ಈ ತಥಾಕಥಿತ ಧರ್ಮನಿಂದನೆಯಿಂದಾಗಿಯೇ ಅಲ್ಲಿಯ ಮತಾಂಧರು ಶ್ರೀ ಗಣಪತಿ ದೇವಸ್ಥಾನದ ಮೇಲೆ ದಾಳಿ ಮಾಡಿದ್ದರು !
|
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಒಂದು ಮದರಸಾದಲ್ಲಿನ ಗ್ರಂಥಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಬಂಧಿತನಾದ ೮ ವರ್ಷದ ಹಿಂದೂ ಹುಡುಗನಿಗೆ ಧರ್ಮನಿಂದನೆಯ ಕಾನೂನಿನಡಿ ಗಲ್ಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಧರ್ಮನಿಂದನೆ ಆರೋಪದ ಮೇಲೆ ಪಾಕಿಸ್ತಾನದ ನ್ಯಾಯಾಲಯದಲ್ಲಿ ವಿವಿಧ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ನಡೆಯುತ್ತಿದ್ದು ಈ ಪ್ರಕರಣದ ಆರೋಪಿಯಾಗಿರುವ ಹಿಂದೂ ಹುಡುಗ ದೇಶದ ಅತ್ಯಂತ ಕಿರಿಯ ಆರೋಪಿಯಾಗಿದ್ದಾನೆ. ಪ್ರಸ್ತುತ ಹುಡುಗ ಮತ್ತು ಆತನ ಕುಟುಂಬದವರನ್ನು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಈ ಹುಡುಗನ ಹೆಸರು ಬಹಿರಂಗಪಡಿಸಿಲ್ಲ. ಈ ಹುಡುಗನಿಗೆ ನ್ಯಾಯಾಲಯವು ಜಾಮೀನು ನೀಡಿದ ನಂತರ, ಮತಾಂಧರ ಸಮೂಹವು ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ಜಿಲ್ಲೆಯ ಭೋಂಗ್ ಪಟ್ಟಣದ ಶ್ರೀ ಗಣಪತಿ ದೇವಸ್ಥಾನದ ಮೇಲೆ ದಾಳಿ ಮಾಡಿದ್ದರು. ಈ ದಾಳಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ದಾಳಿಯ ನಂತರ, ಹಿಂದೂಗಳಲ್ಲಿ ಭಯದ ವಾತಾವರಣವಿದೆ ಮತ್ತು ಅವರು ತಮ್ಮ ಮನೆಗಳನ್ನು ತೊರೆಯುವಂತೆ ಒತ್ತಾಯಿಸಲಾಗುತ್ತಿದೆ.
Pakistan charges 8 year old Hindu child with blasphemy, could face death penalty, family goes into hiding fearing backlashhttps://t.co/qjsrh2Jrgv
— OpIndia.com (@OpIndia_com) August 9, 2021
ಅಲ್ಪಸಂಖ್ಯಾತರ ಭದ್ರತೆಗಾಗಿ ಏನಾದರೂ ಮಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ ! – ಪೀಡಿತ ಹುಡುಗನ ಕುಟುಂಬದ ಸದಸ್ಯರು
