
‘ಒಮ್ಮೆ ಗೋವಾದ, ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮಕ್ಕೆ ಓರ್ವ ಗುರೂಜಿಯವರು ಬಂದಿದ್ದರು. ಅವರ ವಾಸ್ತುಶಾಸ್ತ್ರ, ಆಯುರ್ವೇದ, ವಿಶಿಷ್ಟ ಮಾದರಿಯ ಕಲ್ಲುಗಳು ಮುಂತಾದ ವಿವಿಧ ವಿಷಯಗಳ ಬಗ್ಗೆ ಆಳವಾದ ಅಭ್ಯಾಸವಿತ್ತು. ಆ ಗುರೂಜಿಯವರು ಕೆಟ್ಟ ಶಕ್ತಿಗಳ ಆಕ್ರಮಣಗಳನ್ನು ದೂರ ಮಾಡಲು ಪರಾತ್ಪರ ಗುರು ಡಾಕ್ಟರರ ಕೋಣೆಯಲ್ಲಿ ವಿವಿಧ ದಿಕ್ಕುಗಳಲ್ಲಿ ಸ್ಫಟಿಕಗಳನ್ನು ಇಡಲು ಹೇಳಿದ್ದರು. ಪರಾತ್ಪರ ಗುರುದೇವರು ನನಗೆ, “ಈ ಸ್ಫಟಿಕವನ್ನು ಕೈಯಲ್ಲಿ ಹಿಡಿದು ಸೂಕ್ಷ್ಮದಲ್ಲಿ ಏನು ಅರಿವಾಗುತ್ತದೆಯೆಂದು ನೋಡು !”, ಎಂದು ಹೇಳಿದರು. ಅದರ ನಂತರ ನಾನು ಆ ರೀತಿ ಪ್ರಯೋಗ ಮಾಡಿದೆನು ಹಾಗೂ ಅವರಲ್ಲಿ “ಸ್ಫಟಿಕದಿಂದ ತೊಂದರೆದಾಯಕ ಅಥವಾ ಒಳ್ಳೆಯ ಹೀಗೆ ಏನೂ ಅರಿವಾಗುವುದಿಲ್ಲ. ಯೋಗ್ಯ ಏನಿದೆ ?” ಎಂದು ಕೇಳಿದೆನು. ಆಗ ಅವರು, “ನಿನ್ನ ಉತ್ತರವು ಸರಿಯಾಗಿದೆ”, ಎಂದು ಹೇಳಿದರು. ಅದರ ನಂತರ ನಾನು ಪರಾತ್ಪರ ಗುರು ಡಾಕ್ಟರರಿಗೆ, “ಗುರುಜಿಯವರು ಹೇಳಿದ ಉಪಾಯಗಳ ಯಾವುದೇ ಪರಿಣಾಮವಾಗುವುದಿಲ್ಲವೆಂದರೂ, ನಾವು ಅವರು ಹೇಳಿದಂತೆ ಉಪಾಯವನ್ನು ಮಾಡಿದ್ದೇವೆ. ಅದರ ಹಿಂದಿನ ಕಾರಣವೇನು ?”, ಎಂದು ಕೇಳಿದೆನು. ಆಗ ಅವರು, “ಈ ಮೂಲಕ ನಮ್ಮ ಒಂದು ಹೊಸ ವಿಷಯದ ಅಧ್ಯಯನವಾಗಲಿದೆ. ಮುಂದೆ ಈ ಅಧ್ಯಯನದ ಮುಂಬರುವ ಗ್ರಂಥದಲ್ಲಿ ಒಂದು ಪುಟವಿರಲಿದೆ. ಅದಕ್ಕಾಗಿ ಇದೆಲ್ಲವೂ ನಡೆದಿದೆ”, ಎಂದು ಹೇಳಿದರು. ಇದನ್ನು ಕೇಳಿ ನನಗೆ ಪರಾತ್ಪರ ಗುರು ಡಾಕ್ಟರರ ಅಪಾರ ಅಧ್ಯಯನ ನಿಷ್ಠತೆಯ ಬಗ್ಗೆ ಆಶ್ಚರ್ಯವೆನಿಸಿತು. ಅದರಲ್ಲಿ ವಿಶೇಷವೆಂದರೆ ‘ಪರಾತ್ಪರ ಗುರು ಡಾಕ್ಟರರಿಗೆ ತುಂಬಾ ಶಾರೀರಿಕ ದಣಿವಿದ್ದರೂ ಅವರು ಪ್ರತಿಯೊಂದು ವಿಷಯದ ಕಡೆಗೆ ಅಧ್ಯಯನ ನಿಷ್ಠತೆಯಿಂದ ಹಾಗೂ ಸಮಷ್ಟಿಯ ದೃಷ್ಟಿಯಿಂದ ನೋಡುತ್ತಾರೆ’, ಎಂದು ಗಮನಕ್ಕೆ ಬಂದಿತು.’ – ಶ್ರೀ. ರಾಮ ಹೊನಪ, ಸನಾತನ ಆಶ್ರಮ, ಗೋವಾ.
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !