ಬಂಗಾಳವು ಬಾಂಗ್ಲಾದೇಶವಾಗುವುದರ ಕಡೆ ಮಾರ್ಗಕ್ರಮಣ ಮಾಡುತ್ತಿದೆ. ಆದ್ದರಿಂದ ಮಮತಾ ಬ್ಯಾನರ್ಜೀಯವರ ಹೇಳಿಕೆಯು, ಹಾಸ್ಯಾಸ್ಪದವಾಗಿದೆ! ಮಮತಾ ಬ್ಯಾನರ್ಜೀಯವರಿಗೆ ದೇಶಕ್ಕಾಗಿ ಏನಾದರೂ ಮಾಡಬೇಕೆಂದು ಅನಿಸುತ್ತಿದ್ದಲ್ಲಿ, ಅವರು ಬಂಗಾಳದಲ್ಲಿರುವ ಬಾಂಗ್ಲಾದೇಶೀ ನುಸುಳುಕೋರರನ್ನು ಒದ್ದೋಡಿಸುವ ಅವಶ್ಯಕತೆಯಿದೆ ! – ಸಂಪಾದಕರು

ಕೊಲಕತಾ (ಬಂಗಾಳ) – ಬಂಗಾಳವು ಭಾರತವನ್ನು ರಕ್ಷಿಸಲಿದೆ ಹಾಗೂ ಭಾರತವನ್ನು ‘ಪಾಕಿಸ್ತಾನ’ ಅಥವಾ ‘ತಾಲಿಬಾನ’ವಾಗಲು ಬಿಡುವುದಿಲ್ಲ; ಏಕೆಂದರೆ ಇದು ರವೀಂದ್ರನಾಥ ಟಾಗೋರ ಹಾಗೂ ರಾಷ್ಟ್ರೀಯ ಕವಿ ನಝರೂಲ ಇಸ್ಲಾಮರವರ ಭೂಮಿಯಾಗಿದೆ. ಆದ್ದರಿಂದ ಇಲ್ಲಿ ಎಲ್ಲಾ ಸಮುದಾಯದ ಜನರು ಒಟ್ಟಾಗಿ ಇರುತ್ತಾರೆ, ಎಂದು ಬಂಗಾಳದ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜೀಯವರು ಹೇಳಿದ್ದಾರೆ. ಅವರು ಭವಾನಿಪುರದ ಉಪ ಚುನಾವಣೆಯ ಮೊದಲು ಆಯೋಜಿಸಲಾದ ಪ್ರಸಾರ ಸಭೆಯಲ್ಲಿ ಮಾತನಾಡುತ್ತಿದ್ದರು. ಭವಾನೀಪುರದಲ್ಲಿ ಶೇಕಡ 40ರಷ್ಟು ಜನಸಂಖ್ಯೆ ಬಂಗಾಳದ ಹೊರಗಿನವರಾಗಿದ್ದಾರೆ. ತೃಣಮೂಲ ಕಾಂಗ್ರೆಸ್ನ ಪ್ರಮುಖರಾದ ಮಮತಾ ಬ್ಯಾನರ್ಜೀಯವರು ಭವಾನಿಪುರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಅವರ ವಿರುದ್ಧ ಭಾಜಪದ ನ್ಯಾಯವಾದಿ ಪ್ರಿಯಾಂಕಾ ಟಿಬರೀವಾಲರವರು ಅಭ್ಯರ್ಥಿಯಾಗಿದ್ದಾರೆ. ಸಪ್ಟೆಂಬರ 30 ರಂದು ಅಲ್ಲಿ ಮತದಾನ ನಡೆಯಲಿದೆ. ಕೆಲವು ತಿಂಗಳ ಹಿಂದೆ ಬಂಗಾಳದಲ್ಲಿ ನಡೆದ ಮತದಾನದಲ್ಲಿ ಮಮತಾ ಬ್ಯಾನರ್ಜೀಯವರು ನಂದಿಗ್ರಾಮದಿಂದ ಚುನಾವಣೆಗೆ ನಿಂತಿದ್ದರು. ಆ ಚುನಾವಣೆಯಲ್ಲಿ ಅವರು ಭಾಜಪದ ಸುವೆಂದೂ ಅಧಿಕಾರಿಯವರ ಎದುರು ಸೋತಿದ್ದರು. ಅನಂತರ ಭವಾನಿಪುರದಿಂದ ಗೆದ್ದು ಬಂದ ತೃಣಮೂಲ ಕಾಂಗ್ರೆಸನ ಸೋವನದೇವ ಚಟ್ಟೋಪಾಧ್ಯೆಯವರು ತಮ್ಮ ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಆ ಸ್ಥಾನವು ಖಾಲಿಯಾಗಿದೆ. ಆದ್ದರಿಂದ ಅಲ್ಲಿ ಉಪ ಚುನಾವಣೆ ನಡೆಯಲಿದೆ. ಸಂವಿಧಾನದ ನಿಯಮಕ್ಕನುಸಾರ ನವೆಂಬರ 7 ರ ಒಳಗೆ ಮಮತಾ ಬ್ಯಾನರ್ಜೀಯವರು ಶಾಸಕರಾಗಿ ಆರಿಸಿ ಬರುವುದು ಅಗತ್ಯವಾಗಿರುವುದರಿಂದ ಅವರು ಈ ಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ.
“These [BJP] people go to Nandigram and tell people about Pakistan….We will not allow this country to become the Taliban or Pakistan,” @MamataOfficial said. (By @Anupammishra777)https://t.co/pMvvPmAvft
— IndiaToday (@IndiaToday) September 16, 2021
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