ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳ ರಕ್ಷಣೆಗಾಗಿ ಭಾರತ ಸರಕಾರವು ಯಾವಾಗ ನೇತೃತ್ವ ತೆಗೆದುಕೊಳ್ಳಲಿದೆ ? – ಸಂಪಾದಕರು

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹಿಮಯಾರ್ ಖಾನ್ ಪಟ್ಟಣದ ಒಂದು ಮಸೀದಿಯಿಂದ ನೀರು ತರಲು ಹೋದ ಬಡ ಹಿಂದೂ ಕುಟುಂಬವನ್ನು ಮತಾಂಧರು ಥಳಿಸಿದ್ದಾರೆ. `ಹಿಂದೂಗಳು ಮಸೀದಿಯ ಪಾವಿತ್ರ್ಯವನ್ನು ಭಂಗಗೊಳಿಸಿದ್ದಾರೆ’, ಎಂದು ಮತಾಂಧರು ಹೇಳಿದ್ದಾರೆ. ಈ ಕುಟುಂಬದ ಮುಖ್ಯಸ್ಥನ ಹೆಸರು ರಾಮ್ ಭೀಲ್ ಎಂದಾಗಿದೆ. ಅವರು ಮತ್ತು ಅವರ ಕುಟುಂಬದವರು ಮಸೀದಿಯ ಹತ್ತಿರದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇನ್ನೂ ಪೋಲಿಸರಲ್ಲಿ ದೂರು ದಾಖಲಿಸಿಲ್ಲ; ಏಕೆಂದರೆ ಥಳಿಸಿದವರು ಆಡಳಿತಾರೂಢ ತೆಹ್ರೀಕ್-ಎ-ಇನ್ಸಾಫ್ ಸಂಸದರ ಪರಿಚಯದವರಾಗಿದ್ದಾರೆ. (ಆಡಳಿತಾರೂಢ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಸರಕಾರವು ‘ನಾವು ಹಿಂದೂಗಳಿಗಾಗಿ ಏನಾದರೂ ಮಾಡುತ್ತಿದ್ದೇವೆ’, ಎಂದು ಜಗತ್ತಿಗೆ ತೋರಿಸಲು ದೇವಸ್ಥಾನಗಳನ್ನು ದುರುಸ್ತಿ ಮಾಡುವುದಾಗಿ ಘೋಷಿಸಿತು. ಆದರೆ ಈ ಪಕ್ಷವು ಹಿಂದೂ ವಿರೋಧಿಯಾಗಿದೆ, ಎಂಬುದು ಈ ಪ್ರಕರಣದಿಂದ ಕಂಡುಬರುತ್ತದೆ. ಆದ್ದರಿಂದ ‘ಪಾಕಿಸ್ತಾನ ಸರಕಾರವು ಇಲ್ಲಿಯ ಹಿಂದೂಗಳಿಗಾಗಿ ಏನಾದರೂ ಮಾಡುತ್ತಿದೆ’, ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ ! – ಸಂಪಾದಕರು) ಈ ಘಟನೆಯ ಬಗ್ಗೆ ಭೀಲ್ ಸಮಾಜದಿಂದ ಪೊಲೀಸ್ ಠಾಣೆಯ ಹೊರಗೆ ಆಂದೋಲನ ಮಾಡಲಾಯಿತು.
Hindu family in Pakistan tortured, held hostage for fetching drinking water from mosque https://t.co/dYwAlJwaaT
— The Times Of India (@timesofindia) September 20, 2021
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!