‘ನಿಜವಾದ ದೇವಾಲಯವಾದಾಗ ದರ್ಶನಕ್ಕೆ ಹೋಗುತ್ತೇನೆ’ : ಜ್ಯೋತಿರ್ ಪೀಠದ ಶಂಕರಾಚಾರ್ಯ

ಶ್ರೀರಾಮ ಮಂದಿರವು ಭಾಜಪ ಮತ್ತು ಆರ್‌ಎಸ್‌ಎಸ್‌ನ ಕಚೇರಿ

ರಾಯಬರೇಲಿ (ಉತ್ತರ ಪ್ರದೇಶ) – ಅಯೋಧ್ಯೆಯ ಶ್ರೀರಾಮ ಮಂದಿರವು ಇನ್ನೂ ಶ್ರೀರಾಮ ಮಂದಿರವಲ್ಲ, ಅದು ಭಾಜಪ ಮತ್ತು ಆರ್‌ಎಸ್‌ಎಸ್‌ನ ಕಚೇರಿಯಾಗಿದೆ. ಅದು ನಿಜವಾದ ಅರ್ಥದಲ್ಲಿ ಶ್ರೀರಾಮ ಮಂದಿರವಾದಾಗ ಮಾತ್ರ ನಾನು ಅಲ್ಲಿ ದರ್ಶನಕ್ಕೆ ಹೋಗುತ್ತೇನೆ ಎಂದು ಜ್ಯೋತಿರ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಇಲ್ಲಿ ಹೇಳಿದ್ದಾರೆ.

ಶಂಕರಾಚಾರ್ಯ ಅವಿಮುಕ್ತೇಶ್ವರಾನಂದರು ಮಾತನಾಡುತ್ತಾ, ಶ್ರೀರಾಮ ಮಂದಿರದ ದಾನ ಕಳ್ಳತನದ ಪ್ರಕರಣದಲ್ಲಿ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ, ಇದು ಒಳ್ಳೆಯದು; ಆದರೆ ಈ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಸರಕಾರವು ಟ್ರಸ್ಟ್ ಮತ್ತು ವಿಶೇಷ ತನಿಖಾ ತಂಡವನ್ನು ಸ್ಥಾಪಿಸಿತು. ಒಂದೇ ಮನೆಯ ಮಕ್ಕಳು ಕಳ್ಳ-ಪೊಲೀಸ್ ಆಟವಾಡುತ್ತಿರುವಂತೆಯೇ ಈ ಪ್ರಕರಣವಿದೆ. ಹಾಗಾಗಿ ಈ ಪ್ರಕರಣದಲ್ಲಿ ಯಾವ ತೀರ್ಮಾನ ಬರಬಹುದು?, ಎಂದು ಶಂಕರಾಚಾರ್ಯರು ಪ್ರಶ್ನಿಸಿದ್ದಾರೆ.