
ಮನ ವರ್ಣಿಸಿ ತಣಿಯದು
ನಿಮ್ಮ ಕುರಿತಾಗಿ
ಏನ ವರ್ಣಿಸಲೆಂದೇ
ನನಗೆಂದಿಗೂ ಅರಿವಾಗದು || ೧ ||
ಕಣ್ಮುಂದೆ ನಿಮ್ಮ ರೂಪ ಬಂದೊಡನೆ
ಮನ ಭೋರ್ಗರೆವುದು
ಅದರಿಂದಾದ ಆ ಅಲೆಗಳು
ಎನ್ನ ತೋಯಿಸುತಿಹವು || ೨ ||
ಅಸಾಧ್ಯವಾಗಿಹುದು ಅರಿಯಲು ಎನಗೆ
ಇದರ ಕಾರ್ಯಕಾರಣ ಭಾವವು
ನಿಮ್ಮ ಕೀರ್ತನೆಯಲಿಯೇ
ಮನ ನಿಲ್ಲಲಿಚ್ಛಿಸಿಹುದು || ೩ ||
ಕಂಡದ್ದು ಪ್ರತ್ಯಕ್ಷ ಒಂದೋ ಎರಡೋ ಬಾರಿ
ಕೇಳಿದ್ದು ಎರಡೋ ಮೂರೋ ಮಾತು
ಇಷ್ಟಕ್ಕೇ ಇಷ್ಟಾದರೆ
ನಿರಂತರ ಸಹವಾಸದ ಫಲ ಅಗಣಿತವೇನೋ || ೪ ||
ಅವರ್ಣನೀಯ ಆ ಮುಖವರ್ಚಸ್ಸು
ಶಬ್ದಗಳು ಕ್ಷುಲ್ಲಕವೆನಿಸುತಿಹವು
ಕಣ್ಮುಂದಿರುವ ರೂಪ ಅಸ್ಪಷ್ಟವಾದರೂ
ಅನುಭವಿಸುತಿಹ ಆನಂದ ನಿಜವೇ ಹೌದು || ೫ ||
ಅಮ್ಮಾ ಎಂದು ಬಾಯ್ತುಂಬ ಕರೆವಾಸೆ
ಆ ಮಹಾ ಜಗದ್ಧಾತ್ರಿಯನು
ನಮಿಸುತಿಹೆನು ಕುಳಿತಲ್ಲೆ
ಅವರ ಮಮತೆಯ ಕಡಲಿನೊಳು || ೬ ||
ಅಲ್ಪನಾಗಿಹೆನು ಬುದ್ಧಿಯಿಂದ
ಅಳೆಯಲು ನಿಮ್ಮ ಸಹವಾಸದ ಆನಂದ
ಏಕೀ ಸ್ಥಿತಿಯೆಂದು ತಿಳಿಯದೇ ಹೋಗಿಹೆನು
ನಿರಂತರ ನಿಮ್ಮ ಸಹವಾಸ ಸಿಗಲೆಂದು
ನಿಮ್ಮ ಚರಣಗಳಲಿ ಅನಂತ ಪ್ರಾರ್ಥನೆಯು || ೭ ||
– ಶ್ರೀ. ಕೀರ್ತನ ಭಟ್, ಸನಾತನ ಸೇವಾಕೇಂದ್ರ, ಮಂಗಳೂರು.
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !