
ಗೌಹಾಟಿ (ಅಸ್ಸಾಂ) – ಅತ್ಯಾಚಾರ ಅಪರಾಧವಿರುವ ಆರೋಪಿಯು ಪರಾರಿಯಾಗುತ್ತಿದ್ದರೆ ಮತ್ತು ಆತ ಪೊಲೀಸರಿಂದ ಶಸ್ತ್ರವನ್ನು ಕಸಿಯಲು ಪ್ರಯತ್ನಿಸುತ್ತಿದ್ದರೆ, ಪೊಲೀಸರು ಗುಂಡು ಹಾರಾಟ ಮಾಡಲೇ ಬೇಕಾಗುತ್ತದೆ; ಆದರೆ ಎದೆಯ ಮೇಲೆ ಅಲ್ಲ. ಕಾನೂನಿನ ಪ್ರಕಾರ ‘ನೀವು ಕಾಲಿಗೆ ಗುಂಡು ಹೊಡೆಯಬಹುದು’, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಪೊಲೀಸರ ಸಭೆಯಲ್ಲಿ ಹೇಳಿದರು. ‘ನಮಗೆ ಅಸ್ಸಾಂ ಪೊಲೀಸರು ದೇಶದ ಅತ್ಯುತ್ತಮ ಪೊಲೀಸರಾಗಬೇಕಿದೆ’, ಎಂದು ಸಹ ಅವರು ಹೇಳಿದರು.
ಮುಖ್ಯಮಂತ್ರಿ ಸರಮಾ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಕೆಲವು ಜನರು ನನಗೆ ಹೇಳಿದರೇನೆಂದರೆ ಇತ್ತಿಚೆಗೆ ಅಪರಾಧಿಗಳು ಪೊಲೀಸರ ಹಿಡಿತದಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಾರೆ ಮತ್ತು ಚಕಮಕಿಯಂತಹ ಘಟನೆಗಳು ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ ಎಂದರು. ಇದೊಂದು ‘ಪ್ಯಾಟರ್ನ್'(ಪ್ರಕಾರ) ವಾಗುತ್ತಿದೆಯೇ ? ನಾನು ಅವರಿಗೆ ‘ಅಪರಾಧಿಗಳು ಪರಾರಿಯಾಗುತ್ತಿದ್ದರೆ, ಈ ರೀತಿಯ (ಗುಂಡು ಹಾರಿಸುವ) ‘ಪ್ಯಾಟರ್ನ್’ ಇರಲೇ ಬೇಕು’, ಎಂದು ಹೇಳಿದೆ ಎಂದರು.
Shooting at criminals trying to escape should be policing pattern: Assam CM @himantabiswa.
(@hemantakrnath )#Assam https://t.co/Ag6BOfG4FV— IndiaToday (@IndiaToday) July 6, 2021
ಗೋಕಳ್ಳ ಸಾಗಾಟಗಾರರನ್ನು ಸುಮ್ಮನೆ ಬಿಡುವುದಿಲ್ಲ !
ಮುಖ್ಯಮಂತ್ರಿ ಸರಮಾ ಅವರು ಮಾತನಾಡುತ್ತಾ, ಗೋವು ನಮ್ಮ ತಾಯಿಯಾಗಿದೆ. ಅದು ನಮಗೆ ಹಾಲು ಕೊಡುತ್ತದೆ, ಸಗಣಿ ಕೊಡುತ್ತದೆ. ಟ್ರ್ಯಾಕ್ಟರ್ ಬರುವ ಮೊದಲು ನಾವು ಇದರ ಸಹಾಯದಿಂದ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದೆವು ಹಾಗೂ ಈಗಲೂ ಗೋವಿನ ಮೂಲಕ ಅನೇಕ ರಾಜ್ಯಗಳಲ್ಲಿ ಕೃಷಿ ಮಾಡಲಾಗುತ್ತಿದೆ. ಈಗ ಜನರು ಪ್ರಾಣಿಗಳ ಕಳ್ಳಸಾಗಣೆ, ಮಾದಕ ಪದಾರ್ಥಗಳ ಕಳ್ಳ ಸಾಗಣೆಯಲ್ಲಿ ಸಹಭಾಗ ಆಗಿದ್ದಾರೆ. ಅವರ ಪೈಕಿ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