- ಇಸ್ಲಾಮಿ ದೇಶದಲ್ಲಿ ಹಿಂದೂಗಳ ದೇವಸ್ಥಾನದ ದುರ್ಗತಿ ತಿಳಿದುಕೊಳ್ಳಿ ! ಇದರ ಬಗ್ಗೆ ಒಬ್ಬಾನೊಬ್ಬ ಪ್ರಗತಿ(ಅಧೋಗತಿ)ಪರ, ಮಾನವಧಿಕಾರದವರು, ಪ್ರಸಾರ ಮಾಧ್ಯಮಗಳು ಇತ್ಯಾದಿಯವರು ಏಕೆ ಬಾಯಿ ಬಿಡುತ್ತಿಲ್ಲ ?
- ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿಯ ಅಲ್ಪಸಂಖ್ಯಾತ ಹಿಂದೂಗಳ ಹಾಗೂ ಶ್ರದ್ಧಾಸ್ಥಾನಗಳ ರಕ್ಷಣೆಯನ್ನು ಮಾಡದಿರುವುದು, ಇದು ಕಳೆದ ೭೨ ವರ್ಷಗಳಿಂದ ಇಲ್ಲಿಯವರೆಗಿನ ಸರಕಾರಗಳಿಗೆ ನಾಚಿಕೆಯ ವಿಷಯವಾಗಿದೆ. ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !
ಮಂದಿರದ ರಕ್ಷಕರೂ ಮುಸಲ್ಮಾನರೇ !
ಸದ್ಯ ಈ ದೇವಸ್ಥಾನದಲ್ಲಿ ಒಂದೂ ಮೂರ್ತಿ ಅಸ್ತಿತ್ವದಲ್ಲಿಲ್ಲ !

ಇಸ್ಲಾಮಾಬಾದ್ – ಇಲ್ಲಿಯ ಸೈದಪುರ ಈ ಗ್ರಾಮದಲ್ಲಿ ಮರ್ಗಲ್ಲಾಹ ಗುಡ್ಡದ ಅಡಿಯಲ್ಲಿರುವ ಒಂದು ಪ್ರಾಚೀನ ರಾಮನ ದೇವಸ್ಥಾನದಲ್ಲಿ ಹಿಂದೂಗಳಿಗೆ ಪೂಜೆ-ಅರ್ಚನೆ ಮಾಡಲು ನಿರ್ಬಂಧ ಹೇರಿದೆ. ಈ ದೇವಸ್ಥಾನದ ದರ್ಶನಕ್ಕಾಗಿ ಭಕ್ತಾದಿಗಳು ದೂರದಿಂದ ಬರುತ್ತಾರೆ; ಆದರೆ ಅವರಿಗೆ ಪೂಜೆ ಮಾಡಲು ಆಗದೇ ಮರಳಿ ಹೋಗಬೇಕಾಗುತ್ತಿದೆ.
೧. ೧೪ ವರ್ಷ ವನವಾಸದಲ್ಲಿದ್ದ ಭಗವಾನ ಶ್ರೀರಾಮ, ಸೀತಾಮಾತೆ ಹಾಗೂ ಶ್ರೀ ಲಕ್ಷ್ಮಣರು ಇಲ್ಲೇ ವಾಸವಾಗಿದ್ದರು. ಆದ್ದರಿಂದ ಈ ದೇವಸ್ಥಾನಕ್ಕೆ ವಿಶೇಷ ಮಹತ್ವವಿದೆ.
೨. ಈ ಪವಿತ್ರ ಸ್ಥಳದಲ್ಲಿ ರಾಜಾ ಮಾನಸಿಂಹರು ೧೫೮೦ ರ ಸರಿಸುಮಾರು ರಾಮಮಂದಿರವನ್ನು ನಿರ್ಮಿಸಿದ್ದರು.
೩. ಇಲ್ಲಿ ಒಂದು ಸುಂದರವಾದ ರಾಮಕುಂಡ ಅಸ್ತಿತ್ವದಲ್ಲಿತ್ತು. ಭಗವಾನ ಶ್ರೀರಾಮನು ಈ ಕೊಳದಲ್ಲಿನ ನೀರನ್ನು ಸೇವಿಸಿದ್ದನು. ೧೮೯೩ ರ ತನಕ ಪ್ರತಿವರ್ಷ ಇದೇ ರಾಮಕುಂಡದ ಬಳಿ ಜಾತ್ರೆ ಇರುತ್ತಿತ್ತು. ಸದ್ಯ ಈ ಪ್ರಾಚೀನ ರಾಮಕುಂಡವು ದುರ್ಗಂಧದಿಂದ ಕೂಡಿದ ಕಾಲುವೆಯಾಗಿ ರೂಪಾಂತರವಾಗಿದೆ.
