ಲಕ್ಷ್ಮಣಪುರಿ (ಉತ್ತರಪ್ರದೇಶ) ಇಲ್ಲಿಯ ಮಂದಿರಗಳಿಗೆ ಧರ್ಮಾಂಧರಿಂದ ಬೆದರಿಕೆಯ ಪತ್ರಗಳು

ಆಗಸ್ಟ್ 14 ರ ಒಳಗೆ ಜಿಹಾದಿಗಳ ಬಿಡುಗಡೆ ಆಗದಿದ್ದರೆ ಮುಂದಿನ ಪರಿಣಾಮವನ್ನು ಎದುರಿಸಲು ಸಿದ್ಧರಾಗಿ!

ಇಂತಹ ಪತ್ರಗಳನ್ನು ಯಾವತ್ತಿಗೂ ಮಸೀದಿ ಅಥವಾ ಚರ್ಚ್‍ಗಳಿಗೆ ಕಳಿಸಲಾಗುವುದಿಲ್ಲ; ಏಕೆಂದರೆ ಆತಂಕವಾದಿಗಳಿಗೆ ಧರ್ಮವಿರುತ್ತದೆ ಮತ್ತು ಅವರು ಹಿಂದುಗಳನ್ನೇ ಗುರಿಯನ್ನಾಗಿಸುತ್ತಾರೆ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿಯ ಅನೇಕ ದೊಡ್ಡ ದೇವಸ್ಥಾನಗಳು ಮತ್ತು ರಾ. ಸ್ವ.ಸಂಘ ಇವರ ಕಾರ್ಯಾಲಯಕ್ಕೆ ಬೆದರಿಕೆ ಪತ್ರಗಳು ಬಂದಿದೆ. ಇದರಲ್ಲಿ ಆಗಸ್ಟ್ 14 ರ ಸಂಜೆಯೊಳಗೆ ಆತಂಕವಾದಿಗಳನ್ನು ಬಿಡುಗಡೆಗೊಳಿಸದಿದ್ದರೆ ಇದರ ಪರಿಣಾಮವನ್ನು ಅನುಭವಿಸಲು ಸಿದ್ಧರಾಗಿರಿ ಎಂದು ಬೆದರಿಕೆ ಹಾಕಲಾಗಿದೆ. ಈ ಪತ್ರವನ್ನು ರಿಜಿಸ್ಟರ್ ಪೋಸ್ಟ್‍ನ ಮುಖಾಂತರ ಕಳುಹಿಸಲಾಗಿದೆ. ಈ ಪತ್ರಗಳು ಸಿಕ್ಕಿದ ತಕ್ಷಣ ಮಂದಿರ ವ್ಯವಸ್ಥಾಪನೆಯು ಪೊಲೀಸರಿಗೆ ತಿಳಿಸಿದ ನಂತರ ವಿಚಾರಣೆಯು ಪ್ರಾರಂಭವಾಗಿದೆ, ಆದರೆ ಪೊಲೀಸರು ಈ ವಿಷಯವಾಗಿ ಯಾವುದೇ ಮಾಹಿತಿ ಕೊಡಲು ನಿರಾಕರಿಸುತ್ತಿದ್ದಾರೆ.