ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ

ಪೂ. ರಮಾನಂದ ಗೌಡ

ಕೊರೋನಾದಂತಹ ಸಾಂಕ್ರಾಮಿಕ ರೋಗವಾಗಿರಬಹುದು ಅಥವಾ ಇತರ ನೈಸರ್ಗಿಕ ವಿಕೋಪವಾಗಲಿ ಪ್ರತಿಯೊಬ್ಬರೂ ತಮ್ಮದೇ ಪರಿಯಲ್ಲಿ ಅದರ ಕಾರಣಗಳನ್ನು ಹುಡುಕುತ್ತಿದ್ದಾರೆ. ವೈಜ್ಞಾನಿಗಳಾಗಿದ್ದರೆ ‘ಈ ವಿಪತ್ತು ಏಕೆ ಬಂದಿತು ?, ‘ಅದರ ಪರಿಣಾಮವೇನು? ಎಂದು ತರ್ಕ ಮಾಡುವನು. ಪತ್ರಕರ್ತರು ತಮ್ಮ ತರ್ಕ ಮಂಡಿಸುತ್ತಾರೆ; ಆದರೆ ವಿಪತ್ತಿಗೆ ಆಧ್ಯಾತ್ಮಿಕ ಕಾರಣಗಳೇನು (ದೃಷ್ಟಿಕೋನ) ಎಂಬುದನ್ನು ತಿಳಿಯಬೇಕಿದೆ; ಏಕೆಂದರೆ ಆಧ್ಯಾತ್ಮಿಕ ದೃಷ್ಟಿಕೋನವಿಲ್ಲದೆ, ನೀವು ವಿಪತ್ತುಗಳ ನಿಜವಾದ ಕಾರಣವನ್ನು ಅರ್ಥಮಾಡಿಕೊಳ್ಳಲಾಗದು.

೬. ಆಧ್ಯಾತ್ಮಿಕ ದೃಷ್ಟಿಕೋನದಿಂದ ಜಾಗತಿಕ ಸಂಕಟಗಳು ಏಕೆ ಬರುತ್ತವೆ ?

೬ ಅ. ಆಧ್ಯಾತ್ಮಿಕ ದೃಷ್ಟಿಕೋನದ ವೈಶಿಷ್ಟ್ಯಗಳು ! : ಯಾವುದೇ ದೇಶದ ಸರಕಾರ ಅಥವಾ ಆರ್ಥಿಕ ಮಹಾಶಕ್ತಿಗಳು ಸೃಷ್ಟಿಯ ಸಂಚಲನೆ ಮಾಡುವುದಿಲ್ಲ. ಸೃಷ್ಟಿಯನ್ನು ಪರಮಾತ್ಮನು ಸಂಚಾಲನೆ ಮಾಡುತ್ತಾನೆ. ಈ ಸಂಚಾಲನೆಯ ವಿಜ್ಞಾನವನ್ನು ನಾವು ತಿಳಿದುಕೊಳ್ಳದಿದ್ದರೆ, ಅದು ಜಾಗತಿಕ ವಿಪತ್ತು ಮತ್ತು ಅದಕ್ಕೆ ಸೂಕ್ತ ಉಪಾಯಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು ? ನಮ್ಮ ಸೌಭಾಗ್ಯವೆಂದರೆ ನಮ್ಮ (ಹಿಂದೂ) ಧರ್ಮಗ್ರಂಥಗಳಲ್ಲಿ ಸೃಷ್ಟಿಯ ವಿಷಯ ಮತ್ತು ಅದರ ಸಂಚಾಲನೆಯ ಸ್ಥೂಲ ಅಧ್ಯಯನದಿಂದ ಸೂಕ್ಷ್ಮವಾಗಿ ಮತ್ತು ಸ್ಪಷ್ಟವಾಗಿ ಮಾಹಿತಿ ತಿಳಿಸಲಾಗಿದೆ. ‘ಕೌಶಿಕಪದ್ಧತಿ ಈ ಗ್ರಂಥದಲ್ಲಿ ವಿಪತ್ತಿನ ಕಾರಣಗಳ ವರ್ಣನೆ ಇದೆ.

