
೧. ಸತತವಾಗಿ ಕೆಮ್ಮು ಬರುವುದು, ದಮ್ಮು ಬರುವುದು ಈ ರೋಗಗಳ ನಿವಾರಣೆಗಾಗಿ ಕೊಬ್ಬರಿ ಎಣ್ಣೆಯನ್ನು ದಿನದಲ್ಲಿ ೨-೩ ಬಾರಿ ೧-೨ ಚಮಚಗಳಷ್ಟು ಕುಡಿಯ ಬೇಕು. ಇದರಿಂದ ಕೆಮ್ಮು ತಕ್ಷಣ ನಿಲ್ಲುತ್ತದೆ.
೨. ಧೂಳಿನ ‘ಅಲರ್ಜಿ’ ಇರುವವರು ದಿನದಲ್ಲಿ ೫-೬ ಬಾರಿ ಕೊಬ್ಬರಿ ಎಣ್ಣೆಯ ಬಾಟಲಿಯಲ್ಲಿ ೧ ಕಿರುಬೆರಳನ್ನು ಮುಳುಗಿಸಿ ಅದಕ್ಕೆ ಅಂಟಿದ ಎಣ್ಣೆಯನ್ನು ಮೂಗಿನ ಹೊಳ್ಳೆಗಳ ಒಳಗೆ ಹಚ್ಚಬೇಕು. ಇದರಿಂದ ಮೂಗಿನಲ್ಲಿ ಬರುವ ಧೂಳು ಎಣ್ಣೆಗೆ ಅಂಟುವುದರಿಂದ ಅದು ಉಸಿರಾಟದ ಮಾರ್ಗದಲ್ಲಿ ಹೋಗುವುದಿಲ್ಲ ಮತ್ತು ಧೂಳಿನಿಂದಾಗುವ ತೊಂದರೆಯು ಕಡಿಮೆಯಾಗುತ್ತದೆ.
೩. ೧ ಚಮಚ ಕೊಬ್ಬರಿ ಎಣ್ಣೆಯನ್ನು ನೆತ್ತಿಯಲ್ಲಿ ಇಂಗಿಸಬೇಕು. ಬ್ರಹ್ಮರಂಧ್ರದ ಸ್ಥಳದಲ್ಲಿ ೫-೧೦ ನಿಮಿಷಗಳ ಕಾಲ ತಟ್ಟಬೇಕು ಮತ್ತು ತಿಕ್ಕಬೇಕು.
೪. ಪ್ರತಿದಿನ ಸ್ನಾನದ ಮೊದಲು ಶರೀರಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಚರ್ಮದ ಶುಷ್ಕತೆಯು ದೂರವಾಗಿ ಸಂದುಗಳಿಗೆ ಕೀಲೆಣ್ಣೆ ಸಿಗುತ್ತದೆ.
– ವೈದ್ಯ ಸುವಿನಯ ದಾಮಲೆ, ಕುಡಾಳ, ಸಿಂಧುದುರ್ಗ
ಔಷಧೀಯ ಸಸ್ಯಗಳನ್ನು ಹೇಗೆ ಬೆಳೆಸಬೇಕು ?
ಆಯುರ್ವೇದವನ್ನು ಮರೆತು ತಮಗೂ ಮತ್ತು ದೇಶಕ್ಕೂ ಹಾನಿ ಮಾಡುತ್ತಿರುವ ಭಾರತೀಯರು !
ಆಯುರ್ವೇದದ ಮಹತ್ವ
ವ್ಯಕ್ತಿಯ ಸರ್ವಾಂಗೀಣ ವಿಕಾಸವನ್ನು ಸಾಧಿಸುವ ವ್ಯಾಪಕ ಆಯುರ್ವೇದ !
ರೋಗಗಳು ಬರಬಾರದೆಂದು ಆಯುರ್ವೇದವು ಹೇಳಿದ ಕೆಲವು ಉಪಾಯಗಳು
ಆಯುರ್ವೇದವು ತಡವಾಗಿ ಅಲ್ಲ, ಆದರೆ ತಕ್ಷಣ ಗುಣಪಡಿಸುವ ಶಾಸ್ತ್ರವಾಗಿದೆ !