ರಾಷ್ಟ್ರಪತಿಯಿಂದ ಜಿಲ್ಲಾಧಿಕಾರಿಯನ್ನು ಆ ಮಹಿಳೆಯ ಮನೆಗೆ ಕಳುಹಿಸಿ ಕುಟುಂಬದವರಿಗೆ ಸಾಂತ್ವನಪೊಲೀಸ್ ಅಧಿಕಾರಿ ಸಹಿತ ೪ ಸಂಚಾರ ನಿರೀಕ್ಷಕರು ಅಮಾನತು |
ದೊಡ್ಡ ನಾಯಕರ ಪ್ರವಾಸದ ಸಮಯದಲ್ಲಿ ಸಾರಿಗೆಯನ್ನು ನಿಲ್ಲಿಸಲಾಗುತ್ತದೆ. ಅದರಿಂದ ಸಾಮಾನ್ಯ ಜನರು ಈ ಅಡಚಣೆಯನ್ನು ಯಾವಾಗಲೂ ಎದುರಿಸಬೇಕಾಗುತ್ತದೆ. ಈ ಬಗ್ಗೆ ರಾಷ್ಟ್ರಪತಿಯವರು ಸರಕಾರಕ್ಕೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವಂತೆ ಆದೇಶ ನೀಡಬೇಕು !

ಕಾನಪುರ (ಉತ್ತರಪ್ರದೇಶ) – ಭಾರತದ ರಾಷ್ಟ್ರಪತಿ ರಾಮನಾಥ ಕೊವಿಂದ ಇವರು ಪ್ರವಾಸ ಮಾಡುತ್ತಿದ್ದ ರೈಲು ಇಲ್ಲಿಯ ಗೋವಿಂದಪುರಿಯ ಸೇತುವೆಯಿಂದ ಹೋಗುತ್ತಿರುವಾಗ ೪೫ ನಿಮಿಷಗಳ ಕಾಲ ವಾಹನಗಳನ್ನು ನಿಲ್ಲಿಸಲಾಗಿತ್ತು. ಈ ನಿಲ್ಲಿಸಿದ ವಾಹನಗಳಲ್ಲಿ ಸಿಲುಕಿದ ಕಾರಣ ಅನಾರೋಗ್ಯಗೊಂಡಿದ್ದ ಇಂಡಿಯನ್ ಇಂಡಸ್ಟ್ರಿಸ್ ಅಸೊಸಿಯೇಶನ್’ನ ಕಾನಪುರ ವಿಭಾಗದ ಅಧ್ಯಕ್ಷೆ ವಂದನಾ ಮಿಶ್ರಾ ಈ ೫೦ ವರ್ಷದ ಮಹಿಳೆಯನ್ನು ಆಸ್ಪತ್ರೆಗೆ ತಲುಪಿಸಲು ಸಾಧ್ಯವಾಗಲಿಲ್ಲ. ಇದರಿಂದ ಆಕೆಯು ತೀರಿಕೊಂಡಳು. ಈ ಮಾಹಿತಿಯು ಇಲ್ಲಿಯ ಪ್ರವಾಸಿ ಮಂದಿರದಲ್ಲಿ ತಂಗಿದ್ದ ರಾಷ್ಟ್ರಪತಿಯವರ ಪತ್ನಿಗೆ ತಿಳಿದನಂತರ ಅವರು ಅದನ್ನು ರಾಷ್ಟ್ರಪತಿಗೆ ತಿಳಿಸಿದರು. ಇದಕ್ಕೆ ರಾಷ್ಟ್ರಪತಿಯು ಕಾನಪುರದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರನ್ನು ಕೂಡಲೇ ಮಿಶ್ರಾ ಇವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವಾನ ತಿಳಿಸಲು ಹೇಳಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪೊಲೀಸ್ ಅಧಿಕಾರಿ ಸಹಿತ ೪ ಸಂಚಾರಿ ನಿರೀಕ್ಷಕರನ್ನು ಅಮಾನತುಗೊಳಿಸಲಾಗಿದೆ. ವಾಹನವನ್ನು ನಿಲ್ಲಿಸಿದಾಗ ವಂದನಾ ಮಿಶ್ರಾರವರ ಕುಟುಂಬದವರು ಪೊಲೀಸರ ಬಳಿ ತಮ್ಮನ್ನು ಬಿಡುವಂತೆ ಪದೇ ಪದೇ ವಿನಂತಿಸಿದರು; ಆದರೆ ಪೊಲೀಸರು ಅದಕ್ಕೆ ಅನುಮತಿಸಲಿಲ್ಲ. ಆಸ್ಪತ್ರೆಗೆ ತಲುಪುವ ತನಕ ವಂದನಾ ಮಿಶ್ರಾರವರು ತೀರಿಕೊಂಡಿದ್ದರು.
An ailing woman allegedly died after being stuck in traffic held up during President Ram Nath Kovind’s visit while she was being taken to a hospital.https://t.co/R5ljhz0EYV
— India TV (@indiatvnews) June 26, 2021
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಹೆರಿಗೆಯಾದ ಮಹಿಳೆಗೆ ತಪ್ಪು ರಕ್ತ; ಜೀವದೊಂದಿಗೆ ಆಸ್ಪತ್ರೆಯ ಚೆಲ್ಲಾಟ! : Hospital Blood Error
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್