೬ ಆ. ಉತ್ಪತ್ತಿ, ಸ್ಥಿತಿ ಮತ್ತು ಲಯವು ಕಾಲಚಕ್ರದ ನಿಯಮಗಳು : ಯುಗಪರಿವರ್ತನೆಯು ಈಶ್ವರನಿರ್ಮಿತ ಸೃಷ್ಟಿಯ ಒಂದು ನಿಯಮವಾಗಿದೆ. ಅದರಲ್ಲಿ ಯಾವುದಾದರೂ ವಸ್ತುವು ಉತ್ಪತ್ತಿಯಾಗುತ್ತದೆ, ಅದು ಸ್ವಲ್ಪ ಸಮಯದವರೆಗೆ ಇರುತ್ತದೆ ಮತ್ತು ಅಂತಿಮವಾಗಿ ಅದು ನಾಶವಾಗುತ್ತದೆ. ಇದನ್ನು ಉತ್ಪತ್ತಿ, ಸ್ಥಿತಿ ಮತ್ತು ಲಯದ ನಿಯಮ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಹಿಮಾಲಯ ಪರ್ವತ ಶ್ರೇಣಿ ಹುಟ್ಟಿಕೊಂಡಿತು ಕೆಲವು ಕಾಲದವರೆಗೆ ಇರುತ್ತದೆ ಮತ್ತು ಅಂತಿಮವಾಗಿ ನಾಶವಾಗುತ್ತದೆ.

ಅಂದರೆ, ಈ ವಿಶ್ವದಲ್ಲಿ ಯಾವುದೇ ವಸ್ತು ಉತ್ಪತ್ತಿಯಾದಾಗ, ಸ್ವಲ್ಪ ಸಮಯ ಉಳಿದುಕೊಂಡ ನಂತರ ಅದು ಯಾವುದೇ ಕ್ಷಣದಲ್ಲಿ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಸೃಷ್ಟಿಕರ್ತ ಮಾತ್ರ, ಅಂದರೆ ಈಶ್ವರ ಮಾತ್ರ ಚಿರಂತನ ಮತ್ತು ಅಪರಿವರ್ತನಿಯನಾಗಿದ್ದಾನೆ. ಈ ನಿಯಮದ ಪ್ರಕಾರ, ಪ್ರಸ್ತುತ ಉದ್ವಿಗ್ನತೆಯು ಕಾಲದ ಚಕ್ರದಲ್ಲಿದ ಬದಲಾವಣೆಯ ಕಾಲವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ವಿಪತ್ತುಗಳು ಜಗತ್ತನ್ನು ಸಮತೋಲನದಲ್ಲಿಡುತ್ತವೆ.

ಅದರಲ್ಲಿನ ಒಂದು ಮಾರ್ಗವೆಂದರೆ ನೈಸರ್ಗಿಕ ವಿಪತ್ತು. ಈ ವಿನಾಶದ ಪ್ರಕ್ರಿಯೆಯಲ್ಲಿ ಮನುಕುಲವೂ ತನ್ನ ವರ್ತನೆ ಮತ್ತು ನಡವಳಿಕೆ ಮೂಲಕ ಸಹಕರಿಸುತ್ತದೆ, ಇದು ಯುದ್ಧದ ರೂಪದಲ್ಲಿ ನಾಶಪಡಿಸುತ್ತದೆ. ಇದು ಶೇ. ೭೦ ರಷ್ಟು ಇದೆ. ಈ ಚಕ್ರದ ಉತ್ಪತ್ತಿ-ಸ್ಥಿತಿ-ಲಯ (ವಿನಾಶ) ಈ ಕಾಲಚಕ್ರದ ನಿಯಮಗಳ ಪ್ರಕಾರ ರಜ-ತಮ ಗುಣಿ ಜೀವಗಳು ಅತ್ಯಧಿಕ ಪ್ರಮಾಣದಲ್ಲಿ  ಜೀವಗಳು ಕಳೆದುಕೊಳ್ಳುತ್ತವೆ. ಇದರಿಂದ ವಾತಾವರಣವು ಒಂದು ರೀತಿಯಲ್ಲಿ ಶುದ್ಧವಾಗುತ್ತದೆ. ಅನೇಕ ಭವಿಷ್ಯವಾಣಿ ನುಡಿಯುವವರು ತಮ್ಮ ಭವಿಷ್ಯದಲ್ಲಿ ಈ ಕಾಲದ ಬಗ್ಗೆ ನುಡಿದಿದ್ದಾರೆ.

