ಭಾರತ ಹಿಂದೂ ರಾಷ್ಟ್ರವಾಗಲಿದೆ ! ಸ್ವಾಮಿ ಆನಂದ ಸ್ವರೂಪ, ಅಧ್ಯಕ್ಷರು, ಶಂಕರಾಚಾರ್ಯ ಪರಿಷತ್ತು

ಹರಿದ್ವಾರ, ಏಪ್ರಿಲ್ ೨೪ (ವಾರ್ತೆ) – ಕುಂಭಮೇಳದಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ರಾಷ್ಟ್ರ ಮತ್ತು ಧರ್ಮ’ ಪ್ರದರ್ಶನವನ್ನು ನೋಡಿದ ನಂತರ, ಭಾರತವು ಹಿಂದೂ ರಾಷ್ಟ್ರವಾಗಲಿದೆ ಎಂದು ನನಗೆ ದೃಢವಾಗಿ ಮನವರಿಕೆಯಾಗಿದೆ. ಇಂದಿಗೂ ಕೂಡ ಹಿಂದುತ್ವದ ಕಾರ್ಯ ಮಾಡುವ ಅನೇಕ ಜನರು ಸಹ ತಮ್ಮನ್ನು ಜಾತ್ಯತೀತರೆಂದು ತಿಳಿದುಕೊಳ್ಳುತ್ತಾರೆ. ಇಂತಹ ಸಮಯದಲ್ಲಿ, ಸಮಿತಿ ಮತ್ತು ಸಂಸ್ಥೆಯ ವತಿಯಿಂದ ಪ್ರದರ್ಶನಗಳು, ಸತ್ಸಂಗಗಳು, ಪ್ರವಚನಗಳು, ಚರ್ಚಾಗೋಷ್ಠಿಗಳ ಮೂಲಕ ಧರ್ಮ ಪ್ರಸಾರದ ಕಾರ್ಯಗಳು ಪರಿಣಾಮಕಾರಿಯಾಗಿ ನಡೆಯುತ್ತಿವೆ. ಈ ಕಾರ್ಯಕ್ಕೆ ನನ್ನ ಶುಭಾಶಯಗಳು ಮತ್ತು ಆಶೀರ್ವಾದಗಳು ಎಂದು ಶಂಕರಾಚಾರ್ಯ ಪರಿಷತ್ತಿನ ಅಧ್ಯಕ್ಷರಾದ ಸ್ವಾಮಿ ಆನಂದ ಸ್ವರೂಪ ಇವರು ಹೇಳಿದರು. ಇಲ್ಲಿನ ಕುಂಭಮೇಳದಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಾಕಲಾಗಿದ್ದ ‘ಸನಾತನ ಧರ್ಮಶಿಕ್ಷಣ ಮತ್ತು ಹಿಂದೂ ರಾಷ್ಟ್ರ-ಜಾಗೃತಿ ಕೇಂದ್ರ’ಕ್ಕೆ ಭೇಟಿ ನೀಡಿದ ನಂತರ ಅವರು ಮಾರ್ಗದರ್ಶನವನ್ನು ನೀಡುತ್ತಿದ್ದರು. ಈ ಸಮಯದಲ್ಲಿ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸರವರು ಅವರ ಸನ್ಮಾನ ಮಾಡಿದರು. ‘ಈ ಸಮಯದಲ್ಲಿ, ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡ ರಾಜ್ಯ ಸಂಘಟಕ ಶ್ರೀ. ಸುನೀಲ ಘನವಟ ಇವರು ಸಮಿತಿಯ ಕಾರ್ಯದ ಬಗ್ಗೆ ಅವರಿಗೆ ಮಾಹಿತಿಯನ್ನು ನೀಡಿದರು.