|
* ಇದರಿಂದ ನೀವು(ಶಾಸಕರು) ಜನರಿಗೆ ಯಾವ ಸಂದೇಶವನ್ನು ನೀಡುವವರಿದ್ದೀರಿ ? – ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ * ವಿಧಾನಸಭೆಯಲ್ಲಿ ಗೂಂಡಾಗಳಂತೆ ವರ್ತಿಸುವ ಇಂತಹ ಶಾಸಕರಿಗೆ ಸರ್ವೋಚ್ಚ ನ್ಯಾಯಾಲಯವು ಕಠಿಣ ಶಿಕ್ಷೆಯನ್ನು ನೀಡಬೇಕು, ಎಂಬುದು ಜನರ ಅಪೇಕ್ಷೆಯಾಗಿದೆ ! |

ತಿರುವನಂತಪುರಮ್ (ಕೇರಳ) – ೨೦೧೫ ರಂದು ಕೇರಳ ವಿಧಾನಸಭೆಯಲ್ಲಿ ಲೆಫ್ಟ ಡೆಮೊಕ್ರೆಟಿಕ್ ಫ್ರಂಟ್ನ (ಎಲ್.ಡಿ.ಎಫ್.ನ) ಶಾಸಕರಿಂದ ಆಗಿದ್ದ ಹಾನಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಅವರ ಮೇಲಿನ ಖಟ್ಲೆಯನ್ನು ಹಿಂಪಡೆಯುವಂತೆ ಆದೇಶಿಸುವುದನ್ನು ನಿರಾಕರಿಸಿದೆ. ಈ ಬಗ್ಗೆ ಮುಂದಿನ ಆಲಿಕೆ ಜುಲೈ ೧೫ ರಂದು ನಡೆಯಲಿದೆ. ನ್ಯಾಯಾಲಯವು, ‘ಇದೊಂದು ಗಂಭೀರವಾದ ಪ್ರಕರಣವಾಗಿದೆ. ನೀವು(ಶಾಸಕರು) ಜನರ ಆಸ್ತಿಯನ್ನು ನಾಶ ಮಾಡಿದ್ದೀರಿ. ಇದರಿಂದ ನೀವು ಜನರಿಗೆ ಯಾವ ಸಂದೇಶವನ್ನು ನೀಡಲು ಬಯಸಿದ್ದೀರಿ ?’ ಎಂಬ ಪ್ರಶ್ನೆಯನ್ನೂ ಕೇಳಲಾಯಿತು. ಎಲ್.ಡಿ.ಎಫ್. ಪಕ್ಷ ೨೦೧೬ ರಿಂದ ಕೇರಳದಲ್ಲಿ ಅಧಿಕಾರದಲ್ಲಿದೆ.
#ExpressFrontPage: #Kerala Assembly ruckus: Won’t condone unruly behaviour of MLAs, says SC https://t.co/SlTRHnlTvt via @NewIndianXpress
— TNIE Kerala (@xpresskerala) July 6, 2021
ಎಲ್.ಡಿ.ಎಫ್. ನ ಶಾಸಕರ ಮೇಲೆ ವಿಧಾನಸಭೆಯಲ್ಲಿ ಧ್ವನಿವರ್ಧಕ ಮುರಿಯುವುದು, ಪರಸ್ಪರ ಹೊಡೆದಾಡಿಕೊಳ್ಳಲು ಪ್ರಯತ್ನಿಸುವುದು ಮತ್ತು ಗೊಂಧಲವನ್ನುಂಟುಮಾಡುವುದು ಈ ಪ್ರಕರಣಗಳ ಬಗ್ಗೆ ಖಟ್ಲೆಯನ್ನು ದಾಖಲಿಸಲಾಗಿದೆ. (ಕಮ್ಯನಿಸ್ಟ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಗೂಂಡಾಗಳಂತೆ ವರ್ತಿಸಿದ ಬಗ್ಗೆ ಅವರಿಗೆ ಶಿಕ್ಷೆಯಾಗಲು ಪ್ರಯತ್ನಿಸುವ ಬದಲು ಅವರ ಮೇಲಿನ ಖಟ್ಲೆ ಹಿಂಪಡೆಯಲು ಅರ್ಜಿ ಸಲ್ಲಿಸುವ ಕೇರಳದ ಕಮ್ಯುನಿಸ್ಟ ಸರಕಾರ ! – ಸಂಪಾದಕರು) ಈ ಹಿಂದೆ ಕೇರಳ ಉಚ್ಚ ನ್ಯಾಯಾಲಯವೂ ಕೂಡ ಅರ್ಜಿಯನ್ನು ಹಿಂಪಡೆಯಲು ನಿರಾಕರಿಸಿತ್ತು.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