ಬಾಬರ, ಅಕ್ಬರ, ಹುಮಾಯೂನ ಮುಂತಾದ ಆಕ್ರಮಣಕಾರರ ವಸ್ತುಸಂಗ್ರಹಾಲಯವನ್ನು ನಿರ್ಮಿಸಿ ಅವರ ಕ್ರೌರ್ಯವನ್ನು ಪ್ರದರ್ಶಿಸಿ ! : Sangeet Singh Som

  • ಭಾಜಪದ ಮಾಜಿ ಶಾಸಕ ಸಂಗೀತ ಸೋಮ್ ಅವರ ಒತ್ತಾಯ

  • ದಾಳಿಕೋರರ ಪುತ್ಥಳಿಗಳ ಮೇಲೆ ಉಗುಳಲು ಮತ್ತು ಚಪ್ಪಲಿಯಿಂದ ಹೊಡೆಯಲು ಜನರಿಗೆ ಕರೆ

ಮೇರಠ (ಉತ್ತರ ಪ್ರದೇಶ) – ಬಾಬರ್, ಅಕ್ಬರ್, ಹುಮಾಯೂನ್ ಮುಂತಾದ ದಾಳಿಕೋರರ ವಸ್ತುಸಂಗ್ರಹಾಲಯವನ್ನು ನಿರ್ಮಿಸಿ ಅವರ ಕ್ರೌರ್ಯವನ್ನು ತೋರಿಸಿ, ಎಂದು ಸರಧನಾ ಇಲ್ಲಿನ ಭಾಜಪದ ಮಾಜಿ ಶಾಸಕ ಠಾಕೂರ ಸಂಗೀತ ಸೋಮ್ ಅವರು ಪತ್ರಕರ್ತರೊಂದಿಗೆ ಮಾತನಾಡುವಾಗ ಒತ್ತಾಯಿಸಿದರು. ಸೋಮ್ ಮಾತನಾಡಿ, ದಾಳಿಕೋರರು ಮಾಡಿದ ದೇವಸ್ಥಾನಗಳ ಧ್ವಂಸ ಮತ್ತು ಸನಾತನ ಧರ್ಮದ ಜನರ ಮೇಲಿನ ದೌರ್ಜನ್ಯಗಳು ಹೊಸ ಪೀಳಿಗೆಗೆ ತಿಳಿಯಬೇಕು. ಜನರು ಪ್ರತಿದಿನ ಈ ವಸ್ತುಸಂಗ್ರಹಾಲಯಕ್ಕೆ ಹೋಗಿ ದಾಳಕೋರರ ಪುತ್ಥಳಿಗಳ ಮೇಲೆ ಉಗುಳಬೇಕು ಮತ್ತು ಚಪ್ಪಲಿಗಳಿಂದ ಹೊಡೆಯಬೇಕು. ಇದರಿಂದ ದೇಶದ ಜನರಿಗೆ ತಮ್ಮ ಮನಸ್ಸಿನಲ್ಲಿ ಶತಶತಮಾನಗಳಿಂದ ಸಂಗ್ರಹವಾಗಿರುವ ಸೇಡನ್ನು ಹೊರಹಾಕಲು ಅವಕಾಶ ಸಿಗುತ್ತದೆ ಎಂದರು.

ಮತಾಂತರ ಮತ್ತು ನೈಜ ಮುಸಲ್ಮಾನರ ಕುರಿತು ಹೇಳಿಕೆ

ಭಾರತೀಯ ಮುಸಲ್ಮಾನರ ಬಗ್ಗೆ ಮಾತನಾಡಿದ ಸೋಮ್, ‘ದೇಶದ ನಿಜವಾದ ಮುಸಲ್ಮಾನರು ನಮ್ಮನ್ನು ತುಂಬಾ ಪ್ರೀತಿಸುತ್ತಾರೆ; ಆದರೆ ಪಾಕಿಸ್ತಾನವನ್ನು ಪ್ರೀತಿಸುವ ಮುಸಲ್ಮಾನರು ನಮ್ಮನ್ನು ಹೇಗೆ ಪ್ರೀತಿಸುತ್ತಾರೆ ? ಇತರರನ್ನು ಬಲವಂತವಾಗಿ ಮತಾಂತರ ಮಾಡುವವರನ್ನು ಗಲ್ಲಿಗೇರಿಸಬೇಕು; ಏಕೆಂದರೆ ಇದೇ ನಿಜವಾದ ಜಿಹಾದ್ ಆಗಿದೆ’ ಎಂದರು.

ಸಂಪಾದಕೀಯ ನಿಲುವು

  • ನಾಳೆ ಇಂತಹ ವಸ್ತುಸಂಗ್ರಹಾಲಯಗಳನ್ನು ಮತಾಂಧರು ತಮ್ಮ ಶ್ರದ್ಧಾಕೇಂದ್ರಗಳೆಂದು ಕರೆಯಬಹುದು ಮತ್ತು ಸರಕಾರ, ಆಡಳಿತ ಹಾಗೂ ಹಿಂದೂಗಳ ತಲೆನೋವು ಹೆಚ್ಚಾಗಬಹುದು ! ದಾಳಿಕೋರರ ಕ್ರೌರ್ಯವನ್ನು ಪಠ್ಯಪುಸ್ತಕಗಳು, ಧಾರಾವಾಹಿಗಳು, ಚಲನಚಿತ್ರಗಳ ಮೂಲಕ ತಲುಪಿಸಲು ಪ್ರಯತ್ನಿಸುವುದು ಅಗತ್ಯವಾಗಿದೆ !
  • ಹಿಟ್ಲರನು 7 ಕೋಟಿ ಯಹೂದಿಗಳನ್ನು (ಜ್ಯೂ) ನರಮೇಧ ಮಾಡಿದ ಇತಿಹಾಸವನ್ನು ಜರ್ಮನಿ ಮತ್ತು ಆಸ್ಟ್ರಿಯಾ ಹೇಗೆ ಸಂರಕ್ಷಿಸಿ ಪ್ರದರ್ಶಿಸುತ್ತದೆಯೋ, ಅದೇ ರೀತಿಯ ಬೇಡಿಕೆಯನ್ನು ಸಂಗೀತ ಸೋಮ್ ಅವರು ಇಟ್ಟಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳು ! ಇಸ್ಲಾಮಿಕ್ ದಾಳಿಕೋರರು ಹಿಂದೂಗಳ ಮೇಲೆ ನಡೆಸಿದ ದೌರ್ಜನ್ಯಗಳ ನೈಜ ಪ್ರದರ್ಶನವನ್ನು ಮಾಡಬೇಕಾದರೆ, ದೇಶದ ಬಹುತೇಕ ಪ್ರಾಚೀನ ಮಸೀದಿಗಳ ದರ್ಶನ ಮಾಡಿಸಬೇಕು ಎಂಬುದನ್ನು ಮರೆಯುವಂತಿಲ್ಲ !