ಕಾಮಾಂಧತೆಯ ದುಷ್ಪರಿಣಾಮ, ಎಂದು ಹೇಳಬಹುದು ! ಇಂತಹ ಘಟನೆಗಳನ್ನು ತಡೆಯಲು ಕೇಂದ್ರ ಸರಕಾರವು ಶೀಘ್ರವಾಗಿ ಸಮಾನ ನಾಗರಿಕ ಕಾನೂನು ಜಾರಿಗೆ ತರುವುದು ಅಗತ್ಯವಿದೆ.

ಮುಝಫ್ಫರನಗರ (ಉತ್ತರಪ್ರದೇಶ) – ಇಲ್ಲಿಯ ಶಿಕಾರಪುರ ಗ್ರಾಮದಲ್ಲಿ ೭೭ ವರ್ಷದ ಓರ್ವ ಮೌಲ್ವಿ(ಇಸ್ಲಾಂ ಧರ್ಮದ ನಾಯಕ)ಯು ಮೂರನೇ ಮದುವೆಗಾಗಿ ಪ್ರಯತ್ನಿಸುತ್ತಿದ್ದ. ಇದಕ್ಕೆ ಆಕ್ರೋಶಗೊಂಡ ಮೊದಲನೇ ಹೆಂಡತಿಯು ಮೌಲ್ವಿಯು ಮಲಗಿರುವಾಗ ಆತನ ಮರ್ಮಾಂಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದುದರಿಂದ ಆತ ಸಾವನ್ನಪ್ಪಿರುವ ಘಟನೆಯು ನಡೆದಿದೆ. ವಕೀಲ ಅಹಮದ್ ಎಂದು ಈ ಮೌಲ್ವಿಯ ಹೆಸರಾಗಿದೆ ಮತ್ತು ಹಾಜರಾ ಹೆಂಡತಿಯ ಹೆಸರಾಗಿದೆ. ಪೊಲೀಸರು ಹಾಜರಾಳನ್ನು ಬಂಧಿಸಿದ್ದಾರೆ.
೧. ಮೌಲ್ವಿಯು ಮನೆಯಲ್ಲೇ ಸಾವನ್ನಪ್ಪಿದ್ದರಿಂದ ಹಾಜರಾಳು ಸಂಬಂಧಿಕರ ಸಹಾಯದಿಂದ ಮೌಲ್ವಿಯನ್ನು ಹೂಳಲು ಪ್ರಯತ್ನಿಸಿದಳು. ಆಗ ನೆರೆಯ ಮನೆಯವರಿಗೆ ಅನುಮಾನ ಬಂದಾಗ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಪೊಲೀಸರು ವಿಚಾರಣೆ ನಡೆಸಿದಾಗ ಹಾಜರಾ ನಡೆದ ಎಲ್ಲಾ ಪ್ರಸಂಗವನ್ನು ಹೇಳಿ ತಪ್ಪು ಒಪ್ಪಿಕೊಂಡಿದ್ದಾಳೆ.
೨. ಹಾಜರಾಗೆ ೫ ಹೆಣ್ಣು ಮಗಳಿದ್ದು ಅವರಲ್ಲಿ ೪ ಮಕ್ಕಳಿಗೆ ಮದುವೆಯಾಗಿದೆ. ಎರಡನೇ ಹೆಂಡತಿಯು ಮೌಲ್ವಿಯನ್ನು ತ್ಯಜಿಸಿದ ನಂತರ ಆತ ಮೂರನೇ ಮದುವೆಯಾಗುವವನಿದ್ದೇನೆ ಎಂದು ಹಾಜರಾಗೆ ತಿಳಿಸಿದ್ದ. ಇದಕ್ಕೆ ಆಕೆಯು ‘ಅವಿವಾಹಿತ ಮಗಳಿಗೆ ಮದುವೆ ಮೊದಲು ಮಾಡಿಸು’, ಎಂದು ಮೌಲ್ವಿಗೆ ಹೇಳಿದಳು. ಈ ಬಗ್ಗೆ ಅವರಲ್ಲಿ ವಾದ-ವಿವಾದ ನಡೆದಿತ್ತು ಮತ್ತು ರಾತ್ರಿ ಹಾಜರಾಳು ಮೌಲ್ವಿಯ ಮೇಲೆ ದಾಳಿ ಮಾಡಿದಳು.
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !
ಸ್ವಂತ ಪಕ್ಷ ಸ್ಥಾಪಿಸಲು ಮುಂದಾದ ಭಾಜಪ ತಮಿಳುನಾಡಿನ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ!
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