೪. ವಿಭಜನೆಯ ನಂತರ ದೇವಸ್ಥಾನವನ್ನು ಪಾಕಿಸ್ತಾನವು ತನ್ನ ವಶದಲ್ಲಿ ತೆಗೆದುಕೊಂಡಿದ್ದು ಅಲ್ಲಿ ಹಿಂದೂಗಳಿಗೆ ಪೂಜೆ-ಅರ್ಚನೆ ಮಾಡಲು ಬಿಡುತ್ತಿಲ್ಲ.
೫. ೧೯೬೦ ರಲ್ಲಿ ಪಾಕಿಸ್ತಾನದಲ್ಲಿ ಹಿಂದೂದ್ವೇಷಿ ಸರಕಾರವು ಈ ದೇವಸ್ಥಾನವನ್ನು ಹೆಣ್ಣುಮಕ್ಕಳ ಶಾಲೆಯನ್ನಾಗಿ ರೂಪಾಂತರಿಸಿದರು. ಇದಕ್ಕೆ ಹಿಂದೂಗಳು ತೀವ್ರವಾಗಿ ವಿರೋಧಿಸಿದಾಗ ೨೦೦೬ ರಲ್ಲಿ ಈ ಶಾಲೆಯನ್ನು ಬೇರೆ ಕಡೆ ಸ್ಥಳಾಂತರಿಸಿ ಈ ದೇವಸ್ಥಾನವನ್ನು ಸಂಪೂರ್ಣ ಖಾಲಿ ಮಾಡಲಾಯಿತು.
೬. ಪಾಕಿಸ್ತಾನ ಸರಕಾರವು ೨೦೦೮ ರಲ್ಲಿ ಈ ರಾಮಮಂದಿರವನ್ನು ‘ಸ್ಮಾರಕ ಸ್ಥಳ’ ಎಂದು ಘೋಷಿಸಿ ಈ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯವನ್ನು ಆರಂಭಿಸಿತು. ವಿಶೇಷವೆಂದರೆ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವಾಗ ದೇವಸ್ಥಾನದಲ್ಲಿದ್ದ ಮೂರ್ತಿಗಳನ್ನು ತೆಗೆದುಹಾಕಲಾಯಿತು. ಸದ್ಯ ಈ ದೇವಸ್ಥಾನದಲ್ಲಿ ಒಂದೂ ಮೂರ್ತಿ ಅಸ್ತಿತ್ವದಲ್ಲಿ ಇಲ್ಲ. ಆ ಸಮಯದಿಂದ ಈ ಗ್ರಾಮ ಸೈದಪುರ ಹೆಸರಿನಿಂದ ಗುರುತಿಸಲಾಗುತ್ತಿದೆ.
೭. ತದನಂತರ ಇಲ್ಲಿ ಅನೇಕ ಮಾಂಸಾಹಾರ ಹೋಟೆಲ್, ಅದೇರೀತಿ ಕರಕುಶಲದ ಅಂಗಡಿಗಳನ್ನು ಆರಂಭಿಸಲಾಗಿದೆ.
೮. ಈ ದೇವಸ್ಥಾನದ ಪರಿಸರದಲ್ಲಿ ಒಂದು ಧರ್ಮಶಾಲೆಯನ್ನು ನಿರ್ಮಿಸಲಾಗಿದ್ದು, ಈಗ ಅದನ್ನು ಸಾರ್ವಜನಿಕ ಶೌಚಾಲಯವಾಗಿ ಉಪಯೋಗಿಸಲಾಗುತ್ತಿದೆ.
೩ ಸಾವಿರ ಹಿಂದೂಗಳಿಗಾಗಿ ಒಂದೂ ದೇವಸ್ಥಾನ ಇಲ್ಲ ! – ಸವಾಯಿ ಲಾಲ್, ಹಿಂದೂ ಕಾರ್ಯಕರ್ತ
ಪಾಕಿಸ್ತಾನದಲ್ಲಿಯ ಹಿಂದೂ ಕಾರ್ಯಕರ್ತ ಶ್ರೀ. ಸವಾಯಿ ಲಾಲ್ ಅವರು ಮಾತನಾಡುತ್ತ, “ಇಸ್ಲಾಮಾಬಾದನಲ್ಲಿ ೩ ಸಾವಿರ ಹಿಂದೂಗಳು ಇದ್ದಾರೆ; ಆದರೆ ಹಿಂದೂಗಳಿಗಾಗಿ ಒಂದೂ ದೇವಸ್ಥಾನ ಇಲ್ಲ. (ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಮಾತ್ರ ಕೈಬೆರಳೆಣಿಕೆಯಷ್ಟು ಅಲ್ಪಸಂಖ್ಯಾತರಿಗಾಗಿ ದೊಡ್ಡ ದೊಡ್ಡ ಪ್ರಾರ್ಥನಾಸ್ಥಳಗಳಿದ್ದು ಅದರಿಂದ ಕರ್ಕಶವಾದ ಧ್ವನಿ ಬರುವ ಕಾನೂನುಬಾಹಿರ ಬೋಂಗಾಗಳನ್ನು ಹಾಕಿರುತ್ತಾರೆ ! – ಸಂಪಾದಕರು) ಸರಕಾರವು ಇಲ್ಲಿ ಅಸ್ತಿತ್ವದಲ್ಲಿರುವ ರಾಮಮಂದಿರದ ಪರಿಸರದಲ್ಲಿ ಹೊಟೆಲ್ ಹಾಗೂ ಅಂಗಡಿ ಮುಗ್ಗಟ್ಟುಗಳನ್ನು ತೆರೆಯಲಾಗಿದ್ದು ಈ ದೇವಸ್ಥಾನದ ಪಾವಿತ್ರತೆಯನ್ನು ಭಂಗ ಮಾಡಿದ್ದಾರೆ” ಎಂದು ಹೇಳಿದರು.