೬ ಇ. ಮನುಷ್ಯನ ಕರ್ಮ ಮತ್ತು ಸಮಷ್ಟಿ ಪ್ರಾರಬ್ಧ ! : ವರ್ತಮಾನ ಕಲಿಯುಗದಲ್ಲಿ ಮನುಷ್ಯನ ಶೇ. ೬೫ ರಷ್ಟು ಜೀವನವು ಪ್ರಾರಬ್ಧಕ್ಕನುಸಾರ ಮತ್ತು ಶೇ. ೩೫ ರಷ್ಟು ಕ್ರಿಯಮಾಣಕರ್ಮಕ್ಕನುಸಾರ ನಡೆಯುತ್ತದೆ. ಶೇ. ೩೫ ರಷ್ಟು ಕ್ರಿಯಮಾಣದ ಮೂಲಕ ಆಗುವ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಫಲವನ್ನು ಪ್ರಾರಬ್ಧದ ರೂಪದಿಂದ ಅನುಭವಿಸಬೇಕಾಗುತ್ತದೆ. ವರ್ತಮಾನದಲ್ಲಿ ಧರ್ಮಶಿಕ್ಷಣ ಮತ್ತು ಧರ್ಮಾಚರಣೆಯ ಅಭಾವದಿಂದ ಸಮಾಜದ ಹೆಚ್ಚಿನ ಜನರಲ್ಲಿ ಸ್ವಾರ್ಥ ಅಥವಾ ತಮೋಗುಣವು ಹೆಚ್ಚಾಗುತ್ತಿರುವುದರಿಂದ ಸಮಾಜ, ರಾಷ್ಟ್ರ ಮತ್ತು ಧರ್ಮ ಹಾನಿಯ ಕಾರ್ಯವಾಗುತ್ತಿದೆ. ಈ ತಪ್ಪು ಕರ್ಮವನ್ನು ಸಂಪೂರ್ಣ ಸಮಾಜವು ಭೋಗಿಸಬೇಕಾಗುತ್ತದೆ; ಏಕೆಂದರೆ ಸಮಾಜವು ಅದನ್ನು ದುರ್ಲಕ್ಷಿಸುತ್ತದೆ. ಇದೇ ರೀತಿ ಸಮಷ್ಟಿಯ ಕೆಟ್ಟ ಕರ್ಮಗಳ ಫಲವನ್ನು ಸಹ ನೈಸರ್ಗಿಕ ಆಪತ್ತುಗಳ ರೂಪದಲ್ಲಿ ಸಹಿಸಬೇಕಾಗುತ್ತದೆ. ಹೇಗೆ ಬೆಂಕಿಯಲ್ಲಿ ‘ಒಣಗಿದ ಕಟ್ಟಿಗೆಯೊಂದಿಗೆ ಒದ್ದೆಕಟ್ಟಿಗೆಯೂ ಸುಟ್ಟುಹೋಗುತ್ತದೆಯೋ ಇದು ಅದೇ ರೀತಿಯಾಗಿದೆ.

ಈ ರೀತಿಯಲ್ಲಿ ಸಮಾಜ, ಧರ್ಮ ಮತ್ತು ರಾಷ್ಟ್ರ ಇವುಗಳ ಸಮಷ್ಟಿ ಪ್ರಾರಬ್ಧವನ್ನು ಸಹ ಪರಿಗಣಿಸಲಾಗಿದೆ. ಸಮಾಜದಲ್ಲಿ ಆಧ್ಯಾತ್ಮಿಕ ಅಪಾವಿತ್ರ್ಯ ಹೆಚ್ಚಾದುದರಿಂದ ೨೦೧೩ ರಿಂದ ೨೦೨೩ ರ ತನಕದ ಕಾಲಖಂಡದಲ್ಲಿ ಮನುಷ್ಯಕುಲವು ಕಠಿಣ ಸಮಷ್ಟಿ ಪ್ರಾರಬ್ಧವನ್ನು ಭೋಗಿಸಬೇಕಾಗುತ್ತದೆ.

೬ ಉ. ಪ್ರಕೃತಿಯು ಹೇಗೆ ಕಾರ್ಯ ಮಾಡುತ್ತದೆ ? : ಹೇಗೆ ಧೂಳು ಮತ್ತು ಹೊಗೆಯಿಂದ ಸ್ಥೂಲ ಸ್ತರದಲ್ಲಿ ಪ್ರದೂಷಣೆಯಾಗುತ್ತದೆಯೋ ಹಾಗೆಯೇ ಬುದ್ಧಿಗೆ ಮೀರಿದ ಸೂಕ್ಷ್ಮ ಸ್ತರದಲ್ಲಿ ರಜ-ತಮದ ಪ್ರದೂಷಣೆಯಾಗುತ್ತದೆ. ಸಮಾಜದಲ್ಲಿ ಎಲ್ಲೆಡೆ ಹರಡಿರುವ ಅಧರ್ಮ ಮತ್ತು ಸಾಧನೆಯ ಅಭಾವದಿಂದ ಮಾನವನಲ್ಲಿ ರಜ-ತಮ ಹೆಚ್ಚಾಗಿರುವುದರಿಂದ ವಾತಾವರಣದಲ್ಲಿ ಸಹ ರಜ-ತಮದಲ್ಲಿ ಹೆಚ್ಚಳವಾಗಿದೆ ಹಾಗೂ ಸೃಷ್ಟಿಯ (ಪ್ರಕೃತಿಯ) ರಕ್ಷಣೆಯಾಗುವುದಿಲ್ಲ. ರಜ-ತಮ ಹೆಚ್ಚಾದುದರ ಅರ್ಥವೇನೆಂದರೆ, ಸೂಕ್ಷ್ಮಸ್ತರದಲ್ಲಿ ಇಡೀ ವಿಶ್ವದಲ್ಲಿ ಬುದ್ಧಿಗೆಮೀರಿದ ಆಧ್ಯಾತ್ಮಿಕ ಪ್ರದೂಷಣೆಯಾಗುವುದು. ಹೇಗೆ ನಾವು ವಾಸಿಸುತ್ತಿರುವ ಮನೆಯಲ್ಲಿ ಧೂಳು-ಕಸ ಇದ್ದಲ್ಲಿ ಅದನ್ನು ನಾವು ಆಯಾ ಸಮಯದಲ್ಲಿ ಸ್ಥೂಲರೂಪದಲ್ಲಿ ತೆಗೆದುಹಾಕಿ ಸ್ವಚ್ಛ ಮಾಡುತ್ತೇವೆಯೋ ಅದೇ ರೀತಿಯಲ್ಲಿ ಸೃಷ್ಟಿ ಅಂದರೆ ಪ್ರಕೃತಿಯು ಸಹ ಸೂಕ್ಷ್ಮ ಸ್ತರದಲ್ಲಿ ವಾತಾವರಣದಲ್ಲಿನ ರಜ-ತಮದ ಪ್ರದೂಷಣೆಯನ್ನು ದೂರಗೊಳಿಸಲು ಮತ್ತು ಸ್ವಚ್ಛಗೊಳಿಸಲು ಕಾರ್ಯನಿರತವಾಗುತ್ತದೆ.

ವಾಸ್ತವದಲ್ಲಿ ಯಾವಾಗ ವಾತಾವರಣದಲ್ಲಿ ರಜ-ತಮದ ತಕ್ಕಡಿ ಭಾರವಾಗುತ್ತದೆಯೋ ಆಗ ಈ ಹೆಚ್ಚುವರಿ ರಜ-ತಮವು ಐದು ವೈಶ್ವಿಕ ತತ್ತ್ವಗಳ ಮೂಲಕ (ಪಂಚಮಹಾಭೂತಗಳ) ಪ್ರಭಾವವನ್ನು ಬೀರುತ್ತದೆ. ಈ ಪಂಚಮಹಾಭೂತಗಳ ಮಾಧ್ಯಮದಿಂದ ಭೂಕಂಪ, ನೆರೆ, ಜ್ವಾಲಾಮುಖಿ, ಸುಂಟರಗಾಳಿ ಮುಂತಾದ ಪ್ರಾಕೃತಿಕ ಸಂಕಟಗಳಲ್ಲಿ ವೃದ್ಧಿಯಾಗುತ್ತದೆ. ಮೂಲಭೂತ ಆಪತತ್ತ್ವ ಪ್ರಭಾವಿತವಾದಾಗ ನೀರಿನ ಮಟ್ಟ ಹೆಚ್ಚಳ (ನೆರೆ ಅಥವಾ ಹಿಮಪಾತವಾಗುವುದು ಇತ್ಯಾದಿ) ಆಗುತ್ತದೆ. – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.