
ಖಾರ್ತುಮ (ಸುಡಾನ್) – ಆಫ್ರಿಕಾ ಖಂಡದ ಇಸ್ಲಾಮೀ ರಾಷ್ಟ್ರವಾಗಿರುವ ಸುಡಾನ್ನಲ್ಲಿ ಇಸ್ಲಾಮ್ ತ್ಯಜಿಸುವುದನ್ನು ಇನ್ನು ಮುಂದೆ ಅಪರಾಧವೆಂದು ಪರಿಗಣಿಸುವುದಿಲ್ಲ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಹಿಂದೆ ಧರ್ಮವನ್ನು ತ್ಯಜಿಸುವವರಿಗೆ ಮರಣದಂಡಣೆಯ ಶಿಕ್ಷೆ ಇತ್ತು. ಜೊತೆಗೆ ಮುಸಲ್ಮಾನರೇತರ ಜನರನ್ನು ವೈಯಕ್ತಿಕವಾಗಿ ಸರಾಯಿಯನ್ನು ಕುಡಿಯಲು ಅನುಮತಿಯನ್ನು ನೀಡಿದೆ; ಆದರೆ ಮುಸಲ್ಮಾನರಿಗೆ ಇದರ ಮೇಲೆ ನಿರ್ಬಂಧ ಮುಂದುವರೆದಿದೆ. ಹುಡುಗಿಯರ ಖತನಾ ಮಾಡುವುದನ್ನು ನಿಷೇಧಿಸಲಾಗಿದೆ. ಇಸ್ಲಾಮ್ನಲ್ಲಿ ಹುಡುಗರ ಸುಂತಾ ಮಾಡುವುದರ ಜೊತೆಗೆ ಹುಡುಗಿಯರ ಖತನಾ ಮಾಡುವ ಪರಂಪರೆ ಇದೆ. ಸುಡಾನ್ನಲ್ಲಿ ಖತನಾ ಮಾಡುವ ಸಂಖ್ಯೆ ಹೆಚ್ಚಿದೆ.
ಸುಡಾನನ ನ್ಯಾಯಮಂತ್ರಿ ನಸರೆಡಿನ ಅಬ್ದುಲಬಾರಿ ಇವರು ಹೇಳಿರುವ ಪ್ರಕಾರ, ‘ಮಾನವಹಕ್ಕುಗಳ ಉಲ್ಲಂಘನೆ ಮಾಡುವಂತಹ ಈ ರೀತಿಯ ಕಾನೂನುಗಳನ್ನು ರದ್ದು ಪಡಿಸಲು ಸರಕಾರದ ಗಮನಹರಿಸುತ್ತಿದೆ. ಆದ್ದರಿಂದಲೇ ಖತನಾದ ಮೇಲೆ ನಿಷೇಧ ಹೇರಲಾಗಿದೆ’ ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation