

ನಮ್ಮ ಆತ್ಮೋನ್ನತಿಯ ತಳಮಳ
ನಮಗಿಂತ ನಿಮಗೇ ಹೆಚ್ಚು
ನಮ್ಮ ತಪ್ಪುಗಳನ್ನು ತಿದ್ದಿ ತೀಡಿದಿರಿ
ದಾರಿತೋರಿದಿರಿ ಪೂಜ್ಯ ಅಣ್ಣ ||೧||
ಸಾಧನೆಯ ಹಾದಿಯಲ್ಲಿ ಮಂದಗತಿ
ಇದ್ದಾಗ ಗುರುತಿಸಿ ಸತ್ಸಂಗ ನೀಡಿ
ಮುಂದಿನ ದಾರಿ ತೋರಿದಿರಿ
ಮಾರ್ಗದರ್ಶನ ಮಾಡಿದಿರಿ ಪೂಜ್ಯ ಅಣ್ಣ ||೨||
ವ್ಯಷ್ಟಿ ಸಮಷ್ಟಿ ಸಾಧನೆಯ ಪಥದಲಿ
ನಮ್ಮನ್ನೆಲ್ಲ ಕರೆದುಕೊಂಡು
ಗುರುಚರಣದವರೆಗೆ ಹೋಗುತ್ತಿದ್ದೀರಿ
ಸಾಧನೆಯಲಿ ಮುಂದಿನ ದಿಶೆ ತೋರಿದಿರಿ ಪೂಜ್ಯ ಅಣ್ಣ ||೩||
ಭಾವ ತಳಮಳ ಶ್ರದ್ಧೆ ಹೆಚ್ಚಿಸಲು ಹೇಳಿದಿರಿ
ಉದಾಹರಣೆಗಳ ಮೂಲಕ ಪ್ರೋತ್ಸಾಹ ನೀಡಿದಿರಿ
ಚೈತನ್ಯ ತುಂಬಿದಿರಿ ಪೂಜ್ಯ ಅಣ್ಣ ||೪||
ಕೆಲವೊಮ್ಮೆ ನಮ್ಮ ದೋಷ ಮತ್ತು ಅಹಂ ತೆಗೆಯಲು ಕಠೋರವಾಗಿ ಹೇಳಿದಿರಿ
ಮತ್ತೆ ಕೆಲವೊಮ್ಮೆ ಪ್ರೇಮಭಾವದಿಂದ ಅರಿವು ಮಾಡಿಕೊಟ್ಟಿದ್ದೀರಿ ಪೂಜ್ಯ ಅಣ್ಣ ||೫||
ಸಂಪೂರ್ಣ ಕರ್ನಾಟಕದ ಸಾಧನೆಯ ಚುಕ್ಕಾಣಿ ಹಿಡಿದಿದ್ದೀರಿ
ನಿಮ್ಮ ಚರಣಕೆ ಕೃತಜ್ಞತೆಯ ಪುಷ್ಪ ಸಮರ್ಪಿಸುವೆವು ಪೂಜ್ಯ ಅಣ್ಣ ||೬||
ಸತತ ಸಾಧಕರ ಸಾಧನೆಯಗಬೇಕು, ಗುರುಕಾರ್ಯ ವೃದ್ಧಿಯಾಗಬೇಕೆಂಬ
ತೀವ್ರ ತಳಮಳ ಇರುವ ಸಮಷ್ಟಿ ಸಂತರನ್ನು ನಮಗೆ ನೀಡಿದ
ಶ್ರೀ ಗುರುಚರಣಗಳಿಗೆ ಅನಂತ ಕೋಟಿ ಕೃತಜ್ಞತೆಗಳು… ||೭ ||
– ಸೌ. ಶಾರದಾ ಯೋಗೀಶ, ಬೆಂಗಳೂರು (೨೮.೫.೨೦೨೦, ಬೆಳಗ್ಗೆ ೧೦.೧೫)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !