ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

‘ತಮ್ಮ ಸ್ಥಿರ ಮತ್ತು ಚರ ಆಸ್ತಿಯ ‘ಸತ್ಪಾತ್ರೆ ದಾನ’ವಾಗಬೇಕು’ ಎಂಬ ಉದ್ದೇಶದಿಂದ ಅದನ್ನು ಸನಾತನ ಸಂಸ್ಥೆಗೆ ದಾನ ಮಾಡಲು ಇಚ್ಛಿಸುತ್ತಿದ್ದರೆ ತಾವು ಬದುಕಿರುವಾಗಲೇ ಅದನ್ನು ಅರ್ಪಣೆ ಮಾಡಿರಿ !

‘ಸನಾತನ ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ನಿಸ್ವಾರ್ಥ ಮತ್ತು ನಿರಪೇಕ್ಷವಾಗಿ ಧರ್ಮ ಪ್ರಸಾರದ ಕಾರ್ಯವನ್ನು ಮಾಡುತ್ತಿದೆ. ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿನ ಸಾಧಕರು ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದು ಈ ಕಾರ್ಯಕ್ಕೆ ಅನೇಕ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಜೋಡಿಸಲ್ಪಟ್ಟಿದ್ದಾರೆ. ಸನಾತನ ಸಂಸ್ಥೆಯ ಕಾರ್ಯವನ್ನು ನೋಡಿ ಸಮಾಜದ ಅನೇಕ ಜನರು ಸಂಸ್ಥೆಗೆ ವಿವಿಧ ರೂಪಗಳಲ್ಲಿ ಅರ್ಪಣೆಯನ್ನು ನೀಡುತ್ತಾರೆ. ಅನೇಕ ಜನರು ತಮ್ಮ ಚರ  (ಧನ, ಬಂಗಾರ, ವಾಹನಗಳು ಮುಂತಾದವುಗಳು) ಮತ್ತು ಸ್ಥಿರ  (ಮನೆ, ‘ಫಾರ್ಮ ಹೌಸ್’, ಅಂಗಡಿಗಳು, ಖಾಲಿ ಜಾಗ (ಪ್ಲಾಟ್), ಕೃಷಿಭೂಮಿ ಮುಂತಾದವುಗಳು) ಆಸ್ತಿಯನ್ನು ಸನಾತನ ಸಂಸ್ಥೆಗೆ ನೀಡುವ ಇಚ್ಛೆಯನ್ನು ವ್ಯಕ್ತ ಪಡಿಸುತ್ತಾರೆ.

ಮೃತ್ಯುಪತ್ರವನ್ನು ತಯಾರಿಸಿ ತಮ್ಮ ಆಸ್ತಿಯನ್ನು ಒಬ್ಬರ ಹೆಸರಿಗೆ ಮಾಡುವುದಕ್ಕಿಂತ ಬದುಕಿರುವಾಗಲೇ ಆಸ್ತಿಯನ್ನು ಅರ್ಪಿಸುವುದು ಹೆಚ್ಚು ಅನುಕೂಲಕರವಾಗಿದೆ. ಏಕೆಂದರೆ ವ್ಯಕ್ತಿಯ ಮೃತ್ಯುವಿನ ನಂತರ ಅವರ ಮೃತ್ಯುಪತ್ರದಲ್ಲಿ ಉಲ್ಲೇಖಿಸಿದಂತೆ ಅವರು ಸತ್ ಕಾರ್ಯಕ್ಕೆ ಅರ್ಪಣೆ ಮಾಡಿದ ಆಸ್ತಿಯನ್ನು ಸನಾತನ ಸಂಸ್ಥೆಗೆ ದೊರಕಿಸಿಕೊಳ್ಳಲು ಮಾಡಬೇಕಾದ ಕಾನೂನುಬದ್ಧ ಮತ್ತು ನ್ಯಾಯಾಂಗ ಪ್ರಕ್ರಿಯೆಯು ಅತ್ಯಂತ ಜಟಿಲವಿದೆ. ಅದನ್ನು ತಡೆಗಟ್ಟಲು ಇಚ್ಛೆಯುಳ್ಳವರು ತನ್ನ ಜೀವಿತಾವಧಿಯಲ್ಲಿಯೇ ಸ್ವೇಚ್ಛೆಯಿಂದ ತಮ್ಮ ಆಸ್ಥಿಯ ವಿನಿಯೋಗವನ್ನು ಮಾಡಬೇಕು. ಹೀಗೆ ಮಾಡಿದರೆ ಈ ಜಟಿಲ ಪ್ರಕ್ರಿಯೆಯನ್ನು ತಡೆಗಟ್ಟಲು ಸಾಧ್ಯವಾಗುವುದು ಮತ್ತು ‘ಸತ್ಪಾತ್ರೆ ದಾನ’ ಮಾಡಿದ್ದರ ಸಮಾಧಾನವೂ ಸಿಗುವುದು.

ತಮ್ಮ ಚರ ಮತ್ತು ಸ್ಥಿರ ಆಸ್ತಿಯನ್ನು ತಾವು ಬದುಕಿರುವಾಗಲೇ ಸನಾತನ ಸಂಸ್ಥೆಗೆ ಅರ್ಪಣೆ ಮಾಡಲು ಇಚ್ಛಿಸುವವರು ಮುಂದಿನ ಕ್ರಮಾಂಕವನ್ನು ಸಂಪರ್ಕಿಸಬೇಕು ಅಥವಾ ತಮ್ಮ ಮಾಹಿತಿಯನ್ನು ಗಣಕೀಯ ವಿಳಾಸಕ್ಕೆ ಕಳುಹಿಸಬೇಕು.

ಹೆಸರು ಮತ್ತು ಸಂಪರ್ಕ ಕ್ರಮಾಂಕ : ಶ್ರೀ. ವೀರೇಂದ್ರ ಮರಾಠೆ – 7058885610

ಗಣಕೀಯ ವಿಳಾಸ :  [email protected]

ಅಂಚೆ ವಿಳಾಸ : ಶ್ರೀ. ವೀರೇಂದ್ರ ಮರಾಠೆ, ಛಿ/o ‘ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ತರು, ಸನಾತನ ಸಂಸ್ಥೆ, (೯.೭.೨೦೨೦)