ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ

ಪೂ. ರಮಾನಂದ ಗೌಡ

ಕೊರೋನಾದಂತಹ ಸಾಂಕ್ರಾಮಿಕ ರೋಗವಾಗಿರಬಹುದು ಅಥವಾ ಇತರ ನೈಸರ್ಗಿಕ ವಿಕೋಪವಾಗಲಿ ಪ್ರತಿಯೊಬ್ಬರೂ ತಮ್ಮದೇ ಪರಿಯಲ್ಲಿ ಅದರ ಕಾರಣಗಳನ್ನು ಹುಡುಕುತ್ತಿದ್ದಾರೆ. ವೈಜ್ಞಾನಿಗಳಾಗಿದ್ದರೆ ‘ಈ ವಿಪತ್ತು ಏಕೆ ಬಂದಿತು ?, ‘ಅದರ ಪರಿಣಾಮವೇನು ? ಎಂದು ತರ್ಕ ಮಾಡುವನು. ಪತ್ರಕರ್ತರು ತಮ್ಮ ತರ್ಕ ಮಂಡಿಸುತ್ತಾರೆ; ಆದರೆ ವಿಪತ್ತಿಗೆ ಆಧ್ಯಾತ್ಮಿಕ ಕಾರಣಗಳೇನು (ದೃಷ್ಟಿಕೋನ) ಎಂಬುದನ್ನು ತಿಳಿಯಬೇಕಿದೆ; ಏಕೆಂದರೆ ಆಧ್ಯಾತ್ಮಿಕ ದೃಷ್ಟಿಕೋನವಿಲ್ಲದೆ, ನೀವು ವಿಪತ್ತುಗಳ ನಿಜವಾದ ಕಾರಣವನ್ನು ಅರ್ಥಮಾಡಿಕೊಳ್ಳಲಾಗದು.

೭. ಮನುಕುಲದ ಸಂತರು ಹೇಳಿದ ಭವಿಷ್ಯವಾಣಿ

ಭಾರತವು ದೇವಭೂಮಿಯಾಗಿದೆ. ಋಷಿಮುನಿಗಳ ಭೂಮಿಯಾಗಿದೆ. ಇಲ್ಲಿ ಅನೇಕ ತಪಸ್ವಿಗಳು ಮುಂಬರುವ ಕಾಲವು ಅತ್ಯಂತ ಭೀಕರ ಆಪತ್ಕಾಲವಾಗಿದೆ ಎಂದು ಮೊದಲೇ ಸೂಚಿಸಿದ್ದರು. ಆದರೆ ನಾವು ಸಂಕುಚಿತ ಮತ್ತು ಸ್ವಾರ್ಥಿಗಳಾಗಿದ್ದೇವೆ. ‘ನಮ್ಮ ಮನೆ ಸುರಕ್ಷಿತವಿದೆ ಎಂಬ ವಿಚಾರದಿಂದ ನಾವು ಸಂತರ ಹೇಳಿಕೆಗಳತ್ತ ದುರ್ಲಕ್ಷ್ಯ ಮಾಡಿದೆವು. ಭವಿಷ್ಯವಾಣಿಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಕೆಲವು ಸಂತರ ಆಯ್ದ ಹೇಳಿಕೆಗಳನ್ನು ತಮ್ಮ ಮುಂದೆ ಇಡುತ್ತಿದ್ದೇನೆ.

೭ ಅ. ಯುಗದೃಷ್ಟಾರ ನಾಸ್ಟರಡಾಮಸ್ : ಇವತ್ತಿಗೆ ೪೦೦ ವರ್ಷ ಮೊದಲು ನಾಸ್ಟರಡಾಮಸ್ ಎಂಬ ಪ್ರಸಿದ್ಧ ಯುಗದ್ರಷ್ಟಾರನು ಫ್ರಾನ್ಸನಲ್ಲಿ ಜನಿಸಿದ್ದನು. ಅವನು ಹೇಳಿದ ಅನೇಕ ಭವಿಷ್ಯ ವಾಣಿಗಳು ಸಂಪೂರ್ಣ ಸತ್ಯವಾಗಿವೆ. ಅದರಲ್ಲಿ ಮೊದಲನೆಯ ಮತ್ತು ಎರಡನೆಯ ಮಹಾಯುದ್ಧದ ವಿಷಯದಲ್ಲಿ ಅವನು ಏನೆಲ್ಲವನ್ನು ಹೇಳಿದ್ದನೋ ಅದೆಲ್ಲವೂ ಸತ್ಯವಾಗಿತ್ತು. ಅವನು ಮೂರನೆಯ ಮಹಾಯುದ್ಧದ ಬಗ್ಗೆ ಮುಂದಿನಂತೆ ಹೇಳಿದ್ದಾನೆ. ‘ಈ ಮೂರನೆಯ ಮಹಾಯುದ್ಧವು ಎಷ್ಟು ಭಯಂಕರವಾಗಿರಲಿದೆ ಎಂದರೆ ಮೊದಲಿನ ಎರಡು ಮಹಾಯುದ್ಧಗಳು ಸಹ ಇದರ ಎದುರು ಮಕ್ಕಳಾಟಿಕೆಯಂತೆ ಇರಲಿವೆ. ಅದಕ್ಕಿಂತ ಮುಂದೆ ಅವನು ಹೀಗೆ ಹೇಳುತ್ತಾನೆ, ‘ತೈಲ ಉತ್ಪಾದಕ ರಾಷ್ಟ್ರಗಳು ಕಂಪಿಸುವವು, ಜ್ವಾಲಾಮುಖಿಗಳು ಸಕ್ರಿಯವಾಗುವುವು. ಅನೇಕ ವಿಮಾನಗಳು ಕುಸಿದುಬೀಳುವುವು, ತಾಪಮಾನವು ಎಷ್ಟು ಹೆಚ್ಚಾಗುವುದು ಎಂದರೆ ಪೃಥ್ವಿಯ ಎರಡೂ ಧ್ರುವಗಳ ಹಿಮವು ಕರಗಿ ಹೋಗಲಿದೆ. ಇದರಿಂದ ನೀರಿನ ಮಟ್ಟ ಹೆಚ್ಚಾಗುವುದು. ನೀರಿನ ಮೇಲೆ ಎಷ್ಟು ಶವಗಳು ತೇಲುವುವು ಎಂದರೆ ಸಮುದ್ರದ ನೀರು ಕೊಳಚೆಯಂತೆ ಕೆಂಪಾಗಿ ಕಾಣಿಸುವುದು

೭ ಆ. ಸಂತರು

೭ ಆ. ೧ ಪ.ಪೂ. ಗಗನಗಿರಿ ಮಹಾರಾಜರು : ಪ.ಪೂ.ಗಗನಗಿರಿ ಮಹಾರಾಜರು ಮುಂದಿನಂತೆ ಹೇಳಿದ್ದರು, ‘ಮುಂದೆ ಎಷ್ಟು ಕೆಟ್ಟ ಕಾಲ ಬರಲಿದೆ ಎಂದರೆ ಸಂತರಾದ ನಮಗೂ ಈ ಭೂಮಿಯಿಂದ ಬೇಗನೇ ಕಣ್ಣುಮುಚ್ಚಿದರೆ ಒಳ್ಳೆಯದಿತ್ತು ಅನಿಸುತ್ತಿದೆ ಇತರ ಅನೇಕ ಸಂತರು ಸಹ ಇಂತಹದ್ದೇ ಹೇಳಿಕೆಗಳನ್ನು ತಮ್ಮ ಮಾತಿನಲ್ಲಿ ಆಡಿ ತೋರಿಸಿದ್ದಾರೆ.

೭. ಆ ೨ . ಪರಾತ್ಪರ ಗುರು ಡಾ. ಜಯಂತ ಆಠವಲೆ : ಮೂರನೆಯ ಮಹಾಯುದ್ಧವು ಮಹಾಭಯಂಕರವಾಗಿರಲಿದೆ. ಇದರಲ್ಲಿ ಭಾರತವು ಸಹ ಸಿಲುಕಲಿದೆ. ಪರಮಾಣು ಬಾಂಬ್‌ನಿಂದಾಗುವ ಸಂಹಾರವು ಇನ್ನೂ ಭಯಂಕರವಾಗಿರಲಿದೆ. ಊರಿಗೆ ಊರುಗಳು ನಾಶವಾಗಿ ಹೋಗುವುವು. ಮೂರನೆಯ ವಿಶ್ವಯುದ್ಧದ ನಂತರ ಸಂಪೂರ್ಣ ಪೃಥ್ವಿಯನ್ನು ಶುದ್ಧಗೊಳಿಸ ಬೇಕಾಗುವುದು. ಅದಕ್ಕಾಗಿ ಅನೇಕ ಸಂತರ ಅವಶ್ಯಕತೆಯಿದೆ. ಅದಕ್ಕಾಗಿ ಸಾಧಕರು ಸಾಧನೆಯನ್ನು ಹೆಚ್ಚಿಸಬೇಕು.

೭. ಆ ೩. ಕರ್ನಾಟಕದಲ್ಲಿ ಪೂ. ಭಗವಾನ ಮಹಾರಾಜರ ಮಾಧ್ಯಮದಿಂದ ಶ್ರೀ ಹಾಲಸಿದ್ಧನಾಥಜಿಯವರು ಮುಂಬರುವ ಕಾಲದ ಬಗ್ಗೆ ೨೦೧೨ ರಲ್ಲಿ ಮತ್ತು ೨೦೧೯ ರಲ್ಲಿ ಭವಿಷ್ಯವನ್ನು ಹೇಳಿದ್ದರು. ಅದರಲ್ಲಿದ್ದ ಕೆಲವು ಮಹತ್ವದ ಅಂಶಗಳನ್ನು ತಮ್ಮ ಮುಂದಿಡುತ್ತಿದ್ದೇನೆ.

೧. ‘ತ್ಸುನಾಮಿ ಬರಲಿದೆ, ಸುಂಟರಗಾಳಿ ಮತ್ತು ಭೂಕಂಪವಾಗಲಿದೆ. ಜಗತ್ತು ಉರಿದು ಹೋಗುವುದು.

೨. ಭಾರತದ ಮೇಲೆಯೂ ಸಂಕಟಗಳು ಬರುವವು. ಉಗ್ರಗಾಮಿಗಳಿಂದ ದೊಡ್ಡ ಆಕ್ರಮಣಗಳನ್ನು ಮಾಡುವರು. ನರಸಂಹಾರವಾಗುವುದು. ಹಗಲು ಹೊತ್ತಿನಲ್ಲಿ ದರೋಡೆ ಮತ್ತು ಲೂಟಿಗಳಾಗುವವು.

೩. ಮಹಾರಾಷ್ಟ್ರದ ಕೃಷ್ಣಾ ನದಿಯನದಿ ತೀರದಲ್ಲಿ ೯ ಲಕ್ಷ ಬಳೆಗಳು ಒಡೆಯುವವು. (ಭಾವಾರ್ಥ : ಮಹಾರಾಷ್ಟ್ರ ರಾಜ್ಯದ ಕೃಷ್ಣಾ ನದಿಯ ತೀರದಲ್ಲಿ ಮೃತ್ಯುವಿನ ಆಟ ನಡೆಯುವುದು.) ರಕ್ತದ ಹೊಳೆ ಹರಿಯುವುದು.

೩. ನದಿಗಳು ಒಣಗಿ ಹೋಗುವವು. ನೀರಿನ ‘ಕಪ್ ಮಾರಾಟವಾಗುವವು. (ಭಾವಾರ್ಥ : ನೀರು ದುಬಾರಿಯಾಗುವುದು ಹಾಗೆಯೇ ಬೆಲೆಯೇರಿಕೆಯಾಗುವುದು)

೪. ರೋಗರುಜಿನಗಳು ಹೆಚ್ಚಾಗುವವು. ಔಷಧಿಗಳು ಸಿಗಲಾರವು. ಡಾಕ್ಟರರು ಕೈಚೆಲ್ಲುವರು (ಭಾವಾರ್ಥ : ಡಾಕ್ಟರರಿಗೆ ಏನೂ ಮಾಡಲು ಆಗದಿರುವುದು) ನಡೆದಾಡುವ-ಮಾತನಾಡುವ ಮನುಷ್ಯನ ಪ್ರಾಣ ಹೋಗುವುದು.

– ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.