

ನಮ್ಮ ಆತ್ಮೋನ್ನತಿಯ ತಳಮಳ
ನಮಗಿಂತ ನಿಮಗೇ ಹೆಚ್ಚು
ನಮ್ಮ ತಪ್ಪುಗಳನ್ನು ತಿದ್ದಿ ತೀಡಿದಿರಿ
ದಾರಿತೋರಿದಿರಿ ಪೂಜ್ಯ ಅಣ್ಣ ||೧||
ಸಾಧನೆಯ ಹಾದಿಯಲ್ಲಿ ಮಂದಗತಿ
ಇದ್ದಾಗ ಗುರುತಿಸಿ ಸತ್ಸಂಗ ನೀಡಿ
ಮುಂದಿನ ದಾರಿ ತೋರಿದಿರಿ
ಮಾರ್ಗದರ್ಶನ ಮಾಡಿದಿರಿ ಪೂಜ್ಯ ಅಣ್ಣ ||೨||
ವ್ಯಷ್ಟಿ ಸಮಷ್ಟಿ ಸಾಧನೆಯ ಪಥದಲಿ
ನಮ್ಮನ್ನೆಲ್ಲ ಕರೆದುಕೊಂಡು
ಗುರುಚರಣದವರೆಗೆ ಹೋಗುತ್ತಿದ್ದೀರಿ
ಸಾಧನೆಯಲಿ ಮುಂದಿನ ದಿಶೆ ತೋರಿದಿರಿ ಪೂಜ್ಯ ಅಣ್ಣ ||೩||
ಭಾವ ತಳಮಳ ಶ್ರದ್ಧೆ ಹೆಚ್ಚಿಸಲು ಹೇಳಿದಿರಿ
ಉದಾಹರಣೆಗಳ ಮೂಲಕ ಪ್ರೋತ್ಸಾಹ ನೀಡಿದಿರಿ
ಚೈತನ್ಯ ತುಂಬಿದಿರಿ ಪೂಜ್ಯ ಅಣ್ಣ ||೪||
ಕೆಲವೊಮ್ಮೆ ನಮ್ಮ ದೋಷ ಮತ್ತು ಅಹಂ ತೆಗೆಯಲು ಕಠೋರವಾಗಿ ಹೇಳಿದಿರಿ
ಮತ್ತೆ ಕೆಲವೊಮ್ಮೆ ಪ್ರೇಮಭಾವದಿಂದ ಅರಿವು ಮಾಡಿಕೊಟ್ಟಿದ್ದೀರಿ ಪೂಜ್ಯ ಅಣ್ಣ ||೫||
ಸಂಪೂರ್ಣ ಕರ್ನಾಟಕದ ಸಾಧನೆಯ ಚುಕ್ಕಾಣಿ ಹಿಡಿದಿದ್ದೀರಿ
ನಿಮ್ಮ ಚರಣಕೆ ಕೃತಜ್ಞತೆಯ ಪುಷ್ಪ ಸಮರ್ಪಿಸುವೆವು ಪೂಜ್ಯ ಅಣ್ಣ ||೬||
ಸತತ ಸಾಧಕರ ಸಾಧನೆಯಗಬೇಕು, ಗುರುಕಾರ್ಯ ವೃದ್ಧಿಯಾಗಬೇಕೆಂಬ
ತೀವ್ರ ತಳಮಳ ಇರುವ ಸಮಷ್ಟಿ ಸಂತರನ್ನು ನಮಗೆ ನೀಡಿದ
ಶ್ರೀ ಗುರುಚರಣಗಳಿಗೆ ಅನಂತ ಕೋಟಿ ಕೃತಜ್ಞತೆಗಳು… ||೭ ||
– ಸೌ. ಶಾರದಾ ಯೋಗೀಶ, ಬೆಂಗಳೂರು (೨೮.೫.೨೦೨೦, ಬೆಳಗ್ಗೆ ೧೦.೧೫)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !