ಆವಶ್ಯಕವಾಗಿದೆ.
ಪರಾತ್ಪರ ಗುರು ಡಾ. ಆಠವಲೆಯವರ ದಾರ್ಶನಿಕತೆ !
ಪರಾತ್ಪರ ಗುರು ಡಾ. ಆಠವಲೆಯವರು ’೨೦೨೩ ನೇ ಇಸವಿಯಲ್ಲಿ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು’, ಎಂದು ೨೫ ವರ್ಷಗಳ ಹಿಂದೆಯೇ ಹೇಳಿದ್ದರು. ಅದನ್ನೇ ಈಗ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಹೇಳುತ್ತಿದ್ದಾರೆ. ಇದರಿಂದ ಪರಾತ್ಪರ ಗುರು ಡಾ. ಆಠವಲೆಯವರ ದಾರ್ಶನಿಕತೆಯು ಗಮನಕ್ಕೆ ಬರುತ್ತದೆ. ಮುಂಬರುವ ಕಾಲದಲ್ಲಿ ಎಲ್ಲ ಸಂತರು ಮತ್ತು ಶಂಕರಾಚಾರ್ಯರು ಹೀಗೆ ಹೇಳಲು ಆರಂಭಿಸಿದರೆ ಮತ್ತು ಇದಕ್ಕಾಗಿ ಸಂಘಟಿತವಾಗಿ ಪ್ರಯತ್ನಿಸಿದರೆ ಆಶ್ಚರ್ಯವೇನಿಲ್ಲ.

ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”