ಹುಡುಗನ ಕುಟುಂಬದ ಸದಸ್ಯರೊಬ್ಬರು ಹೆಸರನ್ನು ಮುದ್ರಿಸದಿರುವ ಶರತ್ತಿನ ಮೇರೆಗೆ ಬ್ರಿಟಿಶ ವಾರ್ತಾ ಪತ್ರಿಕೆ ‘ದ ಗಾರ್ಡಿಯನ್’ನ ಪ್ರತಿನಿಧಿ ಜೊತೆಗೆ ಮಾತನಾಡುತ್ತಾ, ’ಹುಡುಗನಿಗೆ ಧರ್ಮನಿಂದನೆ ಎಂದರೆ ಏನು ಎಂಬುದು ತಿಳಿದಿಲ್ಲ. ಈ ಪ್ರಕರಣದಲ್ಲಿ, ಹುಡುಗನನ್ನು ಸಿಲುಕಿಸಲಾಗಿದೆ. ಆತನಿಗೆ ಇನ್ನೂ ತಿಳಿಯುತ್ತಿಲ್ಲ ಅಪರಾಧವೇನು ಮತ್ತು ಒಂದು ವಾರದಿಂದ ಏಕೆ ಜೈಲಿನಲ್ಲಿ ಇಡಲಾಗಿದೆ ಎಂದು. ನಾವು ಕೂಡ ನಮ್ಮ ಅಂಗಡಿ ಮತ್ತು ಕೆಲಸವನ್ನು ತೊರೆದಿದ್ದೇವೆ. ಇಡೀ ಸಮಾಜವು ಭಯಭೀತವಾಗಿದೆ. ನಾವು ಇನ್ನು ಮುಂದೆ ಈ ಪ್ರದೇಶಕ್ಕೆ ಮರಳಲು ಬಯಸುವುದಿಲ್ಲ. ಅಲ್ಪಸಂಖ್ಯಾತರ ರಕ್ಷಣೆಗೆ ಅಥವಾ ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಹುದು ಎಂದು ನಮಗೆ ಅನಿಸುವುದಿಲ್ಲ’ ಎಂದು ತಮ್ಮ ಅಳುಲು ತೋಡಿಕೊಂಡರು.
ಧರ್ಮನಿಂದೆಯ ಕಾನೂನಿನ ದುರ್ಬಳಕೆ ! – ವಿಶ್ವದಾದ್ಯಂತ ಕಾನೂನಿನ ತಜ್ಞರಿಂದ ಟೀಕೆ
ವಿಶ್ವದಾದ್ಯಂತ ಕಾನೂನಿನ ತಜ್ಞರ ಪ್ರಕಾರ, ಹುಡುಗನ ವಿರುದ್ಧ ಧರ್ಮನಿಂದನೆಯ ಆರೋಪಗಳು ಸುಳ್ಳಾಗಿದೆ; ಏಕೆಂದರೆ ಈ ವಯಸ್ಸಿನ ಯಾರೊಬ್ಬರೂ ಈ ಹಿಂದೆ ಧರ್ಮನಿಂದನೆಯ ಆರೋಪವನ್ನು ಹೊರಿಸಿಲ್ಲ. ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ, ಈ ಕಾನೂನನ್ನು ಅಲ್ಪಸಂಖ್ಯಾತರ ವಿರುದ್ಧ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಆದ್ದರಿಂದ, ಮಾನವ ಹಕ್ಕುಗಳ ಸಂಘಟನೆಗಳು ಪಾಕಿಸ್ತಾನದ ಧರ್ಮನಿಂದನೆಯ ಕಾನೂನುಗಳನ್ನು ದೀರ್ಘಕಾಲದಿಂದ ಟೀಕಿಸುತ್ತಿವೆ. ನ್ಯಾಯಾಲಯವು ಕೆಲವು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದರೂ, ಇಲ್ಲಿಯವರೆಗೆ ಯಾರನ್ನೂ ಗಲ್ಲಿಗೇರಿಸಲಾಗಿಲ್ಲ.

ಬಾಂಗ್ಲಾದೇಶ ಸರಕಾರವು ದೇಶವನ್ನು ‘ಹಿಂದೂ ಮುಕ್ತ’ ರಾಷ್ಟ್ರವನ್ನಾಗಿ ಮಾಡಲು ಬಯಸುವವರಿಗೆ ಸಹಾಯ ಮಾಡುತ್ತಿದೆಯೇ? – ಸಂಪಾದಕ ಸಲಾಹ್ ಉದ್ದೀನ್ ಚೌಧರಿ
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
‘ಚಾಟ್ಜಿಪಿಟಿ’ಯಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪ!