
‘ಮಹಾಪುರುಷರ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇರುತ್ತದೆ. ಅವರು ಧರ್ಮವನ್ನು ಬಿಟ್ಟರೆ, ಜನರೂ ಧರ್ಮವನ್ನು ಬಿಡುವರು, ಅವರು ಮನಸ್ಸಿಗೆ ಬಂದಂತೆ ವರ್ತಿಸುವರು ಮತ್ತು ಪಾಪಗಳನ್ನು ಮಾಡುವರು. ಆ ಮಹಾಪುರುಷನೇ ಆ ಪಾಪಗಳನ್ನು ಮಾಡಿದವನಾಗುವನು. ವರ್ಣಸಂಕರದ ಆ ಜವಾಬ್ದಾರಿ, ಆ ದೋಷ, ಆ ಪಾಪ ಅವನ ಮೇಲೆಯೇ ಬರುವುದು. ಆ ಮಹಾಪುರುಷನು ಪ್ರಜೆಗಳನ್ನು ಪಾಪಿಗಳನ್ನಾಗಿ ಮಾಡಿದ ದೋಷಿಯಾಗುತ್ತಾನೆ. ಅಧರ್ಮಕ್ಕೆ-ಪಾಪಕ್ಕೆ ಸಹಾಯ ಮಾಡುವ, ಪ್ರತ್ಯಕ್ಷ ಅಥವಾ ಪರೋಕ್ಷ ಹೇಗೆಯೇ ಇರಲಿ, ಶಾರೀರಿಕ-ಮಾನಸಿಕ ಎಂತಹುದೇ ಇರಲಿ, ಅವನಿಗೆ ಆ ಪ್ರಮಾಣದಲ್ಲಿ ‘ಪಾಪದ’ ಪಾಲು ಸಿಗುತ್ತದೆ. ಅವನು ದೋಷಿಯಾಗಿಯೇ ಆಗುತ್ತಾನೆ.
ಹೀಗೆಯೇ ಧರ್ಮದ ಬಗ್ಗೆ ಮತ್ತು ಪುಣ್ಯದ ಬಗ್ಗೆಯೂ ಇದೆ. ಧರ್ಮಕರ್ಮವನ್ನು ಮಾಡುವವರು, ಅವರಿಗೆ ಜೊತೆ ನೀಡುವವರು, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ರೀತಿಯ ಸಹಕಾರ ನೀಡಿದರೂ, ಶಾರೀರಿಕ-ವಾಚಿಕ ಯಾವುದೇ ಇರಲಿ ಅಥವಾ ಮಾನಸಿಕವಿರಲಿ, ಹೇಗಾದರೂ ಇರಲಿ, ಅವರಿಗೆ ಆ ಪ್ರಮಾಣದಲ್ಲಿ ಪುಣ್ಯವು ಲಭಿಸುತ್ತದೆ.’
– ಗುರುದೇವ ಡಾ. ಕಾಟೆಸ್ವಾಮೀಜಿ (ಆಧಾರ : ಮಾಸಿಕ `ಘನಗರ್ಜಿತ’, ಅಕ್ಟೋಬರ್ ೨೦೧೭)
ಶೈಕ್ಷಣಿಕ, ವೈದ್ಯಕೀಯ ಮತ್ತು ಕಾರ್ಯನೀತಿ ರೂಪಿಸುವಂತಹ ವಿಷಯಗಳಲ್ಲಿ ಆಧ್ಯಾತ್ಮವನ್ನು ಅಳವಡಿಸಿಕೊಳ್ಳುವುದು, ಕಾಲದ ಅವಶ್ಯಕತೆಯಾಗಿದೆ! – ಶಾನ್ ಕ್ಲಾರ್ಕ್, ಫೋಂಡಾ, ಗೋವಾ
ಇರಾನ್: ಮುಸ್ಲಿಂ ಯುವತಿಯಿಂದ ಶಿವಭಜನೆ !
ಬ್ಯಾಟು-ಚೆಂಡು ಆಟ (ಕ್ರಿಕೆಟ್) ಮತ್ತು ಅಧ್ಯಾತ್ಮ
ಆಧ್ಯಾತ್ಮಿಕತೆಯಿಂದಲೇ ಶಾಂತಿ ಸಾಧ್ಯ: ಸುತ್ತೂರು ಮಠದ ಶ್ರೀಗಳ ಸಂದೇಶ
ಅಧ್ಯಾತ್ಮಪ್ರಸಾರಕ್ಕಾಗಿ ವಿಡಿಯೋಗಳನ್ನು ತಯಾರಿಸುವ ವಿಷಯದಲ್ಲಿ ಸನಾತನ ಸಂಸ್ಥೆಯ ದೃಷ್ಟಿಕೋನ !
ಅಧ್ಯಾತ್ಮದ ಅಧ್ಯಯನ ಮಾಡುವ ಬದಲು ಸಾಧನೆ ಮಾಡಿ !