೧,೨೮೮ ಹಿಂದೂ ದೇವಸ್ಥಾನಗಳಲ್ಲಿ ಕೇವಲ ೩೧ ದೇವಸ್ಥಾನದಲ್ಲಿ ಹಿಂದೂಗಳಿಗೆ ದರ್ಶನದ ಅನುಮತಿ ! – ಪಾಕಿಸ್ತಾನ ಹಿಂದೂ ಕೌನ್ಸಿಲ್
‘ಪಾಕಿಸ್ತಾನ ಹಿಂದೂ ಕೌನ್ಸಿಲ್’ನ ರಕ್ಷಣಾ ಮುಖ್ಯಸ್ಥರಾದ ರಮೇಶ ಕುಮಾರ ವಾಂಕವಾನಿಯವರು ಮಾತನಾಡುತ್ತ, “ಸದ್ಯ ಇಲ್ಲಿ ೧,೨೮೮ ದೇವಸ್ಥಾನಗಳ ನೋಂದಣಿ ಇದೆ; ಆದರೆ ಇದರ ಪೈಕಿ ಕೇವಲ ೩೧ ದೇವಸ್ಥಾನಗಳಲ್ಲಿ ಹಿಂದೂಗಳಿಗೆ ದರ್ಶನಕ್ಕಾಗಿ ಅನುಮತಿಯನ್ನು ನೀಡಿದೆ. ಸರಕಾರವು ನಮಗೆ ಈ ಪ್ರಾಚೀನ ರಾಮಮಂದಿರದ ಜೀರ್ಣೋದ್ಧಾರಕ್ಕಾಗಿ ಅನುಮತಿಯನ್ನು ನೀಡಬೇಕು” ಎಂದು ಹೇಳಿದೆ. ಭಜನೆಯ ನಂತರ ಪಾಕಿಸ್ತಾನವನ್ನು ಬಿಟ್ಟು ಭಾರತಕ್ಕೆ ಬಂದಿರುವ ಜನರ ಸ್ವತ್ತಿನ ರಕ್ಷಣೆಯ ಜವಾಬ್ದಾರಿಯು ‘ಪಾಕಿಸ್ತಾನ ಹಿಂದೂ ಕೌನ್ಸಿಲ್’ ಬಳಿ ಇದೆ.
ಭಾರತ, ರಷ್ಯಾ ಮತ್ತು ಚೀನಾ ನಡುವಿನ ದೃಢವಾದ ಸಂಬಂಧ ಜಾಗತಿಕ ಸ್ಥಿರತೆಗೆ ಮುಖ್ಯ! – ಚೀನಾ : China
‘ಡೊಮಿನಿಕನ್ ರಿಪಬ್ಲಿಕ್’ನಲ್ಲಿ ಜೆಟ್ ವಿಮಾನ ಪತನ : ಪೈಲಟ್ ಮತ್ತು ಸಹ-ಪೈಲಟ್ ಸಾವು !
‘ಬ್ರಿಕ್ಸ್’ ಜಾಗತಿಕ ಆರ್ಥಿಕತೆಯ ಹೊಸ ಮಹಾಶಕ್ತಿ ! – ವ್ಲಾಡಿಮಿರ್ ಪುಟಿನ್
ಇರಾನ್-ಇಸ್ರೇಲ್ ನಡುವೆ ಮತ್ತೆ ಭುಗಿಲೆದ್ದ ಯುದ್ಧದ ಕಿಚ್ಚು !
ಫಿಲಿಪೈನ್ಸ್ನಲ್ಲಿ 7.8 ರಿಕ್ಟರ್ ತೀವ್ರತೆಯ ಭೂಕಂಪ : 19 ಜನರ ಸಾವು !
Singapore Blocks Anti-India Content: ಭಾರತೀಯರನ್ನು ಅಪಖ್ಯಾತಿಗೊಳಿಸುವ ಚೀನಿ ನಾಗರಿಕರ ಆನ್ ಲೈನ್ ಅಭಿಯಾನವನ್ನು ಬಯಲಿಗೆಳೆದ ಸಿಂಗಾಪುರ ಸರಕಾರ